ಪ್ರತಿ ವರ್ಷದ ಮಳೆಗಾಲದಲ್ಲೂ ಗಿಡ ನೆಡುತ್ತಾರೆ. ನೆಟ್ಟ ಗಿಡಗಳು ಏನಾಗುತ್ತವೇ ?
ಚನ್ನಪಟ್ಟಣ:ಮೇ/೨೩/೨೦/ಶನಿವಾರ. ತಾಲ್ಲೂಕಿನ ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ಪ್ರತಿ ವರ್ಷದ ಮಳೆಗಾಲದಲ್ಲಿಯೂ ರಸ್ತೆ ಬದಿ, ಗೋಮಾಳ, ಕೆಲ ಉದ್ಯಾನವನ ಸೇರಿದಂತೆ ಅನೇಕ ಕಡೆ ಸಸಿಗಳನ್ನು ನೆಡುತ್ತಿದ್ದು ಈ ವರ್ಷದ ಮಳೆಗಾಲದಲ್ಲಿಯೂ ಸಹ ಎಲ್ಲಾ ಕಡೆ ನೆಡುತ್ತಿದ್ದಾರೆ. ಆದರೆ ಪ್ರತಿ ವರ್ಷವೂ ಅದೇ ಜಾಗದಲ್ಲಿ ಗಿಡ ನೆಡುತ್ತಿದ್ದು, ಹಿಂದಿನ ವರ್ಷಗಳ ಗಿಡಗಳು ಏನಾದವೂ ? ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಒಂದು ಗಿಡ ನೆಟ್ಟು ಪೋಸಿಸಲು ಇಲಾಖೆ ವತಿಯಿಂದ ವರ್ಷಕ್ಕೆ ಇಂತಿಷ್ಟು ಹಣ ಎಂದು ಬಿಡುಗಡೆಯಾಗುತ್ತದೆ. ಇದರಲ್ಲಿ ಗುಣಿ ತೋಡಲು, ಗೊಬ್ಬರ ಹಾಕಲು, ಬೇಸಿಗೆಯಲ್ಲಿ ನೀರುಣಿಸಲು, ಗಿಡಕ್ಕೆ ಊರುಗೋಲು ನೆಡಲು ಮತ್ತು ಜಾನುವಾರುಗಳು ತಿನ್ನದಂತೆ ಕಾಪಿಡುವುದು ಸೇರಿ ಹಣ ಬಿಡುಗಡೆ ಮಾಡಿರುತ್ತಾರೆ. ಆದರೂ ಪ್ರತಿ ವರ್ಷವೂ ಅದೇ ಜಾಗದಲ್ಲಿ ಗಿಡ ನೆಡುತ್ತಾರೆ ಹೇಗೆ !?
ಪ್ರತಿ ವರ್ಷದ ಮಳೆಗಾಲದಲ್ಲಿಯೂ ಗಿಡ ನೆಡುತ್ತಾರೆ, ಈ ವರ್ಷವೂ ಅದೇ ಹಳೆಯ ಜಾಗದಲ್ಲಿ ಗಿಡ ನೆಡುತ್ತಿದ್ದು, ಉಳಿದುಕೊಂಡಿರುವ ಗಿಡಗಳನ್ನು ಕಿತ್ತೆಸೆದು, ಹೊಸ ಗಿಡಗಳನ್ನು ನೆಡುತ್ತಿದ್ದಾರೆ. ಇದರ ಮರ್ಮವೇನು ? ಕೇವಲ ಇಲಾಖೆಯ ಹಣ ಪಡೆಯಲೋಸುಗ ಈ ರೀತಿಯ ಕೆಲಸ ಮಾಡುತ್ತಿದ್ದಾರೆಯೇ ? ಇಲಾಖೆಯಲ್ಲಿ ಈ ರೀತಿಯಾದ ಕಾನೂನು ಇದೆಯೇ ? ಎಂದು ಪ್ರಶ್ನಿಸುತ್ತಾರೆ ತಾಲೂಕಿನ ಅರಳಾಳುಸಂದ್ರದ ರೈತ ರಾಜೇಶ್ ಎಂಬುವವರು.
*ಸರ್ಕಾರದ ಆದೇಶ ಇದೆ ಹಾಗೂ ಅದರಿಂದ ಹಣ ಬಿಡುಗಡೆ ಆಗುತ್ತಿದೆ, ಹಣ ವಾಪಸು ಕಳುಹಿಸಲಾಗುವುದಿಲ್ಲ. ಗುತ್ತಿಗೆದಾರರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಗಿಡ ನೆಡದೇ, ನೆಟ್ಟ ಗಿಡವನ್ನು ಪೋಷಿಸಿ ಉಳಿಸುವ ಕೆಲಸಕ್ಕೆ ಅಧಿಕಾರಿಗಳು ಗಮನ ನೀಡಬೇಕಾಗಿದೆ.*
ಪ್ರತಿ ವರ್ಷವೂ ಪಿಗ್ಗಿ ಬಿದ್ದ (ಸತ್ತು ಹೋಗಿರುವ) ಗಿಡಗಳ ಪೈಕಿ ಶೇಕಡಾ ೧೦ ರಷ್ಟು ಗಿಡಗಳನ್ನು ನೆಟ್ಟು ಪೋಷಿಸಲು ಅವಕಾಶವಿದೆ. ಎಲ್ಲಾ ಗಿಡಗಳನ್ನು ಕಿತ್ತು ನೆಡುವುದಿಲ್ಲ. ಕಳೆದ ಬಾರಿ ನೆಟ್ಟು ಬೆಳವಣಿಗೆ ಕಾಣದ ಒಂದೆರಡು ಗಿಡಗಳನ್ನು ಹಾಗೆ ಮಾಡಿರಬಹುದು. ನರೇಗಾ ಅಡಿಯಲ್ಲಿ ಈ ವರ್ಷ ಮೂವತ್ತು ಕಿಮೀ ಉದ್ದ ಗಿಡಗ ನೆಡುತ್ತೇವೆ. ಒಂದು ಗಿಡಕ್ಕೆ ತೊಂಭತ್ತು ರೂಪಾಯಿ ಖರ್ಚು ಬೀಳುತ್ತಿದ್ದು ಕಾಪಾಡುವ ಹೊಣೆಯೂ ನಮ್ಮ ಮೇಲಿದೆ.ಕಾಪಾಡುತ್ತೇವೆ.
*ಚೈತ್ರಾ, ಸಾಮಾಜಿಕ ವಲಯ ಅರಣ್ಯಾಧಿಕಾರಿ ಚನ್ನಪಟ್ಟಣ.*
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು