Tel: 7676775624 | Mail: info@yellowandred.in

Language: EN KAN

    Follow us :


ದಳೀಯರಿಬ್ಬರೂ ಹೊರಹೋಗುತ್ತಾರೆಂಬ ನಿನ್ನೆಯ ಸುದ್ದಿಗೆ ಖುಷಿಗೊಂಡ ಉಳಿದ ನಾಯಕರು

Posted date: 30 May, 2020

Powered by:     Yellow and Red

ದಳೀಯರಿಬ್ಬರೂ ಹೊರಹೋಗುತ್ತಾರೆಂಬ ನಿನ್ನೆಯ ಸುದ್ದಿಗೆ ಖುಷಿಗೊಂಡ ಉಳಿದ ನಾಯಕರು

ಚನ್ನಪಟ್ಟಣ:ಮೇ/೩೦/೨೦/ಶನಿವಾರ. ಬಿಜೆಪಿ ಬಾಗಿಲು ತಟ್ಟುತ್ತಿರುವ ಇಬ್ಬರು ದಳೀಯರು ? ಹೋದರೆ ಆನಂದ ! ಉಳಿದ ದಳೀಯರ ಸಂತಸ. ಎಂಬ ಸುದ್ದಿಯು ನಮ್ಮ ಪತ್ರಿಕೆಯಲ್ಲಿ ಪ್ರಕಟಗೊಂಡ ನಂತರ ಓದಿದ ಅನೇಕ ದಳದ ನಾಯಕರು ಮತ್ತು ಕಾರ್ಯಕರ್ತರು ಕರೆ ಮಾಡಿ ತಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದರು.


ಅವರು ಹೋದ ನಂತರ ನಾವೇ ಬಹಿರಂಗ ಹೇಳಿಕೆ ನೀಡುತ್ತೇವೆ. ಈಗ ಹೆಸರು ಬೇಡ ಎಂದೇ ಕರೆ ಮಾಡಿದ ಮುಖಂಡರು ಮತ್ತು ಕಾರ್ಯಕರ್ತರು ಈರ್ವರ ವಿರುದ್ಧ ಅಸಮಾಧನವನ್ನು ಹಾಗೂ ಅವರು ಹೋದರೆ ದಳದಲ್ಲಿ ಆಗುವ ಬದಲಾವಣೆಗಳನ್ನು ಕುರಿತು ಸಂತಸ ಹಂಚಿಕೊಂಡರು.


ನಗರಸಭೆಯ ಮಾಜಿ ಸದಸ್ಯರೊಬ್ಬರು ಕರೆ ಮಾಡಿ, ಅವರಿಬ್ಬರೂ ಹೋದರೆ ಸ್ಥಳೀಯ ದಳದ ಮುಖಂಡರಲ್ಲಿ ಬಹುತೇಕ ಒಗ್ಗಟ್ಟಾಗುತ್ತದೆ. ಬೇಧಭಾವ ಎಂಬುದೇ ಇರುವುದಿಲ್ಲ. ರಾಜ್ಯ ಮಟ್ಟದಲ್ಲಾಗುವ ಬದಲಾವಣೆಗೆ ಇದು‌ ಮುನ್ನುಡಿಯಾಗುತ್ತದೆ. ಹಾಗಾಗಿ ಮೊದಲು ಅವರು ತೊಲಗಲಿ‌ ಎಂದರು.


ಪಕ್ಷದ ಹಿರಿಯ ಮುಖಂಡರೊಬ್ಬರು ಮಾತನಾಡಿ ಅವರಲ್ಲೊಬ್ಬರು ಈಗಾಗಲೇ ಮಾಜಿ ಶಾಸಕರ ಬಳಿ ಮದುವೆಯ ನೆಪದಲ್ಲಿ ಕೈವೊಡ್ಡಿದ್ದಾರೆ. ಅವರು ಹೋಗುವುದು ಖಚಿತವಾಗಿದೆ. ಅವರಿಗಿಂತ ಮತ್ತೊಬ್ಬರು ಹೋಗುವುದು ನಮಗೆ ಮೊದಲ ಆದ್ಯತೆಯಾಗಿದೆ ಎಂದರು.


ಕಾರ್ಯಕರ್ತರೊಬ್ಬರು ಕರೆ ಮಾಡಿ, ಇವರು ಪಕ್ಷ ತೊರೆದು ಹೋದರೆ ನಮ್ಮ ತಾಲ್ಲೂಕಿನಲ್ಲಿ ದಳ ವೇ ಮೊದಲ ಸ್ಥಾನದಲ್ಲಿರುವುದರಲ್ಲಿ ಅನುಮಾನವೇ ಇಲ್ಲ. ಈ ಕೆಲಸ ಶೀಘ್ರವಾಗಿ ಆಗಲೆಂದು ಹರಕೆ ಹೊತ್ತಿರುವುದಾಗಿ ಅರುಹಿದರು.


ಇನ್ನೂ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಕರೆ ಮಾಡಿ ಅವರು ಹೋಗುತ್ತಿರುವುದರಿಂದ ಅತ್ಯಂತ ಸಂತೋಷವಾಗುತ್ತಿದೆ ಎಂದು ತಂತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದು ವಿಶೇಷವಾಗಿತ್ತು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑