ತಾಳೆಯೋಲೆ ೨೩೭: ಪೂರ್ವ ದಿಕ್ಕಿನ ಪ್ರಾಮುಖ್ಯತೆ ಏನು ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*
ಪೂರ್ವ ದಿಕ್ಕಿನ ಪ್ರಾಮುಖ್ಯತೆ ಏನು ?
ನಾಲ್ಕು ದಿಕ್ಕುಗಳಲ್ಲಿ ಪೂರ್ವ ದಿಕ್ಕು ಹೆಚ್ಚಿನ ಪ್ರಾಧಾನ್ಯತೆಯನ್ನು ಹೊಂದಿದೆ. ಭೂಮಿಸುತ್ತು ದಕ್ಷಿಣದಿಂದ ಉತ್ತರಕ್ಕೆ ಹಾಗೂ ಪೂರ್ವದಿಂದ ಪಶ್ಚಿಮಕ್ಕೆ ಆಯಸ್ಕಾಂತ ಶಕ್ತಿಗಳು ಪರಿಭ್ರಮಮಿಸುತ್ತಿರುತ್ತವೆ. ಪೂರ್ವದಿಂದ ಪಶ್ಚಿಮದ ಕಡೆಗೆ ಪ್ರವಹಿಸುವ ಶಕ್ತಿ ನಮ್ಮ ಶರೀರಕ್ಕೆ ಹೆಚ್ಚು ಆರೋಗ್ಯಕರವಾಗಿದೆ. ಸೂರ್ಯನು, ಗ್ರಹಗಳು ಹಾಗೂ ನಕ್ಷತ್ರಗಳು ಅವುಗಳ ಅಯಸ್ಕಾಂತ ಶಕ್ತಿಗಳನ್ನು ಭೂಮಿಯ ಮೇಲೆ ನಿರಂತರವಾಗಿ ಮೇಲೆ ಸೂಚಿಸಿದ ವಿಧವಾಗಿ ಪ್ರಸರಿಸುತ್ತಾ, ಭೂಮಿಯ ಮೇಲೆ ಜೀವನಕ್ಕೆ ಅನುಕೂಲತೆಯನ್ನು ಉಂಟು ಮಾಡುತ್ತದೆ. ಈ ಶಕ್ತಿ ತರಂಗಗಳು ಋತುಗಳ ಬದಲಾವಣೆಗೆ ಭೂಮಿಯ ಸಾರವನ್ನು ಹಾಗೂ ವೃಕ್ಷ ಮತ್ತು ಜಲವನ್ನು ಕಾಪಾಡುವುದಕ್ಕೆ ಸಹಾಯಕವಾಗುತ್ತದೆ.
ಈ ಕಾರಣದಿಂದ ಪೂರ್ವ ದಿಕ್ಕಿಗೆ ತಲೆ ಇಟ್ಟು ನಿದ್ರಿಸುವುದು ಶ್ರೇಷ್ಠ ವೆಂದು ಹೇಳಲಾಗಿದೆ. ದೇವರ ಆರಾಧನೆಯಲ್ಲೂ ಹಾಗೂ ಶುಭಕರವಾದ ಕರ್ಮಗಳಲ್ಲಿಯೂ ದೀಪವನ್ನು ಪೂರ್ವ ದಿಕ್ಕಿಗೆ ಬತ್ತಿ ಯನ್ನು ಇಟ್ಟು ಬೆಳಗಿಸಬೇಕು. ಹಾಗೆಯೇ ಮನೆಯ ಮುಖದ್ವಾರವು ಪೂರ್ವದ ಕಡೆ ಇರುವುದು ಉತ್ತಮ. ಅದಕ್ಕೆಂದು ದೇವಾಲಯಗಳು ಹಾಗೂ ಮನೆಯಲ್ಲಿ ಏರ್ಪಾಡು ಮಾಡುವ ದೇವರ ವಿಗ್ರಹಗಳು ಪೂರ್ವ ದಿಕ್ಕಿಗೆ ಮುಖ ಮಾಡಿಕೊಂಡಿರುವುದು ಶುಭಕರವೆಂದು ಭಾವಿಸಲಾಗಿದೆ.
ಎಲ್ಲಾ ರೀತಿಯ ಶುಭ ಕರ್ಮಗಳನ್ನು ಪೂರ್ವ ದಿಕ್ಕಿಗೆ ಮುಖಮಾಡಿ ಕುಳಿತು ಮಾಡುವುದು ಪ್ರಯೋಜನಕರವು. ವಿವಾಹ, ಹುಟ್ಟಿದ ಹಬ್ಬದ ಊಟದ ಕಾರ್ಯಕ್ರಮಗಳು ಹಾಗೂ ಹೊಸ ಬಟ್ಟೆಗಳನ್ನು ಧರಿಸುವಾಗ ಪೂರ್ವಾಭಿಮುಖವಾಗಿ ಮುಖವನ್ನು ಇಡಬೇಕೆಂದು ಹಿರಿಯರು ಹೇಳಿರುವರು. ಮನೆಗೆ ಪೂರ್ವ ದಿಕ್ಕಿಗೆ ಬಾವಿಯು ಹಾಗೂ ಗ್ರಾಮಕ್ಕೆ ಪೂರ್ವ ದಿಕ್ಕಿಗೆ ಕೆರೆಗಳನ್ನು ನಿರ್ಮಿಸುವುದು ಒಳ್ಳೆಯದಲ್ಲವೆಂದು ನಮ್ಮ ನಂಬಿಕೆ.
*ಸಂಗ್ರಹ ಮತ್ತು ಪ್ರಚಾರ;*
*ಗೋ ರಾ ಶ್ರೀನಿವಾಸ...*
*ಮೊ:9845856139.*
Hide quoted text
---------- Forwarded message ---------
From: goraa srinivasa <goraashreegowda@gmail.com>
Date: Fri, May 22, 2020, 15:13
Subject:
To: sutha ramegowda <bayaluseeme51510@gmail.com>
*ತಾಳೆಯೋಲೆ ೨೩೭*
*ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*
*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*
*ಪೂರ್ವ ದಿಕ್ಕಿನ ಪ್ರಾಮುಖ್ಯತೆ ಏನು ?*
ನಾಲ್ಕು ದಿಕ್ಕುಗಳಲ್ಲಿ ಪೂರ್ವ ದಿಕ್ಕು ಹೆಚ್ಚಿನ ಪ್ರಾಧಾನ್ಯತೆಯನ್ನು ಹೊಂದಿದೆ. ಭೂಮಿಸುತ್ತು ದಕ್ಷಿಣದಿಂದ ಉತ್ತರಕ್ಕೆ ಹಾಗೂ ಪೂರ್ವದಿಂದ ಪಶ್ಚಿಮಕ್ಕೆ ಆಯಸ್ಕಾಂತ ಶಕ್ತಿಗಳು ಪರಿಭ್ರಮಮಿಸುತ್ತಿರುತ್ತವೆ. ಪೂರ್ವದಿಂದ ಪಶ್ಚಿಮದ ಕಡೆಗೆ ಪ್ರವಹಿಸುವ ಶಕ್ತಿ ನಮ್ಮ ಶರೀರಕ್ಕೆ ಹೆಚ್ಚು ಆರೋಗ್ಯಕರವಾಗಿದೆ. ಸೂರ್ಯನು, ಗ್ರಹಗಳು ಹಾಗೂ ನಕ್ಷತ್ರಗಳು ಅವುಗಳ ಅಯಸ್ಕಾಂತ ಶಕ್ತಿಗಳನ್ನು ಭೂಮಿಯ ಮೇಲೆ ನಿರಂತರವಾಗಿ ಮೇಲೆ ಸೂಚಿಸಿದ ವಿಧವಾಗಿ ಪ್ರಸರಿಸುತ್ತಾ, ಭೂಮಿಯ ಮೇಲೆ ಜೀವನಕ್ಕೆ ಅನುಕೂಲತೆಯನ್ನು ಉಂಟು ಮಾಡುತ್ತದೆ. ಈ ಶಕ್ತಿ ತರಂಗಗಳು ಋತುಗಳ ಬದಲಾವಣೆಗೆ ಭೂಮಿಯ ಸಾರವನ್ನು ಹಾಗೂ ವೃಕ್ಷ ಮತ್ತು ಜಲವನ್ನು ಕಾಪಾಡುವುದಕ್ಕೆ ಸಹಾಯಕವಾಗುತ್ತದೆ.
ಈ ಕಾರಣದಿಂದ ಪೂರ್ವ ದಿಕ್ಕಿಗೆ ತಲೆ ಇಟ್ಟು ನಿದ್ರಿಸುವುದು ಶ್ರೇಷ್ಠ ವೆಂದು ಹೇಳಲಾಗಿದೆ. ದೇವರ ಆರಾಧನೆಯಲ್ಲೂ ಹಾಗೂ ಶುಭಕರವಾದ ಕರ್ಮಗಳಲ್ಲಿಯೂ ದೀಪವನ್ನು ಪೂರ್ವ ದಿಕ್ಕಿಗೆ ಬತ್ತಿ ಯನ್ನು ಇಟ್ಟು ಬೆಳಗಿಸಬೇಕು. ಹಾಗೆಯೇ ಮನೆಯ ಮುಖದ್ವಾರವು ಪೂರ್ವದ ಕಡೆ ಇರುವುದು ಉತ್ತಮ. ಅದಕ್ಕೆಂದು ದೇವಾಲಯಗಳು ಹಾಗೂ ಮನೆಯಲ್ಲಿ ಏರ್ಪಾಡು ಮಾಡುವ ದೇವರ ವಿಗ್ರಹಗಳು ಪೂರ್ವ ದಿಕ್ಕಿಗೆ ಮುಖ ಮಾಡಿಕೊಂಡಿರುವುದು ಶುಭಕರವೆಂದು ಭಾವಿಸಲಾಗಿದೆ.
ಎಲ್ಲಾ ರೀತಿಯ ಶುಭ ಕರ್ಮಗಳನ್ನು ಪೂರ್ವ ದಿಕ್ಕಿಗೆ ಮುಖಮಾಡಿ ಕುಳಿತು ಮಾಡುವುದು ಪ್ರಯೋಜನಕರವು. ವಿವಾಹ, ಹುಟ್ಟಿದ ಹಬ್ಬದ ಊಟದ ಕಾರ್ಯಕ್ರಮಗಳು ಹಾಗೂ ಹೊಸ ಬಟ್ಟೆಗಳನ್ನು ಧರಿಸುವಾಗ ಪೂರ್ವಾಭಿಮುಖವಾಗಿ ಮುಖವನ್ನು ಇಡಬೇಕೆಂದು ಹಿರಿಯರು ಹೇಳಿರುವರು. ಮನೆಗೆ ಪೂರ್ವ ದಿಕ್ಕಿಗೆ ಬಾವಿಯು ಹಾಗೂ ಗ್ರಾಮಕ್ಕೆ ಪೂರ್ವ ದಿಕ್ಕಿಗೆ ಕೆರೆಗಳನ್ನು ನಿರ್ಮಿಸುವುದು ಒಳ್ಳೆಯದಲ್ಲವೆಂದು ನಮ್ಮ ನಂಬಿಕೆ.
*ಸಂಗ್ರಹ ಮತ್ತು ಪ್ರಚಾರ;*
*ಗೋ ರಾ ಶ್ರೀನಿವಾಸ...*
*ಮೊ:9845856139.*
ಪ್ರತಿಕ್ರಿಯೆಗಳು