ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಬೊಮ್ಮಯ್ಯ ನಿಧನ
ಚನ್ನಪಟ್ಟಣ:ಜೂ/೦೬/೨೦/ಶನಿವಾರ. ಮಾಜಿ ಉಪ ಪ್ರಧಾನರು, ತಾಲ್ಲೂಕು ಪಂಚಾಯತಿಯ ಮಾಜಿ ಸದಸ್ಯರು ಹಾಗೂ ಮೊಳೆದೊಡ್ಡಿ ಗ್ರಾಮದ ಛೇರ್ಮನ್ ಬೊಮ್ಮಯ್ಯ (೮೫) ನವರು ಇಂದು ನಿಧನರಾದರು.
ಶ್ರೀಯುತರು ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡು ರಾಜಕೀಯ ಪಡಸಾಲೆಯ ಮೂಲಕ ಹಲವಾರು ಸಾಮಾಜಿಕ ಕಳಕಳಿಯುಳ್ಳ ಕೆಲಸವನ್ನು ಮಾಡುವ ಮೂಲಕ ತಮ್ಮ ಪಂಚಾಯತಿ ವ್ಯಾಪ್ತಿಯಲ್ಲಿ ಗುರುತಿಸಿಕೊಂಡಿದ್ದರು.
ಮೃತರು ನೀಲಸಂದ್ರ ಗ್ರಾಮ ಪಂಚಾಯತಿ ಸದಸ್ಯ ಬಿಳಿಯಪ್ಪ ಸೇರಿದಂತೆ ನಾಲ್ವರು ಪುತ್ರರು, ಮೂವರು ಪುತ್ರಿಯರು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಸೇರಿದಂತೆ ಅನೇಕ ಬಂಧುಬಾಂಧವರನ್ನು ಅಗಲಿದ್ದು, ಇಂದು ಮಧ್ಯಾಹ್ನ ೦೧:೦೦ ಗಂಟೆಗೆ ಸ್ವಗ್ರಾಮ ಮೊಳೆದೊಡ್ಡಿ ಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು