ಕೋವಿಡ್ ಸಮಯದಲ್ಲಿ ರಕ್ತದಾನ ಸರ್ವದಾನಕ್ಕಿಂತಲೂ ಮಿಗಿಲು ಡಾ ಮೋಹನ್
ಚನ್ನಪಟ್ಟಣ:ಜೂ/೨೮/೨೦/ಭಾನುವಾರ. ರಕ್ತದಾನ ಮಹಾದಾನ ಎಂಬುದು ವೈದ್ಯೋಕ್ತಿ. ಅದರಲ್ಲೂ ಈ ಕೋವಿಡ್ ಸಮಯದಲ್ಲಿ ರಕ್ತ ದಾನ ಮಾಡುವುದು ಸರ್ವದಾನಗಳಿಗೂ ಮಿಗಿಲಾದದ್ದು. ಈ ದಿನ ರಕ್ತದಾನ ಮಾಡುವ ಎಲ್ಲರಿಗೂ ನಾವುಗಳು ನಮನಗಳನ್ನು ಸಲ್ಲಿಸಬೇಕು ಎಂದು ಗಂಗಪ್ಪ ಕ್ಲಿನಿಕ್ ನ ಡಾ ಮೋಹನ್ ಹೇಳಿದರು.
ಅವರು ಇಂದು ನಗರದ ಮಾತೃಶ್ರೀ ಆರ್ಥೋಫೆಡಿಕ್ ಆಸ್ಪತ್ರೆ, ಜೀವಾಮೃತ ರಕ್ತನಿಧಿ ಕೇಂದ್ರ ಹಾಗೂ ಮಾತೃಭೂಮಿ ಸೇವಾ ಫೌಂಡೇಶನ್ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿ ಮಾತನಾಡಿದರು.
ಮೂಳೆ ತಜ್ಞ ಡಾ ಮಲವೇಗೌಡರು ಮಾತನಾಡಿ ಕಳೆದ ಏಳು ವರ್ಷಗಳಿಂದ, ಪ್ರತಿ ವರ್ಷವೂ ನಾವು ರಕ್ತದಾನ ಶಿಬಿರಗಳನ್ನು ಹಮ್ಮಿಕೊಂಡು ಬರುತ್ತಿದ್ದೇವೆ. ಇಷ್ಟು ವರ್ಷಗಳು ರೆಡ್ ಕ್ರಾಸ್ ಸಂಸ್ಥೆಗೆ ಸರಬರಾಜು ಆಗುತ್ತಿತ್ತು. ನಗರದಲ್ಲಿಯೇ ಬ್ಲಡ್ ಬ್ಯಾಂಕ್ ತಲೆ ಎತ್ತಿರುವುದರಿಂದ ಅವರಿಗೆ ಇಂದು ರಕ್ತ ನೀಡಲಾಗುವುದು. ಈ ರಕ್ತವು ಅವಶ್ಯವಿರುವ ನಮ್ಮ ತಾಲ್ಲೂಕಿನ ರೋಗಿಗಳಿಗೆ ಉಪಯೋಗವಾಗುವಂತಾಗಲಿ ಎಂದು ಆಶಿಸಿದರು.
ಕೋವಿಡ್ ಸಮಯವಾದ್ದರಿಂದ, ಜನರು ಭಯದಿಂದ ಹೊರಗೆ ಬಾರದಿರುವುದರಿಂದ ಹತ್ತೊಂಬತ್ತು (೧೯) ಮಂದಿ ಮಾತ್ರ ರಕ್ತದಾನ ಮಾಡಿದರು.
ಜೀವಾಮೃತ ರಕ್ತನಿಧಿ ಕೇಂದ್ರದ ಚಂದ್ರೇಗೌಡ ಮತ್ತು ಸಿಬ್ಬಂದಿಗಳು, ಮಾತೃಶ್ರೀ ಆರ್ಥೋಫೆಡಿಕ್ ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಮಾತೃಭೂಮಿ ಸೇವಾ ಫೌಂಡೇಶನ್ ಮಹೇಶ್ ಹಾಜರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು