ತಾಳೆಯೋಲೆ ೨೬೫: ಯಾರ ಆಗ್ರಹದಿಂದ ಕೆಡುಕು ಉಂಟಾಗುತ್ತದೆ ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*
ಯಾರ ಆಗ್ರಹದಿಂದ ಕೆಡುಕು ಉಂಟಾಗುತ್ತದೆ ?
ಋಷಿಗಳು ಆತ್ಮ ಜ್ಞಾನವನ್ನು ಹೊಂದಿ ಭೌತಿಕ ಸಂಪತ್ತಿಗಾಗಿ, ಆಸೆ ಪಟ್ಟು ಅದಕ್ಕಾಗಿ ಓಡದೆ ಸಾಮಾನ್ಯವಾದ ಸಹಜ ಜೀವನವನ್ನು ಮಾಡುತ್ತಿದ್ದರು. ಅವರು ಸಾಮಾನ್ಯವಾಗಿ ಸಾಧ್ಯವಾದಷ್ಟು ಕಾಮ, ಕ್ರೋಧ, ಲೋಭ ಮೋಹಗಳನ್ನು ಜಯಿಸಿರುತ್ತಾರೆ. ಅಂತಹ ಮಹನೀಯರು ಶಾಂತಿ ಸ್ವರೂಪವಾಗಿ ಅಹಿಂಸೆಗೆ ದೂರವಾಗಿ ಇರುತ್ತಾರೆ. ತಮ್ಮಿಂದ ಯಾರಿಗೂ ಹಾನಿಯಾಗಬಾರದೆಂಬ ಸ್ಥಿರವಾದ ಮನಸ್ತತ್ವವು ಅವರಲ್ಲಿರುವುದು.
ಇತರರು ತಮ್ಮ ಬಗ್ಗೆ ಸ್ವಲ್ಪ ಅಹಿತಕರವಾಗಿ ಪ್ರವರ್ತಿಸಿ ಅಗೌರವವಾಗಿ ಮಾತನಾಡಿದರೂ ಅವರು ಕೋಪಗೊಳ್ಳುವರು. ಆದರೆ ಒಮ್ಮೆ ಅವರು ಆವೇಶಕ್ಕೆ ಗುರಿಯಾದರೆ ಅವರನ್ನು ತಡೆಯುವುದು ಯಾರಿಂದಲೂ ಸಾಧ್ಯವಿಲ್ಲ.
ಪುರಾಣ ಇತಿಹಾಸಗಳಲ್ಲಿ ಋಷಿಗಳ ಆಗ್ರಹಕ್ಕೆ ಗುರಿಯಾಗಿ ಶಪಿಸಿರುವ ಹಾಗೆ ಸೂಚಿಸಲ್ಪಟ್ಟಿವೆ. ಅಂತಹ ಪುಣ್ಯ ಮೂರ್ತಿಗಳ ಶಾಪ ಪ್ರಭಾವಕ್ಕೆ ದೇವಾನುದೇವತೆಗಳೇ ಗುರಿ ಆಗಿರುವರೆಂದು ತಿಳಿಸಿದೆ. ಆದರೆ ಶಾಪದ ಪ್ರಭಾವವನ್ನು ಶಾಂತಿ ಮಾಡಿಕೊಳ್ಳುವುದಕ್ಕೆ ಅನೇಕ ಶುಭ ಕರ್ಮಗಳನ್ನು ಸೂಚಿಸಲಾಗಿದೆ. ಭಕ್ತರನ್ನು, ಸಿದ್ಧ ಪುರುಷರನ್ನು ಹಾಗೂ ಋಷಿಗಳನ್ನು ಅನಾವಶ್ಯಕವಾಗಿ ಕೋಪಕ್ಕೆ ಗುರಿ ಮಾಡಿಸಿದರೆ ಅವರಿಗೆ ಉಂಟಾಗುವ ಅಹಿತ ಶಾಪವಾಗಿ, ಅವರನ್ನು ಮತ್ತು ತೊಂದರೆ ಪಡಿಸಿದವರನ್ನು ಹಿಂಬಾಲಿಸುತ್ತವೆ.
*ಸಂಗ್ರಹ ಮತ್ತು ಪ್ರಚಾರ;*
*ಗೋ ರಾ ಶ್ರೀನಿವಾಸ...*
*ಮೊ:9845856139.*
ಪ್ರತಿಕ್ರಿಯೆಗಳು