Tel: 7676775624 | Mail: info@yellowandred.in

Language: EN KAN

    Follow us :


ವೃದ್ದೆಯ ಕತ್ತು ಹಿಸುಕಿ ಆಭರಣ ದೋಚಲೆತ್ನಿಸಿದ ದುಷ್ಕರ್ಮಿಗಳಿಗೆ ಸಾರ್ವಜನಿಕರಿಂದ ಗೂಸಾ

Posted date: 21 Sep, 2020

Powered by:     Yellow and Red

ವೃದ್ದೆಯ ಕತ್ತು ಹಿಸುಕಿ ಆಭರಣ ದೋಚಲೆತ್ನಿಸಿದ ದುಷ್ಕರ್ಮಿಗಳಿಗೆ ಸಾರ್ವಜನಿಕರಿಂದ ಗೂಸಾ

ಚನ್ನಪಟ್ಟಣ:ಸೆ/21/20/ಸೋಮವಾರ. ನಗರದ ಹೊರವಲಯದಲ್ಲಿರುವ ಒಂಟಿ ವೃದ್ದೆಯ ಮನೆಗೆ ನುಗ್ಗಿದ್ದ ದುಷ್ಕರ್ಮಿಗಳಿಬ್ಬರು, ವೃದ್ದೆಯ ಕತ್ತು ಹಿಸುಕಿ ಒಡವೆಗಳನ್ನು ದೋಚಲು ಯತ್ನಿಸಿದ ಸಂದರ್ಭದಲ್ಲಿ ವೃದ್ದೆಯ ಚೀರಾಟಕ್ಕೆ ಎಚ್ಚೆತ್ತ ಸ್ಥಳೀಯರು, ಅವರನ್ನು ಹಿಡಿದು ಕಂಬಕ್ಕೆ ಕಟ್ಟಿ, ಧರ್ಮದೇಟು ನೀಡಿ ಪೋಲಿಸರಿಗೆ ಒಪ್ಪಿಸಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ.


ಪ್ರಗತಿ ಕ್ಲಬ್ ಎದುರಿನ ಶ್ರೀ ಸಾಯಿ ಎನ್ ಕ್ಲೇವ್ ಬಡಾವಣೆಯ (ಅಂದಿನ ಮಂಗಳೇಶ್ವರ ದೇವಾಲಯ) ಮನೆಯೊಂದರಲ್ಲಿ ಮಂಗಳವಾರಪೇಟೆ ಯ ಸರೋಜಮ್ಮ ಎಂಬ ವೃದ್ದೆ ವಾಸವಾಗಿದ್ದು, ಇದನ್ನರಿತ ದುಷ್ಕರ್ಮಿಗಳು ಹಾಡಹಗಲು ನಡುಮಧ್ಯಾಹ್ನದ ವೇಳೆಯೇ ಮನೆಗೆ ನುಗ್ಗಿ ದರೋಡಗೆ ಯತ್ನಿಸಿದ್ದಾರೆ.


ವೃದ್ದೆಯ ಚೀರಾಟಕ್ಕೆ ಎಚ್ಚೆತ್ತ ಸ್ಥಳಿಯರು ಕೂಡಲೇ ಧಾವಿಸಿ ದರೋಡೆಗೆ ಯತ್ನಿಸಿದವರನ್ನು ಹಿಡಿದು ಕಂಬಕ್ಕೆ ಕಟ್ಟಿ ಧರ್ಮದೇಟು ನೀಡಿ ಪೋಲಿಸರಿಗೆ ಒಪ್ಪಿಸಿದ್ದಾರೆ.

ವೃದ್ದೆಯ ಮನೆಗೆ ಭೇಟಿ ನೀಡಿದ ಪೋಲೀಸರು ಪ್ರಗತಿ ಕ್ಲಬ್ ಮತ್ತು ಸ್ಥಳೀಯ ಸಿಸಿ ಟಿವಿ ಗಳ ಮಾಹಿತಿ ಪಡೆಯುತ್ತಿದ್ದು, ರಾಮನಗರ ತಾಲ್ಲೂಕಿನ ಈರ್ವರನ್ನು ಪೋಲೀಸರು ಬಂಧಿಸಿ, ವಿಚಾರಣೆ ನಡೆಸಿದ್ದಾರೆ. ವೃದ್ಧ ಮಹಿಳೆಯನ್ನು ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಿರುವುದಾಗಿ ತಿಳಿದುಬಂದಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑