ಕಾಡಾನೆ ದಾಳಿಗೆ ನಲುಗಿದ ಟೊಮ್ಯಾಟೊ ತೋಟ
ಚನ್ನಪಟ್ಟಣ:ಮೇ/೨೭/೨೦/ಬುಧವಾರ. ಒಂದೆಡೆ ಕೊರೋನಾ ಕಾಟಕ್ಕೆ ರೈತರು ಸೊರಗಿ ದ್ದಾರೆ. ಮತ್ತೊಂದೆಡೆ ಕಾಡುಪ್ರಾಣಿಗಳ ಹಾವಳಿ ಯಿಂದಾಗಿ ರೈತರು ಬೆಳೆದ ಬೆಳೆಗಳು ಸಂಪೂರ್ಣ ನಾಶವಾಗುತ್ತಿವೆ. ತಾಲೂಕಿನ ಮೆಣಸಿಗನಹಳ್ಳಿ ಗ್ರಾಮದ ರೈತ ಸ್ವಾಮಿ ಎಂಬುವವರ ಟೊಮೋಟೋ ತೋಟಕ್ಕೆ ನುಗ್ಗಿದ್ದ ೫ - ೬ ಕಾಡಾನೆ ಗಳ ಹಿಂಡು ೨ ಎಕರೆಯಲ್ಲಿ ಬೆಳೆದಿದ್ದ ಟೊಮೋಟೋ ಬೆಳೆಯಲ್ಲಿ ಭಾಗಶಃ ನಾಶಪಡಿಸಿರುವ ಘಟನೆ ನಡೆದಿದೆ. ಜೊತೆಗೆ ಪರಂಗಿ, ಹಲಸು, ಮಾವಿನ ಮರಗಳನ್ನು ನೆಲಸಮ ನಾಡಿ ಧ್ವಂಸ ಮಾಡಿವೆ.
ಕಬ್ಬಾಳು - ತೆಂಗಿನಕಲ್ಲು ಅರಣ್ಯ ಪ್ರದೇಶದಿಂದ ಆಹಾರ ಅರಸಿ ಬರುತ್ತಿರುವ ಕಾಡಾನೆಗಳ ಹಿಂಡು ರೈತರ ಕೃಷಿ ಭೂಮಿಗೆ ಕಾಲಿಟ್ಟು ನಾಶಪಡಿಸುತ್ತಿವೆ. ಹಾಗಾಗಿ ರಾಜ್ಯ ಸರ್ಕಾರ ಕೂಡಲೇ ಈ ಬಗ್ಗೆ ಸೂಕ್ತ ಕ್ರಮವಹಿಸಬೇಕೆಂದು ನೊಂದ ರೈತ ಸ್ವಾಮಿ ಒತ್ತಾಯಿಸಿದ್ದಾರೆ.
೩೦ ಸಾವಿರ ಗಿಡಗಳ ಪೈಕಿ ೪ ಸಾವಿರ ಟೊಮೋಟೊ ಗಿಡಗಳನ್ನ ಕಾಡಾನೆಗಳ ಹಿಂಡು ತುಳಿದು ನಾಶ ಮಾಡಿವೆ. ರಾಮನಗರ - ಚನ್ನಪಟ್ಟಣ ಗಡಿ ಹಾಗೂ ಚನ್ನಪಟ್ಟಣ - ಕನಕಪುರ ಗಡಿಯಲ್ಲಿ ಕಾಡಾನೆಗಳ ದಾಳಿ ಹೆಚ್ಚಾಗಿದೆ. ಮುಖ್ಯವಾಗಿ ರೈತರ ಕೃಷಿ ಭೂಮಿಗೆ ಲಗ್ಗೆಯಿಟ್ಟು ದಾಳಿ ಮಾಡುತ್ತಿವೆ. ಹಾಗಾಗಿ ರೈತರು ಈ ಭಾಗದಲ್ಲಿ ವ್ಯವಸಾಯ ಮಾಡುವುದೇ ಕಷ್ಟವಾಗಿದೆ ಎಂಬ ಅಭಿಪ್ರಾಯವನ್ನ ಈ ಭಾಗದ ಕೃಷಿಕರು ವ್ಯಕ್ತಪಡಿಸಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು