70 ಬಗೆಯ ಸಸ್ಯಗಳನ್ನು ವಿತರಿಸುವ ಮೂಲಕ ಮೋದಿಯವರ ಜನ್ಮ ದಿನ ಆಚರಿಸಿದ ಹೊಂಗನೂರು ಬಿಜೆಪಿ ಮುಖಂಡರು
ಚನ್ನಪಟ್ಟಣ:ಸೆ.17/20/ಗುರುವಾರ. ತಾಲ್ಲೂಕಿನ ಹೊಂಗನೂರು ಗ್ರಾಮದಲ್ಲಿ ಬಿಜೆಪಿಯ ಯುವ ಮೋರ್ಚಾ, ರೈತ ಮೋರ್ಚಾ ಹಾಗೂ ಎಸ್ಸಿ ಮೋರ್ಚಾದ ವತಿಯಿಂದ ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿಯವರ 70 ನೇ ವರ್ಷದ ಜನ್ಮದಿನೋತ್ಸವ ಆಚರಿಸಲಾಯ್ತು.
ಜನ್ಮ ದಿನದ ಸಂದರ್ಭದಲ್ಲಿ ವಿವಿಧ ಜಾತಿಯ 70 ಸಸಿಗಳನ್ನು ಎಪ್ಪತ್ತು ಮಂದಿಗೆ ವಿತರಿಸಿ, ಸಾರ್ವಜನಿಕವಾಗಿ ಸಿಹಿ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಅರಸು ಜನಾಂಗ ಅಭಿವೃದ್ಧಿ ಸಮಿತಿಯ ಸುಗಂಧರಾಜೇ ಅರಸ್, ವಿಎಸ್ಎಸ್ಎನ್ ಕಾರ್ಯದರ್ಶಿ ಕುಮಾರ್ ವೆಂಕಟಪ್ಪ ರಾಜೇ ಅರಸ್, ಯಜಮಾನರಾದ ರಾಜೇ ಅರಸ್, ಯುವಮೋರ್ಚಾದ ಕಾರ್ಯದರ್ಶಿ ವರದರಾಜೇ ಅರಸ್, ರೈತ ಮೋರ್ಚಾದ ನವೀನ್, ಭಾಸ್ಕರ್, ಎಸ್ಸಿ ಮೋರ್ಚಾದ ಗಂಗಾಧರ ಸ್ವಾಮಿ, ಪ್ರಮುಖರಾದ ಕುಮಾರ್, ಸಂತೋಷ್, ವಿಜಿ ಮುಂತಾದವರು ಪಾಲ್ಗೊಂಡಿದ್ದರು.
ಪ್ರಧಾನಿ ನರೇಂದ್ರ ಮೋದಿಯವರು ಈಗಾಗಲೇ ರಾಷ್ಟ್ರದ ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕಿದ್ದಾರೆ. ಅವರು ಪ್ರತಿಯೊಂದನ್ನು ಸವಾಲಾಗಿ ಸ್ವೀಕರಿಸುತ್ತಾ ನಡೆಯುತ್ತಿದ್ದಾರೆ.
ಈ ದೇಶದ ಮತ್ತಷ್ಟು ಸಮಸ್ಯೆಗಳನ್ನು ಪರಿಹಾರ ಮಾಡುವ ಶಕ್ತಿಯು ಮೋದಿಯವರಿಗೆ ಲಭಿಸಲಿ ಎಂದು ಸೇರಿದ್ದ ಗಣ್ಯರು ಆಶಯ ವ್ಯಕ್ತ ಪಡಿಸಿದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು