ಕೊರೊನಾ: ಚನ್ನಪಟ್ಟಣದಲ್ಲಿ ಇಂದು ಹತ್ತು ಮಂದಿಗೆ ಸೋಂಕು ದೃಢ. ದ್ವಿಶತಕದ ಹೊಸ್ತಿಲಲ್ಲಿ ಚನ್ನಪಟ್ಟಣ
ಚನ್ನಪಟ್ಟಣ:ಜು/29/20/ಬುಧವಾರ. ತಾಲ್ಲೂಕಿನಾದ್ಯಂತ ಇಂದು ಹತ್ತು ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ತಾಲ್ಲೂಕಿನಲ್ಲಿ ಇದುವರೆಗೂ 192 ಮಂದಿಗೆ ಸೋಂಕು ತಗುಲಿದ್ದು ಸದ್ಯದಲ್ಲೇ 200 ರ ಗಡಿ ದಾಟಲಿದೆ.
192 ಮಂದಿ ಸೋಂಕಿತರಲ್ಲಿ 94 ಮಂದಿ ಗುಣಮುಖರಾಗಿದ್ದು, 98 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಲ್ಲೂಕಿನಲ್ಲಿ ಇದುವರೆಗೂ ಇಬ್ಬರು ಕೊರೊನಾ ಸೋಂಕಿನಿಂದ ಗುಣಮುಖರಾಗದೆ ಸಾವನ್ನಪ್ಪಿದ್ದಾರೆ.
ನಗರದ ಸಿಎಂಸಿ ಬಡಾವಣೆಯಲ್ಲಿ 1, ರಾಜಾ ಕೆಂಪೇಗೌಡ ಬಡಾವಣೆಯಲ್ಲಿ 1, ಆನಂದಪುರದಲ್ಲಿ 1, ಕನಕನಗರ 1, ಕಾಳಿಕಾಂಭ ದೇವಾಲಯದ ಬೀದಿಯಲ್ಲಿ 1, ಕುವೆಂಪು ನಗರ 1, ಸಯ್ಯದ್ ವಾಡಿ 2 ಮತ್ತು ಜೀವನ್ ಪುರ ದಲ್ಲಿ 1 ಪ್ರಕರಣ ದಾಖಲಾಗಿವೆ. ಗ್ರಾಮೀಣ ಪ್ರದೇಶದ ಗೆಂಡೆಕಟ್ಟೆದೊಡ್ಡಿ ಗ್ರಾಮದಲ್ಲಿ ಓರ್ವ ಪುರುಷನಿಗೆ ಸೋಂಕು ದೃಢಪಟ್ಟಿದೆ.
ಎಲ್ಲಾ ಸೋಂಕಿತರನ್ನು ರಾಮನಗರ ಜಿಲ್ಲೆಗೆ ಸಂಬಂಧಿಸಿದ ಕೋವಿಡ್ ಆಸ್ಪತ್ರೆಗೆ ದಾಖಲಿಸಿಲಾಗಿದ್ದು, ಪ್ರಥಮ ಮತ್ತು ದ್ವಿತೀಯ ಸಂಪರ್ಕಿತರನ್ನು ಕ್ರಮವಾಗಿ ಹಾಸ್ಟೆಲ್ ಮತ್ತು ಹೋಂ ಕ್ವಾರಂಟೈನ್ ಮಾಡಿ ಸೀಲ್ಡೌನ್ ಮಾಡಲಾಗುವುದು ಎಂದು ತಾಲ್ಲೂಕು ಆಡಳಿತ ತಿಳಿಸಿದೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು