ನಗರದ ಪೂರ್ವ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟಗಾರನ ಸೆರೆ ಹಿಡಿದ ಪೋಲೀಸರು
ಚನ್ನಪಟ್ಟಣ:ಸೆ/17/20/ಗುರುವಾರ. ನಗರದ ಎಪಿಎಂಸಿ ಯಾರ್ಡ್ ಬಳಿ ಗಾಂಜಾ ಮಾರುತ್ತಿದ್ದ ವ್ಯಕ್ತಿಯನ್ನು ಪೂರ್ವ ಪೋಲೀಸ್ ಠಾಣೆಯ ಪೋಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಯ್ಯದ್ ರಫೀಕ್ ಬಿನ್ ಸಯ್ಯದ್ ದಸ್ತಗೀರ್ ಎನ್ನುವ ರಾಮನಗರ ಯಾರಬ್ ನಗರದ ಖ್ವಾಜಾ ವೃತ್ತದ ವ್ಯಕ್ತಿಯು ಚನ್ನಪಟ್ಟಣದ ಎಪಿಎಂಸಿ ಯಾರ್ಡ್ ಬಳಿ ಗಾಂಜಾ ಮಾರುವಾಗ ಸಿಕ್ಕಿ ಬಿದ್ದಿದ್ದು, ಆತನ ಬಳಿ ಇದ್ದ 140 ಗ್ರಾಂ ನ 14 ಪೊಟ್ಟಣಗಳು ಮತ್ತು ಆತನ ಮನೆಯ ಹಿಂಭಾಗ ಬೆಳೆದಿದ್ದ ಮೂರು ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ. ನಗರದಲ್ಲಿ 2 ಕಿಲೋ 60 ಗ್ರಾಂ ಮತ್ತು ಮನೆಯಲ್ಲಿ 06 ಕಿಲೋ 300 ಗ್ರಾಂ ಒಟ್ಟು 8 ಕಿಲೋ 360 ಗ್ರಾಂ ವಶಪಡಿಸಿಕೊಂಡಿರುವುದಾಗಿ ತಿಳಿದುಬಂದಿದೆ.
ಈತನನ್ನು ಅನಾರೋಗ್ಯ ನಿಮಿತ್ತ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದು ಬಂದಿದ್ದು, ವೈದ್ಯಕೀಯ ವರದಿ ನಂತರ ಹೆಚ್ಚಿನ ವಿಚಾರಣೆ ನಡೆಸುವುದಾಗಿ ಬಲ್ಲ ಮೂಲಗಳು ತಿಳಿಸಿವೆ.
ದಾಳಿಯ ವೇಳೆ ಪೂರ್ವ ಪೋಲೀಸ್ ಠಾಣೆಯ ಪಿಎಸ್ಐ ಪ್ರಕಾಶ್ ಮತ್ತು ಸಿಬ್ಬಂದಿ ಮತ್ತು ಕಂದಾಯ ಇಲಾಖೆಯ ಮಂಜುನಾಥ ಮತ್ತು ಸಿಬ್ಬಂದಿಗಳು ಹಾಜರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು