Tel: 7676775624 | Mail: info@yellowandred.in

Language: EN KAN

    Follow us :


ನೀಲಕಂಠನಹಳ್ಳಿ ಭರತ್ ರ ಸ್ವ ರಾಜಕೀಯ ಹಿತಕ್ಕಾಗಿ ನೀರಿನ ಘಟಕಕ್ಕೆ ವಿದ್ಯುತ್ ಬೋರ್ಡ್. ಗ್ರಾಮದ ಮುಖಂಡರ ಆಕ್ರೋಶ

Posted date: 02 Jul, 2020

Powered by:     Yellow and Red

ನೀಲಕಂಠನಹಳ್ಳಿ ಭರತ್ ರ ಸ್ವ ರಾಜಕೀಯ ಹಿತಕ್ಕಾಗಿ ನೀರಿನ ಘಟಕಕ್ಕೆ ವಿದ್ಯುತ್ ಬೋರ್ಡ್. ಗ್ರಾಮದ ಮುಖಂಡರ ಆಕ್ರೋಶ

ಚನ್ನಪಟ್ಟಣ:ಜು/೦೨/೨೦ಗುರುವಾರ. ತಾಲ್ಲೂಕಿನ ನೀಲಕಂಠನಹಳ್ಳಿ ಗ್ರಾಮದ ಮಾಜಿ ಗ್ರಾಮ ಪಂಚಾಯತಿ ಸದಸ್ಯ ಭರತ್ ರವರು ಮುಂದಿನ ೨೦೨೦ ರ ಗ್ರಾಮ ಪಂಚಾಯಿತಿ ಚುನಾವಣೆಗಾಗಿ, ನೀಲಕಂಠನಹಳ್ಳಿ ಗ್ರಾಮದ ಶುದ್ಧ  ಕುಡಿಯುವ ನೀರಿನ ಘಟಕದ ನಾಮಫಲಕವನ್ನು ಸರ್ಕಾರದ ನಿಯಮ ಮೀರಿ, ವಿದ್ಯುತ್ ನಾಮ ಫಲಕವನ್ನಾಗಿ ಪರಿವರ್ತಿಸಿ, ಕೇವಲ ಜನರ ಓಲೈಕೆಗಾಗಿ  ಇಳಿದಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ನೀಲಕಂಠನಹಳ್ಳಿ ಗ್ರಾಮದ ಡಿ ಗುರುಮೂರ್ತಿ ರವರು ದೂರಿದ್ದಾರೆ.


ವಿಶ್ವಮಾನ್ಯರು ಹಾಗೂ ದಿವ್ಯಚೇತನಗಳಾದ ಶ್ರೀಭಗವಾನ್ ಬುದ್ಧ ಮತ್ತು  ಡಾ || ಬಿ .ಆರ್ . ಅಂಬೇಡ್ಕರವರ ಭಾವಚಿತ್ರಗಳನ್ನು ತಮ್ಮ ರಾಜಕೀಯ ದುರುದ್ದೇಶಕ್ಕಾಗಿ, ನಾಮಫಲಕದಲ್ಲಿ ಚಿತ್ರ ಹಾಕುವ ಮೂಲಕ ದುರ್ಬಳಕೆ ಮಾಡಿಕೊಂಡಿದ್ದಾರೆ. ಮತ್ತು ಜನ ಸಾಮಾನ್ಯರ ಭಾವನೆಗಳನ್ನು ಬಂಡವಾಳವಾಗಿ ಉಪಯೋಗಿಸಿಕೊಂಡು ತಮ್ಮ ರಾಜಕಿಯ ದುರುದ್ದೇಶದಿಂದ ಮುಂದಿನ ಚುನಾವಣೆಯ ಮತಗಳಿಕೆಗಾಗಿ ಕೀಳುಮಟ್ಟದ ರಾಜಕೀಯಕ್ಕೆ ಇಳಿದಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.


ಜನವರಿ ೨೦೧೮ ರಲ್ಲಿ ಇದೇ ಶುದ್ಧ ನೀರಿನ ಘಟಕದ ಗುದ್ದಲಿ ಪೂಜೆ ನಡೆಯುವ ಸಂಧರ್ಭದಲ್ಲಿ ಸ್ವಾರ್ಥ ಸಾಧನೆಗಾಗಿ, ಏಕಾಂಗಿಯಾಗಿ ವಿರೋಧ ವ್ಯಕ್ತ ಪಡಿಸಿದ ಭರತ್ ರವರು ಘಟಕದ ಗುದ್ದಲಿ ಪೂಜೆ ನೆರವೇರಿಸಲು ಬಂದಿದ್ದ ಅಂದಿನ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಸಿ.ಪಿ. ರಾಜೇಶ್ ರವರನ್ನು ವಿರೋದ್ಧಿಸಿದ್ದರು. ಹಾಗೂ ಮಾಜಿ ಶಾಸಕ ಸಿ.ಪಿ.ಯೋಗೇಶ್ ರವರು ನೀಲಕಂಠನಹಳ್ಳಿ ಗ್ರಾಮಸ್ಥರ ದಿಕ್ಕು ತಪ್ಪಿಸಿರುತ್ತಾರೆ ಎಂದು ಹೇಳಿಕೆ ನೀಡಿ ನೀಲಕಂಠನಹಳ್ಳಿ ಶುದ್ದ ಕುಡಿಯುವ ನೀರಿನ ಘಟಕದಲ್ಲಿ  ಸಿ.ಪಿ.ಯೋಗೇಶ್ ರಾಜಕಿಯ ಗಿಮಿಕ್ ಮಾಡುತ್ತಿದ್ದಾರೆಂದು ಸ್ಥಳೀಯ ಪತ್ರಿಕೆಯಲ್ಲಿ ಹೇಳಿಕೆ ನೀಡಿ ಆಕ್ಷೇಪ, ವಿರೋಧ ವ್ಯಕ್ತಪಡಿಸಿದ್ದರು.


ಮುಂದಿನ ದಿನಗಳಲ್ಲಿ ಮಾಜಿ ಶಾಸಕರಾದ ಸಿ.ಪಿ.ಯೋಗೇಶ್ ರವರ ಬೆಂಬಲದೊಂದಿಗೆ ಶಾಸಕರ ಸ್ಥಳಿಯ ಪ್ರಾದೇಶಿಕ ಅಭಿವೃದ್ಧಿ ಯೋಜನೆಯಡಿ ಬಿಡುಗಡೆಯಾದ ಅನುದಾನ ದಿಂದ ಕಾಮಗಾರಿ ಪೂರ್ಣಗೊಂಡು ಲೋಕಾರ್ಪಣೆಯೂ ಆಯಿತು. ಆದರೆ ಈ ಘಟಕದ ನಿರ್ಮಾಣವನ್ನು ವಿರೋಧಿಸಿದ್ದ ಅಂದಿನ ಗ್ರಾಮ ಪಂಚಾಯಿತಿ ಸದಸ್ಯ ಭರತ್ ರವರು ತಮ್ಮ ಅವಧಿ ಮುಗಿದ ಮೇಲೂ ಕೇವಲ ವಿದ್ಯುತ್ ನಾಮ ಫಲಕವನ್ನು  ಮನೋಸ್ಸೋಯಿಚ್ಛೆ ಘಟಕದ ಮೇಲೆ ಹಾಕಿ ಈ ಘಟಕವನ್ನು ತಾನೇ ಸ್ವತಃ ಮಾಡಿಸಿರುವುದಾಗಿ ಗ್ರಾಮಸ್ಥರ ಮುಂದೆ ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ೨೦೨೦ ಗ್ರಾಮ ಪಂಚಾಯಿತಿ  ಚುನಾವಣೆಯ ದುರುದ್ದೇಶದಿಂದ ಎಂದು ಮೇಲ್ನೋಟಕ್ಕೆ ಕಾಣಿಸುತ್ತದೆ.


ವಿದ್ಯುತ್ ನಾಮ ಫಲಕದಲ್ಲಿ ರಾಜ್ಯ ಸರ್ಕಾರದ ಲಾಂಛನ ಹಾಗೂ ತಾಲ್ಲೂಕು ಪಂಚಾಯಿತಿ ಚನ್ನಪಟ್ಟಣ, ಜಿಲ್ಲಾ ಪಂಚಾಯಿತಿ ರಾಮನಗರ ಎಂದು ನಮೂದಿಸಲಾಗಿದ್ದು, ಈ ನಾಮ ಫಲಕವು ಸರ್ಕಾರದ  ನಿಯಮಾನುಸಾರ ಇರುವುದಿಲ್ಲ. ಈ ಕುರಿತು ಸಹಾಯಕ ಕಾರ್ಯಪಾಲಕ ಅಭಿಯಂತರ ಕಛೇರಿ ಗ್ರಾಮೀಣ ಕುಡಿರುವ ನೀರಿನ ಉಪವಿಭಾಗ ಚನ್ನಪಟ್ಟಣ, ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯಿತಿ ರಾಮನಗರ ಜಿಲ್ಲೆ, ಇವರಲ್ಲಿ ದೂರು ದಾಖಲಿಸಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑