ಸಿಂಗರಾಜಪುರ ಗ್ರಾಮದಲ್ಲಿ ಅಕ್ರಮವಾಗಿ ಬೆಳೆದಿದ್ದ ಗಾಂಜಾ ಗಿಡ ಮತ್ತು ಆರೋಪಿ ಪೋಲಿಸರ ವಶಕ್ಕೆ
ಚನ್ನಪಟ್ಟಣ:ಸೆ/17/20/ಗುರುವಾರ. ತಾಲ್ಲೂಕಿನ ವಿರುಪಾಕ್ಷಿಪುರ ಹೋಬಳಿಯ ಸಿಂಗರಾಜಪುರ ಗ್ರಾಮದ ಮನೆಯೊಂದರ ಹಿತ್ತಲಿನಲ್ಲಿ ಅಕ್ರಮವಾಗಿ ಬೆಳೆದಿದ್ದ 23 ಕಿಲೋ ತೂಕದ ಗಾಂಜಾ ಗಿಡಗಳನ್ನು ತಹಶಿಲ್ದಾರ್ ನಾಗೇಶ್ ಹಾಗೂ ಅಕ್ಕೂರು ಪೋಲೀಸ್ ಠಾಣೆಯ ಪಿಎಸ್ಐ ನೇತೃತ್ವದಲ್ಲಿ ವಶಪಡಿಸಿಕೊಂಡಿದ್ದು ಆರೋಪಿಯನ್ನು ಬಂಧಿಸಿದ್ದಾರೆ.
ಸಿಂಗರಾಜಪುರ ಗ್ರಾಮದ ಹೊಂಬಾಳಮ್ಮ ಬಿನ್ ಪುಟ್ಟಸ್ವಾಮಿ ಎಂಬುವವರ ಖಾನೇಷುವಾರಿ 521/144ಎ ನಂಬರಿನ ಮನೆಯ ಹಿತ್ತಲಿನಲ್ಲಿ ಲೇ ಮಿಷಿನ್ ಕರಿಗೌಡ ರ ಮಗ ಪುಟ್ಟಸ್ವಾಮಿ ಎಂಬ ವ್ಯಕ್ತಿಯು ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿರುವ ಖಚಿತ ಮಾಹಿತಿಯ ಆಧಾರದ ಮೇರೆಗೆ ಈ ದಾಳಿ ನಡೆಸಿದ್ದಾರೆ.
ದಾಳಿಯ ವೇಳೆ ಅಕ್ಕೂರು ಪೋಲೀಸ್ ಠಾಣೆಯ ಪಿಎಸ್ಐ ಭಾಸ್ಕರ್ ಮತ್ತು ಸಿಬ್ಬಂದಿಗಳು ಹಾಗೂ ಕಂದಾಯ ಇಲಾಖೆಯ ಭರತ್ ಮತ್ತು ಗ್ರಾಮ ಪಂಚಾಯತಿಯ ಅಧಿಕಾರಿಗಳು ಭಾಗವಹಿಸಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು