ಕುಂತೂರುದೊಡ್ಡಿ ಬಳಿ ಮಡಿಕೇರಿ ಮೂಲದ ವ್ಯಕ್ತಿಯ ಶವ ಪತ್ತೆ*
ಚನ್ನಪಟ್ಟಣ:ಅ/08/20/ಗುರುವಾರ. ಪಾನಮತ್ತನಾದ ನಂತರ ಸಾವನ್ನಪ್ಪಿರಬಹುದು ಎಂದು ಊಹಿಸಲಾಗಿರುವ ಗಂಡಸಿನ ಮೃತದೇಹವೊಂದು ಪತ್ತೆಯಾಗಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ತಾಲ್ಲೂಕಿನ ಕುಂತೂರುದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಸಾವನ್ನಪ್ಪಿರುವ ವ್ಯಕ್ತಿ ಅಯ್ಯಪ್ಪ (60) ಮಡಿಕೇರಿ ಮೂಲದ ಲೆಟ್ ಕುನ್ನಿರಾಮನ್ ಎಂಬುವರ ಮಗನಾದ ಈತ ಕುಂತೂರುದೊಡ್ಡಿ ಬಳಿಯಿರುವ ನೇತ್ರಾವತಿ ವೈನ್ಸ್ ಬಳಿಯ ಮಿಲಿಟರಿ ಹೊಟೇಲ್ ನಲ್ಲಿ ಕೆಲಸ ಮಾಡುತ್ತಿದ್ದನೆಂದು ಹೇಳಲಾಗಿದೆ.
ಸಂಜಿವ್ ಎಂಬುವವರು ಮಿಲಿಟರಿ ಹೊಟೇಲ್ ನಡೆಸುತ್ತಿದ್ದು ಕೊರೋನಾದ ಹಿನ್ನೆಲೆಯಲ್ಲಿ ಹೊಟೇಲ್ ಬಂದ್ ಮಾಡಿದ್ದರು. ಮಡಿಕೇರಿಯವರೇ ಆದ ಸಂಜೀವ್ ತಮ್ಮವರೇ ಆದ ವಿಜಿ ಹಾಗೂ ಅಯ್ಯಪ್ಪನನ್ನು ಕರೆದುಕೊಂಡು ಬಂದು ಹೊಟೇಲ್ನಲ್ಲಿ ಸೇರಿಸಿಕೊಂಡಿದ್ದರು.
ಕೊರೋನಾ ಸಂದರ್ಭದಲ್ಲಿ ವಿಜಿ ಅವರು ಊರಿಗೆ ಹೋಗಿದ್ದರೆ ಅಯ್ಯಪ್ಪ ವಿಜಿಯವರ ಮನೆಯಲ್ಲಿಯೇ ವಾಸವಿದ್ದನೆನ್ನಲಾಗಿದ್ದು ಕುಡಿತಕ್ಕೆ ಶರಣಾಗಿದ್ದ ಆತ ಪ್ರತಿದಿನವೂ ಕುಡಿದ ಮತ್ತಿನಲ್ಲಿಯೇ ಇರುತ್ತಿದ್ದನೆನ್ನಲಾಗಿದ್ದು, ಗ್ರಾಮದ ಬೇಲಿಯ ಬಳಿ ಶವ ಪತ್ತೆಯಾಗಿದೆ.
ಕುಡಿದ ಅಮಲಿನಲ್ಲಿ ಆಯಾ ತಪ್ಪಿ ಬಿದ್ದು ಸಾವನ್ನಪ್ಪಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಈ ಪ್ರಕರಣದ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಸ್ಥಳಕ್ಕೆ ಬಂದ ಪಿಎಸ್ಐ ಶಿವಕುಮಾರ್ ಮೃತದೇಹವನ್ನು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆಗೊಳಪಡಿಸಿದಾಗ ಆತನಿಗೆ ಪಾಸಿಟಿವ್ ಕಾಣಿಸಿಕೊಂಡಿದೆ.
ತಕ್ಷಣ ಜಾಗೃತ ಪೊಲೀಸರು ಆರೋಗ್ಯ ಸಿಬ್ಬಂದಿಯಿಂದ ಎಚ್ಚರಿಕೆಯಿಂದ ಮರಣೋತ್ತರ ಪರೀಕ್ಷೆ ನಡೆಸಿ, ವಾರಸುದಾರರಿಗೆ ಒಪ್ಪಿಸಲಾಗಿದೆ. ಈ ಪ್ರಕರಣದ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು