Tel: 7676775624 | Mail: info@yellowandred.in

Language: EN KAN

    Follow us :


ಪ್ರಾಧಿಕಾರದ ಪಾರ್ಕ್ ನಲ್ಲಿ ಕೊಲೆ: ಗಾಂಜಾ ಘಮಲಿನ ಕೈವಾಡವಿರುವ ಅನುಮಾನ

Posted date: 18 Sep, 2020

Powered by:     Yellow and Red

ಪ್ರಾಧಿಕಾರದ ಪಾರ್ಕ್ ನಲ್ಲಿ ಕೊಲೆ: ಗಾಂಜಾ ಘಮಲಿನ ಕೈವಾಡವಿರುವ ಅನುಮಾನ

ಚನ್ನಪಟ್ಟಣ:ಸೆ/18/20/ಶುಕ್ರವಾರ. ನಗರದ ಹೊರವಲಯದಲ್ಲಿರುವ ಕಣ್ವ ಪ್ರಾಧಿಕಾರದ, ಕೆಪಿಟಿಸಿಎಲ್ ನ ಕಛೇರಿಯ ಸಮೀಪ ಯುವಕೋನರ್ವನನ್ನು ಹರಿತ ಆಯುಧಗಳಿಂದ ಇರಿದು ಕೊಲೆ ಮಾಡಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.


ಕ್ಷುಲ್ಲಕ ಕಾರಣಕ್ಕಾಗಿ ಮೂವರ ನಡುವೆ ಆರಂಭಗೊಂಡ ಜಗಳ ಓರ್ವನ ದಾರುಣ ಹತ್ಯೆಯಲ್ಲಿ ಅಂತ್ಯವಾಗಿದೆ. ಚನ್ನಪಟ್ಟಣ ನಗರದ ಸಯದ್ ವಾಡಿ ನಿವಾಸಿ ರಾಹೀಬ್ ಪಾಷ ( 24) ಕೊಲೆಯಾದವನು.


ಗುರುವಾರ ರಾತ್ರಿ ತನ್ನ ಸ್ನೇಹಿತರ‌ ಜೊತೆಗೂಡಿ ಸಾತನೂರು ರಸ್ತೆಯಲ್ಲಿರುವ ಕಣ್ಣ ಬಡಾವಣೆಗೆ ತೆರಳಿದ್ದ ರಾಹೀಬ್ ಸ್ನೇಹಿತರೊಂದಿಗೆ ಸಣ್ಣ ಕಾರಣಕ್ಕೆ ಜಗಳ ಮಾಡಿಕೊಂಡಿದ್ದಾನೆ. ಈ ವೇಳೆ ಸ್ನೇಹಿತರು ಆತನಿಗೆ ಡ್ರಾಗ್ಯರ್ ನಿಂದ ಚುಚ್ಚಿ ಪರಾರಿ ಆಗಿದ್ದಾರೆ.


ಡ್ರಾಗ್ಯರ್ ನಿಂದ ಚುಚ್ಚಿದ ನಂತರ ಸತ್ತು ಹೋಗಿದ್ದಾನೆ ಎಂದು ತಿಳಿದ ಕೊಲೆಗಡುಕರು ಹೊರಟುಹೋದ ನಂತರ, ತೀವ್ರಗಾಯಗೊಂಡಿದ್ದರೂ ಸಹ ರಾಹಿಬ್ ತನ್ನ ಮನೆಯವರಿಗೆ ತನ್ನ ಮೊಬೈಲ್ ಮೂಲಕ ಕರೆ ಮಾಡಿದ್ದ ರಾಹೀಬ್, ಸಯ್ಯದ್ ಮುನಿರ್, ಸಯ್ಯದ್ ವಲ್ಲಿ, ಜುಬೇರ್ ಎಂಬುವರು ತನ್ನ ಮೇಲೆ ಡ್ಯಾಗರ್ ನಿಂದ ಹಲ್ಲೆ ನಡೆಸಿದ್ದಾರೆ ಎನ್ನುವ ಮಾಹಿತಿಯನ್ನು ನೀಡಿದ್ದ.

ಕುಟುಂಬ ಸದಸ್ಯರು ಸ್ಥಳಕ್ಕೆ ಹೋಗುವಷ್ಟರಲ್ಲಿ ರಾಹೀಬ್ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


ಪ್ರಕರಣ ದಾಖಲು ಮಾಡಿಕೊಂಡಿರುವ ಚನ್ನಪಟ್ಟಣ ‌ಗ್ರಾಮಾಂತರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು ತನಿಖೆ ಮುಂದುವರಿಸಿದ್ದಾರೆ. ಈ ಕೊಲೆಗೆ ಗಾಂಜಾ ಮತ್ತು ಕಾರಣ ಎಂದು ಹೇಳಲಾಗುತ್ತಿದ್ದು ಇದನ್ನು ಪೊಲೀಸರು ಖಚಿತಪಡಿಸಿಲ್ಲ.

ಆರೋಪಿಗಳ ವಿಚಾರಣೆಯ ನಂತರ ಸತ್ಯಾಂಶ ಹೊರಬಂದು ತಾಲ್ಲೂಕಿಗೂ ಮತ್ತು ಗಾಂಜಾಗೂ ಇರುವ ಸಂಬಂಧ ಬಹಿರಂಗಗೊಳ್ಳಲಿದೆಯೇ ಎಂಬುದನ್ನು ಕಾಯ್ದು ನೋಡಬೇಕಾಗಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑