ರಾಮನಗರ ಜಿಲ್ಲೆಯಲ್ಲಿ ವೈದ್ಯ ಸೇರಿದಂತೆ ಇಂದು ಎಂಟು ಮಂದಿ ಸೋಂಕಿತರು.
ರಾಮನಗರ:ಜು/೦೨/೨೦/ಗುರುವಾರ. ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿಯೂ ತಲಾ ಇಬ್ಬರಿಗೆ ಸೋಂಕು ತಗುಲಿದ್ದು, ಇವರಲ್ಲಿ ರಾಮನಗರದ ನಿಧಾ ಎಂಬ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರು ಸೇರಿದ್ದಾರೆ.
ಇವರ ಕ್ಲಿನಿಕ್ ನಲ್ಲಿ ವೈದ್ಯರನ್ನು ಸಂಪರ್ಕಿಸಿದ್ದ ರೋಗಿಗಳು ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷಿಸಿಕೊಳ್ಳುವಂತೆ ರಾಮನಗರ ತಾಲ್ಲೂಕು ಆಡಳಿತ ಮನವಿ ಮಾಡಿದೆ.
ರಾಮನಗರ ತಾಲ್ಲೂಕಿನಲ್ಲಿ ೨, ಚನ್ನಪಟ್ಟಣ ತಾಲ್ಲೂಕಿನಲ್ಲಿ ೨, ಕನಕಪುರ ತಾಲ್ಲೂಕಿನಲ್ಲಿ ೨ ಮತ್ತು ಮಾಗಡಿ ತಾಲೂಕಿನಲ್ಲಿ ೨ ಪ್ರಕರಣಗಳು ದಾಖಲಾಗುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ೨೨೩ ಕ್ಕೆ ಏರಿಕೆಯಾಗಿದೆ.
*ಚನ್ನಪಟ್ಟಣ ದ ವರದಿ*
ತಾಲ್ಲೂಕಿನ ಭೈರಾಪಟ್ಟಣ ಗ್ರಾಮದ ಯುವಕನಿಗೆ ಸೋಂಕು ಇದ್ದು, ಅವನ ಪ್ರಥಮ ಸಂಪರ್ಕಕ್ಕೆ ಬಂದು ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದ ೨೬ ವರ್ಷದ ಯುವಕನಿಗೆ ಸೋಂಕು ದೃಢಪಟ್ಟಿದೆ.
ನಗರದಲ್ಲಿನ ಉತ್ತರ ೫ ನೇ ತಿರುವಿನ ೨೩ ವರ್ಷದ ಯುವತಿಗೆ ಈ ಹಿಂದೆ ಸೋಂಕು ಹರಡಿದ್ದು, ಮೊನ್ನೆ ೪೫ ವರ್ಷದ ಆಕೆಯ ತಾಯಿಗೂ ಸಹ ಸೋಂಕು ದೃಢಪಟ್ಟಿತ್ತು. ಈಗ ಆಕೆಯ ೧೯ ವರ್ಷದ ಸಹೋದರನಿಗೆ ಸೋಂಕು ದೃಢಪಟ್ಟಿದೆ. ನಗರದಲ್ಲಿ ೧೮ ಹಾಗೂ ಗ್ರಾಮಾಂತರ ದಲ್ಲಿ ೨೨ ಸೇರಿ ತಾಲ್ಲೂಕಿನಲ್ಲಿ ಸೋಂಕಿತರ ಸಂಖ್ಯೆ ೪೦ ಕ್ಕೇ ಏರಿಕೆಯಾಗಿದೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು