Tel: 7676775624 | Mail: info@yellowandred.in

Language: EN KAN

    Follow us :


ನಗರದಲ್ಲಿ ನರರ ಮೇಲೆ ಅಟ್ಯಾಕ್ ಮಾಡಿದ ಕರಡಿ; ಸಾವು ಬದುಕಿನ ಹೋರಾಟದಲ್ಲಿ ವೃದ್ದೆ. ವಾಕಿಂಗ್ ಪ್ರಿಯರು ಥರಥರ

Posted date: 27 May, 2020

Powered by:     Yellow and Red

ನಗರದಲ್ಲಿ ನರರ ಮೇಲೆ ಅಟ್ಯಾಕ್ ಮಾಡಿದ ಕರಡಿ; ಸಾವು ಬದುಕಿನ ಹೋರಾಟದಲ್ಲಿ ವೃದ್ದೆ. ವಾಕಿಂಗ್ ಪ್ರಿಯರು ಥರಥರ

ಚನ್ನಪಟ್ಟಣ:ಮೇ/೨೭/೨೦/ಬುಧವಾರ. ನಗರದ ಸುಣ್ಣದ ಕೇರಿ ಗೆ ಇಂದು ಬೆಳಗಿನ ಜಾವ ಮೂರು ಗಂಟೆಗೆ ಕರಡಿಯೊಂದು ಬಂದಿದ್ದು, ಬೆಳಗಿನ ಆರು ಗಂಟೆಯಲ್ಲಿ ಮನೆಯಿಂದ ಹೊರಗೆ ಬಂದ ಮಾಜಿ ನಗರಸಭಾ ಸದಸ್ಯೆ ಸಾಕಮ್ಮ (೬೫) ಎಂಬ ವೃದ್ದೆಯ ಮೇಲೆ ಅವರದೇ ಮನೆಯ ಕಾಂಪೌಂಡ್ ನಲ್ಲಿ ಅಡಗಿದ್ದ ಕರಡಿಯು ಎರಗಿದೆ. ಅವರ ಸಂಪೂರ್ಣ ಮುಖವನ್ನು ಪರಚಿದ್ದು. ಸಹಾಯಕ್ಕೆ ತೆರಳಿದ ಅವರ ಪುತ್ರ ಸುಧೀರ್ (೪೦) ಗೂ ‌ಸಹ ಗಾಯಗಳಾಗಿರುವುದಾಗಿ ತಿಳಿದು ಬಂದಿದೆ, ಸಾಕಮ್ಮ ನವರನ್ನು ಬೆಂಗಳೂರಿನ ಸಂಜಯಗಾಂಧಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಮಹಮ್ಮದ್ ಮನ್ಸೂರ್ ತಿಳಿಸಿದ್ದಾರೆ.


ಬೆಳಗಿನ ಜಾವ ಮೂರು ಗಂಟೆಗೆ ಮಾಹಿತಿ ಪಡೆದ ಅರಣ್ಯ ಮತ್ತು ಪೋಲಿಸ್ ಇಲಾಖೆಗಳು ಆ ಭಾಗದ ಜನರಿಗೆ ಧ್ವನಿವರ್ಧಕದ ಮೂಲಕ ಎಚ್ಚರಿಕೆ ನೀಡಿದ್ದರೂ ಸಹ ಬೆಳಗಿನ ಜಾವ ಈ ಕೃತ್ಯ ನಡೆದಿರುವುದು ನಗರದ ಜನರನ್ನು ಬೆಚ್ಚಿ ಬೀಳಿಸಿದೆ.


ಇದು ಹಣ್ಣಿನ ಕಾಲವಾಗಿರುವುದರಿಂದ ಹಲಸಿನ ಹಣ್ಣನ್ನು ಅರಸಿ ಬಂದಿದ್ದು, ಜನರ ಗಾಬರಿಗೆ ಬಿದ್ದು ಭಯದಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿರಬಹುದು. ಸದ್ಯ ಕಾರ್ಯಾಚರಣೆಗೂ ಸಿಗದೇ ದೇವರಹಳ್ಳಿ ಮೂಲಕ ಅಬ್ಬೂರುಗುಡ್ಡೆ ಕಡೆಗೆ ತೆರಳಿದೆ. ಇತ್ತೀಚಿಗೆ ಮತ್ತೀಕೆರೆ ಗ್ರಾಮಕ್ಕೂ ಬಂದಿದ್ದು ಅದೇ ಕರಡಿ ಬಂದಿದೆಯಾ ಎಂಬ ಅನುಮಾನವು ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಬೊಜ್ಜು ಕರಗಿಸಲು ಬೆಳಗಿನ ಜಾವ ನಾಲ್ಕು ಗಂಟೆಗೆ ವಾಕಿಂಗ್ ಹೆಸರಿನಲ್ಲಿ ರಸ್ತೆಗಿಳಿಯುವ ವಾಕಿಂಗ್ ಪ್ರಿಯರನ್ನು ಸಹ ಈ ಘಟನೆ ಬೆಚ್ಚಿ ಬೀಳಿಸಿದೆ. ಚನ್ನಪಟ್ಟಣ ಕ್ಕೆ ಸೇರಿದ (ಸ್ವಲ್ಪ ಭಾಗ) ತೆಂಗಿನಕಲ್ಲು ಅರಣ್ಯ ಪ್ರದೇಶ ಸೇರಿದಂತೆ ಚನ್ನಪಟ್ಟಣ ಅರಣ್ಯ ಪ್ರದೇಶದಲ್ಲಿಯೇ ಎಪ್ಪತ್ತರಿಂದ ಎಂಭತ್ತು ಚಿರತೆಗಳು ಹಾಗೂ ಅರವತ್ತರಿಂದ ಎಪ್ಪತ್ತು ಕರಡಿಗಳು ಇರಬಹುದು ಎಂದು ಅಂದಾಜಿದೆ.


ವಾಕಿಂಗ್ ಹೋಗುವವರು ಬೆಳಕಾದ ನಂತರ ಕನಿಷ್ಟ ನಾಲ್ಕರಿಂದ ಐದು ಮಂದಿ ಅಂತರ ಕಾಯ್ದುಕೊಂಡು ವಾಕಿಂಗ್ ಹೋಗಿ. ಒಬ್ಬೊಬ್ಬರೇ ಹಾಗೂ ಬೆಳಗಾಗುವ ಮುಂಚೆ ವಾಕಿಂಗ್ ಬೇಡ. *ದಂಡಾಧಿಕಾರಿ ಸುದರ್ಶನ್.


ರಾತ್ರಿ ವಿಷಯ ತಿಳಿದ ನಂತರ ನಗರ ವೃತ್ತ ನಿರೀಕ್ಷಕ ಗೋವಿಂದರಾಜು ಮತ್ತು ಸಿಬ್ಬಂದಿಗಳು ಹಾಗು ಅರಣ್ಯಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಆದರೂ ಈ ಘಟನೆ ಆಘಾತ ತಂದಿದೆ.

*ಪುರುಷೋತ್ತಮ. ಪ್ರಭಾರ ಡಿವೈಎಸ್ಪಿ. ಚನ್ನಪಟ್ಟಣ*


ನಗರಕ್ಕೆ ಕರಡಿ ದಾಳಿ ಮಾಡಿರುವುದು ಆಘಾತ ತಂದಿದೆ. ಅರಣ್ಯಾಧಿಕಾರಿಗಳ ಜೊತೆ ಸಮಾಲೋಚಿಸಿ, ನಮ್ಮ ಮಿತಿಯಲ್ಲಿ ಏನು ಸಹಕಾರ ನೀಡಲು ಸಾಧ್ಯವೋ ಅದನ್ನು ನೀಡಲು ಬದ್ದರಾಗಿದ್ದೇವೆ.

*ಶಿವನಂಕಾರಿಗೌಡ. ಪೌರಾಯುಕ್ತರು. ಚನ್ನಪಟ್ಟಣ.*


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑