Tel: 7676775624 | Mail: info@yellowandred.in

Language: EN KAN

    Follow us :


ವೈದ್ಯರು ದೇವರಿಗೆ ಸಮಾನರು. ಯೋಗೀಶ್ ಗೌಡ

Posted date: 01 Jul, 2020

Powered by:     Yellow and Red

ವೈದ್ಯರು ದೇವರಿಗೆ ಸಮಾನರು. ಯೋಗೀಶ್ ಗೌಡ

ಚನ್ನಪಟ್ಟಣ:ಜು/೦೧/೨೦/ಬುಧವಾರ. ವೈದ್ಯರೆಂದರೆ ಅವರು ದೇವರ ಸಮಾನ. ಈ ಕೊರೊನಾ ಸಂದಿಗ್ಧತೆಯಲ್ಲೂ ಒಂದು ದಿನ ರಜೆ ಪಡೆಯದೇ, ತಮ್ಮ ಅನಾರೋಗ್ಯವನ್ನು ಲೆಕ್ಕಿಸದೇ ಸೇವೆ ಮಾಡಿತ್ತಿದ್ದಾರೆ. ಸೇವೆಗಳಲ್ಲಿ ಅನನ್ಯ ಸೇವೆಯಾಗಿರುವ ವೈದ್ಯಕೀಯ ಸೇವೆ ಸಮಾಜ ಗುರುತಿಸುವಂತಹ ಮಹತ್ತರ ಸೇವೆ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್‌ಗೌಡ ತಿಳಿಸಿದರು.


ತಾಲ್ಲೂಕಿನ ಬೇವೂರು ಗ್ರಾಮದ ಶ್ರೀ ಸಿದ್ದರಾಮೇಶ್ವರ ಕಾಲೇಜಿನ ಆವರಣದಲ್ಲಿ ಇಂದು ವೈದ್ಯರ ದಿನಾಚರಣೆಯ ಪ್ರಯುಕ್ತ ಬೇವೂರು ಆಸ್ಪತ್ರೆಯ ವೈದ್ಯರಾದ ಶ್ವೇತಾ ರವರನ್ನು ಸನ್ಮಾನಿಸಿ ಮಾತನಾಡಿದ ಅವರು  ಪ್ರತಿಯೊಬ್ಬರ ಆರೋಗ್ಯವನ್ನು ಕಾಪಾಡುವ ವೈದ್ಯಲೋಕಕ್ಕೆ ತನ್ನದೇ ಆದ ಇತಿಹಾಸವಿದ್ದು ವೈದ್ಯಕೀಯ ಸೇವೆ ದೊರೆಯದಿದ್ದರೆ ಆಗುವ ಪರಿಣಾಮಗಳನ್ನು ಉಹಿಸಲು ಸಾದ್ಯವಾಗುತ್ತಿರಲಿಲ್ಲ ಎಂದು ತಿಳಿಸಿದರು.


ನಂತರ ಮಾತನಾಡಿದ ವಿದ್ಯಾಸಂಸ್ಥೆಯ ನಿರ್ದೇಶಕ ರೇವಣ್ಣಸಿದ್ದಪ್ಪರವರು, ನಮ್ಮ ಗ್ರಾಮದ ಆಸ್ಪತ್ರೆಯಲ್ಲಿ ಹಿಂದೆ ಬಾಲಕೃಷ್ಣ ಮತ್ತು ಮಾರುತಿ ಎಂಬ ವೈದ್ಯರುಗಳು ಈ ಭಾಗದ ಜನರಿಗೆ ತಮ್ಮದೇ ಆದ ರೀತಿಯಲ್ಲಿ ಸೇವೆ ನೀಡಿದ್ದು, ಶ್ವೇತಾರವರು ಕೂಡ ಅವರಂತೆಯೇ ಒಳ್ಳೆಯ ಹೆಸರನ್ನು ಪಡೆಯುವಂತಾಗಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ  ಅಧ್ಯಕ್ಷ ಕಾಳೇಗೌಡ, ಗ್ರಾಪಂ ಸದಸ್ಯ ಮಧುಸೂಧನ್, ಭೈರನಾಯ್ಕನಹಳ್ಳಿ ಗಂಗಾಧರ್, ಹರ್ಷಿತ್‌ಗೌಡ, ಶಿವುಕುಮಾರ್, ಟೈಲರ್ ರಾಜು, ಪುಟ್ಟಲಿಂಗಯ್ಯ, ರೇಣುಕಾ, ಗೌಡಗೆರೆ ಗಂಗಾಧರ್, ಮಠದ ರಾಜು, ಪುಷ್ಪಲತಾ, ಪ್ರಮೀಳಾ ಸೇರಿದಂತೆ ಇತರರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑