Tel: 7676775624 | Mail: info@yellowandred.in

Language: EN KAN

    Follow us :


ಮೃತಪಟ್ಟ ವೃದ್ದರಿಗೆ ನೆಗೆಟಿವ್, ಪಾಸಿಟಿವ್ ಎಂದು ಬಿಂಬಿಸಿ ಶವಸಂಸ್ಕಾರ, ಆಸ್ಪತ್ರೆಗೆ ಮುತ್ತಿಗೆ ಹಾಕಿದ ಕುಟುಂಬ

Posted date: 28 Sep, 2020

Powered by:     Yellow and Red

ಮೃತಪಟ್ಟ ವೃದ್ದರಿಗೆ ನೆಗೆಟಿವ್, ಪಾಸಿಟಿವ್ ಎಂದು ಬಿಂಬಿಸಿ ಶವಸಂಸ್ಕಾರ, ಆಸ್ಪತ್ರೆಗೆ ಮುತ್ತಿಗೆ ಹಾಕಿದ ಕುಟುಂಬ

ಚನ್ನಪಟ್ಟಣ:ಸೆ/28/20/ಸೋಮವಾರ. ಮೊದಲಿಗೆ ಎಲೆತೋಟದಹಳ್ಳಿ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ಪರೀಕ್ಷೆ ಮಾಡಿಸಿಕೊಂಡು ಹೋಗಿದ್ದು ಫಲಿತಾಂಶ ಬರುವ ಮೊದಲೇ ಅಸುನೀಗಿದ ವೃದ್ದರೊಬ್ಬರಿಗೆ ಪಾಸಿಟಿವ್ ಎಂದು ಬಿಂಬಿಸಿ ಕೊರೊನಾ ಮಾರ್ಗಸೂಚಿಯಂತೆ ಶವಸಂಸ್ಕಾರ ಮಾಡಿದ್ದನ್ನು ವಿರೋಧಿಸಿ ಎಲೆತೋಟದಹಳ್ಳಿ ಗ್ರಾಮಸ್ಥರು ಆಸ್ಪತ್ರೆಗೆ ಮುತ್ತಿಗೆ ಹಾಕಿ ವೈದ್ಯರ ವಿರುದ್ಧ ಪ್ರತಿಭಟನೆ ನಡೆಸಿದರು.


ಎಲೆತೋಟದಹಳ್ಳಿ ಗ್ರಾಮದ ವೃದ್ದರೊಬ್ಬರು ಪಾಸಿಟಿವ್‌ನಿಂದ ಮರಣ ಹೊಂದಿದ್ದಾರೆ ಎಂದು ವ್ಯಕ್ತಿಯ ಶವ ಸಂಸ್ಕಾರ ನಡೆಸಿದ ನಂತರ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ನೆಗೆಟಿವ್ ಬಂದಿದೆ. ಇದನ್ನು ಕುಟುಂಬಸ್ಥರು ಮನಗಂಡ ನಂತರ ಆಸ್ಪತ್ರೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಘಟನೆ ಅಕ್ಕೂರು ಪೊಲೀಸ್ ಠಾಣೆ ವ್ಯಾಪ್ತಿಯ ತಾಲ್ಲೂಕಿನ ಎಲೆತೋಟದಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.


ತಾಲ್ಲೂಕಿನ ಕರ್ಲಹಳ್ಳಿ ಗ್ರಾಮದ ನಂಜಪ್ಪ (೬೦) ಎಂಬುವರೇ ಕೊರೋನಾ ಪಾಸಿಟಿವ್‌ನಿಂದ ಮೃತಪಟ್ಟಿದ್ದಾರೆಂದು ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯರು ತಿಳಿಸಿದ್ದು, ಆದರೆ ಅನಾರೋಗ್ಯ ಪೀಡಿತರಾಗಿದ್ದ ಸಂದರ್ಭದಲ್ಲಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಗಂಟಲ ದ್ರವ ಪರೀಕ್ಷೆ  ನಡೆಸಿದರೆನ್ನಲಾಗಿದೆ.

ಅಲ್ಲದೆ ಪರೀಕ್ಷೆಯ ಫಲಿತಾಂಶಕ್ಕಾಗಿ ಮೂರು ದಿನ ಕಾಯಬೇಕೆಂದು ವೈದ್ಯರು ತಿಳಿಸಿದ್ದರೆನ್ನಲಾಗಿದ್ದು, ಪರೀಕ್ಷಾ  ಫಲಿತಾಂಶ ಬರುವ ವೇಳೆಗೆ ಆತ ಗ್ರಾಮದಲ್ಲಿಯೇ ಮೃತಪಟ್ಟ ನಂತರ ವ್ಯಕ್ತಿಯ ಗಂಟಲಿನ ದ್ರವ ಪರೀಕ್ಷೆ ಮಾಡಿಸಲಾಗಿ ಪಾಸಿಟಿವ್ ಎಂದು ವೈದ್ಯರು ತಿಳಿಸಿ ಸರ್ಕಾರದ ನೀತಿ ನಿಯಮಾನುಸಾರ ಬಹಳ ಎಚ್ಚರಿಕೆಯಿಂದ ಶವ ಸಂಸ್ಕಾರ ನಡೆಸಲಾಯಿತು.


ಇತ್ತ ಕಡೆ ಸಾರ್ವಜನಿಕ  ಆಸ್ಪತ್ರೆಯಲ್ಲಿ ನಡೆದ ಪರೀಕ್ಷೆ ಫಲಿತಾಂಶ ನೆಗೆಟಿವ್ ಬಂದಿದ್ದರಿಂದ ಕುಪಿತಗೊಂಡ ಗ್ರಾಮಸ್ಥರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಅಸಮರ್ಪಕವಾಗಿ ಪರೀಕ್ಷೆ ನಡೆಸಿ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಠಿಸಿದ್ದಾರೆಂದು ಪ್ರತಿಭಟನೆ ನಡೆಸಿದರು.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ತಾಲ್ಲೂಕು ದಂಡಾಧಿಕಾರಿ ನಾಗೇಶ್ ರವರು ಪ್ರತಿಭಟನಾಕಾರರನ್ನು ಮನವೊಲಿಸಿ ವೈದ್ಯರು ಇದರಲ್ಲಿ ಯಾವುದೇ ರೀತಿಯ ಪ್ರಮಾದ ಮಾಡಿಲ್ಲ. ಕೆಲವು ಸಂದರ್ಭದಲ್ಲಿ ನೆಗೆಟಿವ್ ಬಂದು ಪಾಸಿಟಿವ್ ಆಗಿರುವ ಸಾಧ್ಯತೆಗಳಿವೆ. ಅನಾವಶ್ಯಕವಾಗಿ ಪ್ರತಿಭಟನೆ ಮಾಡಿದರೆ ಇದು ಅಪರಾಧವಾಗುತ್ತದೆ ಎಂದು ಪ್ರತಿಭಟನಾಕಾರರಿಗೆ ತಿಳಿ ಹೇಳಿ ಶಾಂತಿ ಕಾಪಾಡುವುದರ ಜೊತೆಗೆ ಪ್ರತಿಭಟನೆ ಕೈಬಿಡುವಂತೆ ಹೇಳಿದ ನಂತರ ಕುಟುಂಬದವರು ಶಾಂತವಾದರು ಎಂದು ತಿಳಿದುಬಂದಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑