ಚನ್ನಪಟ್ಟಣ ತಾಲ್ಲೂಕಿನಲ್ಲಿ ಇಂದು ಹತ್ತು ಮಂದಿಗೆ ಕೊರೊನಾ ಸೋಂಕು ದೃಢ
ಚನ್ನಪಟ್ಟಣ:ಜು/31/20/ಶುಕ್ರವಾರ. ತಾಲ್ಲೂಕಿನಲ್ಲಿ ಇದುವರೆಗೂ 202 ಮಂದಿಗೆ ಸೋಂಕು ತಗುಲಿದ್ದು 200 ರ ಗಡಿ ದಾಟಿ ಮುನ್ನುಗ್ಗುತ್ತಿರುವುದು ತಾಲೂಕಿನ ಜನತೆಗೆ ಎಚ್ಚರಿಕೆಯ ಗಂಟೆಯಾಗಿದೆ.
202 ಮಂದಿ ಸೋಂಕಿತರಲ್ಲಿ 94 ಮಂದಿ ಗುಣಮುಖರಾಗಿದ್ದು, 108 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಲ್ಲೂಕಿನಲ್ಲಿ ಇದುವರೆಗೂ ಇಬ್ಬರು ಕೊರೊನಾ ಸೋಂಕಿನಿಂದ ಗುಣಮುಖರಾಗದೆ ಸಾವನ್ನಪ್ಪಿದ್ದಾರೆ.
ಗ್ರಾಮೀಣ ಪ್ರದೇಶದ ಮೆಣಸಿಗನಹಳ್ಳಿ ಗ್ರಾಮದ ಪುರುಷನೊಬ್ಬರಿಗೆ ಸೋಂಕು ದೃಢಪಟ್ಟಿದೆ.
3 ಮಂದಿ ಕೊರೊನಾ ವಾರಿಯರ್ಸ್ ಗೆ ಸೋಂಕು ತಗುಲಿರುವುದಾಗಿ ತಿಳಿದುಬಂದಿದೆ.
ಉಳಿದಂತೆ ನಗರದ ಮಹಾತ್ಮ ಗಾಂಧಿ ರಸ್ತೆ, (ಎಂ ಜಿ ರಸ್ತೆ) ಯ ಪುರುಷ, ಇಸ್ಲಾಂ ಪುರ ದ ಗರ್ಭಿಣಿ, ಜೀವನ್ ಪುರ ದ ಪುರುಷ, ಎಲೆಕೇರಿ ಯ ಪುರುಷ ಹಾಸ್ಮಿಯಾ ಮೊಹಲ್ಲಾ ದ ಆಯುರ್ವೇದ ವೈದ್ಯ ಹಾಗೂ ರಾಜಾ ಕೆಂಪೇಗೌಡ ಬಡಾವಣೆಯ ನಿವಾಸಿ ಆಯುರ್ವೇದ ವೈದ್ಯರೊಬ್ಬರಿಗೆ ಸೋಂಕು ದೃಢಪಟ್ಟಿದೆ.
ಎಲ್ಲಾ ಸೋಂಕಿತರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು