ಇಪ್ಪತ್ನಾಲ್ಕು ಗಂಟೆಗಳ ಕಾಲ ಲಾಕ್ಡೌನ್ ಗೆ ಸ್ಪಂದಿಸಿದ ಮಂದಿ
ಚನ್ನಪಟ್ಟಣ:ಮೇ/೨೫/೨೦/ಸೋಮವಾರ. ರಾಜ್ಯಾದ್ಯಂತ ಇಪ್ಪತ್ನಾಲ್ಕು ಗಂಟೆಗಳ ಕಾಲ ವಿಧಿಸಿದ್ದ ಲಾಕ್ಡೌನ್ ಗೆ ನಗರದ ಜನರಲ್ಲದೇ ತಾಲ್ಲೂಕಿನ ಬಹುತೇಕ ಎಲ್ಲಾ ಗ್ರಾಮಗಳಲ್ಲಿಯೂ ಅಂಗಡಿ, ಹೋಟೆಲ್ ಗಳನ್ನು ಮುಚ್ಚುವ ಮೂಲಕ ಲಾಕ್ಡೌನ್ ಗೆ ಸಾಥ್ ನೀಡುವ ಮೂಲಕ ಕೊರೊನಾ (ಕೋವಿಡ್-೧೯) ವಿರುದ್ಧ ಸಮರ ಸಾರುವಲ್ಲಿ ಸಫಲರಾದರು.
ನಗರದಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಮಿಕ್ಕೆಲ್ಲಾ ಅಂಗಡಿಗಳ ಮಾಲೀಕರು ಸ್ವಯಂ ಪ್ರೇರಿತರಾಗಿ ಬಾಗಿಲ ಮುಚ್ಚಿದರೆ, ಕೆಲ ಅಗತ್ಯ ಸೇವೆಗಳ ಅಂಗಡಿ ಮಾಲೀಕರು ಸಹ (ಮಾಂಸದಂಗಡಿಗಳು ಮತ್ತು ಕೆಲ ಹೋಟೆಲ್ಗಳು) ಹನ್ನೊಂದು ಗಂಟೆಗೆ ಬಾಗಿಲು ಹಾಕುವ ಮೂಲಕ ಕೊರೊನಾ ವಿರುದ್ಧ ಹೋರಾಡಲು ಸಿದ್ದ ಎಂದು ಸಾರಿದರು.
ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿ ಕೆಲ ಅಂಗಡಿಗಳ ಮಾಲೀಕರು ಸ್ವಯಂ ಬಾಗಿಲು ಹಾಕಿ ಮನೆಯಲ್ಲಿದ್ದರೆ, ಕೆಲವು ಅಂಗಡಿಗಳನ್ನು ಪೋಲಿಸರು ಎಚ್ಚರಿಕೆ ನೀಡಿ ಮುಚ್ಚಿಸಿದರು. ಸಾರ್ವಜನಿಕರು ಸಹ ಸ್ವಯಂ ಪ್ರೇರಿತರಾಗಿ ಮನೆಯಲ್ಲಿ ಇದ್ದು ಮಾದರಿಯಾದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು