ಪ್ರತಿಷ್ಠಿತ ಸಿಐಎಸ್ಸಿ ಕ್ಲಬ್ ಮ್ಯಾನೇಜರ್ ಕೃಷ್ಣ ಆತ್ಮಹತ್ಯೆ
ಚನ್ನಪಟ್ಟಣ:ಸೆ/04/20/ಗುರುವಾರ. ತಾಲ್ಲೂಕಿನ ಚಿಕ್ಕಮಳೂರು ಬಳಿಯ ಕೂಡ್ಲೂರು ರಸ್ತೆಯಲ್ಲಿರುವ ಸಿಐಎಸ್ಸಿ ಕ್ಲಬ್ನ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೃಷ್ಣ (೩೬) ಬುಧವಾರ ಅದೇ ಕ್ಲಬ್ನಲ್ಲಿನ ವಸತಿಗೃಹದಲ್ಲಿ ನೇಣಿಗೆ ಶರಣಾಗಿದ್ದಾರೆ.
ನೇಣು ಬಿಗಿದುಕೊಂಡ ಬಳಿಕ ಕಾಲುಗಳು ನೆಲಕ್ಕೆ ತಾಗುತ್ತಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು. ಹಲವಾರು ಮೂಲಗಳ ಪ್ರಕಾರ ಕೌಟುಂಬಿಕ ಸಮಸ್ಯೆ ಹಿನ್ನೆಲೆಯಲ್ಲಿ ಇವರು ನೇಣಿಗೆ ಶರಣಾಗಿದ್ದಾಗಿ ಕೇಳಿ ಬಂದಿದೆ.
ನೂರಾರು ಮಂದಿಯ ಸ್ನೇಹಿತರನ್ನು ಹೊಂದಿದ್ದ ಕೃಷ್ಣನ ಸಾವು ಹಲವರಿಗೆ ಆಘಾತ ತಂದಿದ್ದು, ಇತ್ತೀಚಿಗೆ ಕ್ಲಬ್ನಲ್ಲಿ ಮಲಗುವ ಅಭ್ಯಾಸ ಹೊಂದಿದ್ದನೆನ್ನಲಾಗಿದ್ದು ಇಂದು ಮುಂಜಾನೆ ಕ್ಲಬ್ನ ಕಾರ್ಯದರ್ಶಿ ಅಜಯ್ ಅವರು ಕೃಷ್ಣನಿಗೆ ದೂರವಾಣಿ ಕರೆ ಮಾಡಿದಾಗ ಕರೆ ಸ್ವೀಕರಿಸದಿದ್ದಾಗ ಮತ್ತೊಬ್ಬ ನೌಕರ ಶ್ರೀನಿವಾಸ್ಗೆ `ಕೃಷ್ಣ ಫೋನ್ ತೆಗೆಯುತ್ತಿಲ್ಲ. ಈ ಬಗ್ಗೆ ವಿಚಾರ ಮಾಡಿ ಎಂದಿದ್ದಾರೆ ಎನ್ನಲಾಗಿದ್ದು, ಮನೆಯಲ್ಲೂ ಇಲ್ಲದೆ ಇದ್ದದ್ದನ್ನು ತಿಳಿದು ಕ್ಲಬ್ನಲ್ಲಿ ಬಂದು ನೋಡಲಾಗಿ ನೇಣಿಗೆ ಶರಣಾಗಿದ್ದು ಕಂಡುಬಂತೆನ್ನಲಾಗಿದೆ.
ಇವರ ನಿಧನಕ್ಕೆ ಕ್ಲಬ್ನ ಅಧ್ಯಕ್ಷ ಟಿ.ಕೆ.ಯೋಗೀಶ್ (ಪಾಪು) ಕಾರ್ಯದರ್ಶಿ ಅಜಯ್, ಖಜಾಂಚಿ ವಿಶ್ವನಾಥ್, ಎಲೆಕೇರಿ ಮಂಜುನಾಥ್, ಮಂಗಳವಾರಪೇಟೆಯ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು