Tel: 7676775624 | Mail: info@yellowandred.in

Language: EN KAN

    Follow us :


ನಾಳೆ ನೀರು ಸರಬರಾಜುವಿನಲ್ಲಿ ವ್ಯತ್ಯಯ ಸಾರ್ವಜನಿಕರು ಸಹಕಕರಿಸುವಂತೆ ಜಲಮಂಡಳಿ ಮನವಿ

Posted date: 18 Sep, 2020

Powered by:     Yellow and Red

ನಾಳೆ ನೀರು ಸರಬರಾಜುವಿನಲ್ಲಿ ವ್ಯತ್ಯಯ ಸಾರ್ವಜನಿಕರು ಸಹಕಕರಿಸುವಂತೆ ಜಲಮಂಡಳಿ ಮನವಿ

ರಾಮನಗರ:ಸೆ/18/29/ಶುಕ್ರವಾರ. ರಾಮನಗರ ನಗರದ ದ್ಯಾವರಸೇಗೌಡನದೊಡ್ಡಿ ಪಂಪ್‌ಹೌಸ್ ಬಳಿ ಹೊಸ ಬಲ ಶುದ್ಧೀಕರಣಕಕ್ಕೆ 300 ಮಿ.ಮೀ. ವ್ಯಾಸದ ಏರು ಕೊಳವೆ ಮಾರ್ಗವನ್ನು ಸಂಪರ್ಕಿಸಲು ಸೆ. 19 ರಿಂದ 20 ರ ವರೆಗೆ  ತುರ್ತು/ದುರಸ್ಥಿ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ.


ರಾಮನಗರ ನಗರಕ್ಕೆ ಶಿಂಷಾ ನದಿ ಮೂಲ ಮತ್ತು ಬಿಡಬ್ಲ್ಯೂಎಸ್ ಎಸ್ ಬಿ (Bwssb)  ಬ್ಯಾಕ್‌ವಾಶ್ ನೀರಿನ ಮೂಲದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಚನ್ನಪಟ್ಟಣ ನಗರದ ಸಾತನೂರು ಸರ್ಕಲ್ ಹತ್ತಿರ 450 ಮಿ.ಮೀ. ವ್ಯಾಸದ ಮುಖ್ಯ ಕೊಳವೆ ಮಾರ್ಗದಲ್ಲಿ ಸೋರಿಕೆ ಕಂಡುಬಂದಿದೆ.

ಇದನ್ನು ದುರಸ್ಥಿ ಮಾಡುವ ಸಲುವಾಗಿ ರಾಮನಗರ ನಗರದ ಎಲ್ಲಾ ವಾರ್ಡುಗಳಲ್ಲಿ ಸೆ. 19 ರಿಂದ 20 ರ ವರೆಗೆ ಕಾವೇರಿ ಮೂಲದ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತಿದೆ.


 ಸಾರ್ವಜನಿಕರು ರಾಮನಗರ ನಗರಸಭೆ ಹಾಗೂ ಕರ್ನಾಟಕ ಜಲಮಂಡಳಿಗೆ ಸಹಕರಿಸುವಂತೆ ಚನ್ನಪಟ್ಟಣ ಉಪ ವಿಭಾಗದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑