Tel: 7676775624 | Mail: info@yellowandred.in

Language: EN KAN

    Follow us :


ಮುಸ್ಲಿಂ ಯುವತಿ ಪ್ರೀತಿಸಿದ್ದಕ್ಕೆ ಅಳಿಯನನ್ನೇ ಕೊಲೆ ಮಾಡಿದ ಯುವತಿಯ ತಂದೆ*

Posted date: 08 Oct, 2020

Powered by:     Yellow and Red

ಮುಸ್ಲಿಂ ಯುವತಿ ಪ್ರೀತಿಸಿದ್ದಕ್ಕೆ ಅಳಿಯನನ್ನೇ ಕೊಲೆ ಮಾಡಿದ ಯುವತಿಯ ತಂದೆ*

ಮಾಗಡಿ:ಅ/08/20/ಗುರುವಾರ. ಮಾಗಡಿ ತಾಲ್ಲೂಕಿನ ಕನಕೇನಹಳ್ಳಿ ಇಸ್ಲಾಂಪುರದ ಯುವತಿ ಅಂಬ್ರೀನಾಬಾನು ಹಾಗೂ ನೆಲಮಂಗಲದ ಲಕ್ಷ್ಮೀಪತಿ ಎಂಬುವವರು ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಮದುವೆಗೆ ಎರಡೂ ಕುಟುಂಬದವರು ಒಪ್ಪದ ಕಾರಣ ಕಳೆದ ವರ್ಷ ಮನೆಬಿಟ್ಟು ಹೋಗಿದ್ದರು. ಈ ಸಂಬಂಧ ನೆಲಮಂಗಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


ರಾಜಿ ಸಂಧಾನದ ಮೂಲಕ ಎರಡೂ ಕುಟುಂಬಗಳು ಓಡಿ ಹೋಗಿದ್ದ ಜೋಡಿಯನ್ನು ವಾಪಸ್ ಕರೆದು ತಂದು ರಾಜೀಸಂದಾನ ಮಾಡಿ ಸೇರಿಸಿದ್ದರು. ಆದರೆ ಕೆಲವು ಸಮಸ್ಯೆಯಿಂದ ಈ ಜೋಡಿ ಮತ್ತೆ ಮನೆಬಿಟ್ಟು ಓಡಿ ಹೋಗಿದ್ದರು. ಈ ವಿಷಯಕ್ಕೆ ಎರಡು ಕುಟುಂಬಗಳ ನಡುವೆ ಜಗಳ ನಡೆಯುತ್ತಿದ್ದವು.


ಈ ಪ್ರಕರಣದ ಸಂಬಂಧ ಯುವತಿಯ ತಂದೆ, ನಿಜಾಮುದ್ದೀನ್ ಮಾತನಾಡಿ, ಕನಕೇನಹಳ್ಳಿಯಲ್ಲಿ ನಮ್ಮ ಸಂಬಂಧಿ ಗಳಿದ್ದು, ಅಲ್ಲೇ ನನ್ನ ಮಗಳ ಮದುವೆ ಮಾಡಿಕೊಡುವುದಾಗಿ ಹುಡುಗ ಹಾಗೂ ಆತನ ಅಣ್ಣ ನಟರಾಜ್ ಬಳಿ ಮಾತನಾಡಿದ್ದ ಎನ್ನಲಾಗಿದೆ. ಅಲ್ಲದೆ ನಂಬಿಸಿ ಹುಡುಗ ಹಾಗೂ ಅವನ ಅಣ್ಣ ಇಬ್ಬರನ್ನೂ ಕರೆದು ತಂದಿದ್ದ.


ದಾರಿಮಧ್ಯೆ ನಿಜಾಮುದ್ದೀನ್ ತನ್ನ ಸಹೋದರರಾದ ಸಿಕಂದರ್, ಇಬ್ರತ್ ಹಾಗು ಆಟೋ ಮಹಮದ್ ಎಂಬುವವರಿಗೆ ಕುಡಿಸಿ, ಲಕ್ಷ್ಮೀಪತಿ (25) ಎಂಬ ಯುವಕನನ್ನು ಕೊಲೆ ಮಾಡಲಾಗಿದೆ.


ಈ ಆರೋಪಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಮತ್ತಿಬ್ಬರು ಪರಾರಿಯಾಗಿದ್ದಾರೆ.

ಮೊದಲೇ ಲೆಕ್ಕ ಹಾಕಿದ್ದಂತೆ ಆರೋಪಿತರು ನಿರ್ಜನ ಪ್ರದೇಶಕ್ಕೆ ಕರೆದು ಕೊಂಡು ಹೋಗಿ ಲಕ್ಷ್ಮಿಪತಿಯ ಬೆಲ್ಟ್ ನಿಂದಲೇ ಕತ್ತಿಗೆ ಬೀರಿ ಕೊಲೆ ಮಾಡಿದ್ದಾರೆ. ಆಗ ಜೊತೆಯಲ್ಲಿದ್ದ ನಟರಾಜ್ ಹೇಗೋ ತಪ್ಪಿಸಿಕೊಂಡಿದ್ದಾನೆ.


ಲಕ್ಷ್ಮಿಪತಿ ಕೊಲೆಯಾದ ನಂತರ ಅಣ್ಣ ನಟರಾಜ್ ಗಾಗಿ ಆರೋಪಿತರು ಹುಡುಕಾಡಿದ್ದಾರೆ. ಆದರೆ ಆತ ಅಷ್ಟರಲ್ಲಿ ಹೊಲದೊಳಗೆ ಅಡಗಿಕೊಂಡಿದ್ದಾನೆ. ಹುಡುಕಾಡುವಷ್ಟರಲ್ಲಿ ಕತ್ತಲೆಯಾದುದರಿಂದ ಪರಾರಿಯಾಗಿದ್ದಾರೆ.


ತಕ್ಷಣವೇ ಮನೆಗೆ ಬಂದ ನಟರಾಜ್ ಸಂಬಂಧಿಕರಿಗೆ ವಿಷಯ ತಿಳಿಸಿ, ಅವರೊಂದಿಗೆ ಘಟನೆ ನಡೆದ ಸ್ಥಳಕ್ಕೆ ಆಗಮಿಸಿ, ಲಕ್ಷ್ಮಿಪತಿಯ ಶವಕ್ಕಾಗಿ ಹುಡುಕಾಡಿದ್ದಾರೆ. ಶವ ಸಿಗದ ಕಾರಣ ನೆಲಮಂಗಲ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ.


ಸ್ಥಳಕ್ಕೆ ಬಂದ ಪೊಲೀಸರು ಲಕ್ಷ್ಮಿಪತಿ ಶವವನ್ನು ಪತ್ತೆ ಹಚ್ಚಿದ್ದಾರೆ, ತದನಂತರ ಆರೋಪಿತರಾದ ನಿಜಾಮುದ್ದೀನ್ ಹಾಗೂ ಸಿಕಂದರ್ ಅವರನ್ನು ವಶಕ್ಕೆ ಪಡೆದಿದ್ದಾರೆ.

ಇಬ್ರತ್ ಹಾಗೂ ಆಟೋ ಮಹಮದ್ ತಲೆ ಮರೆಸಿಕೊಂಡಿದ್ದಾರೆ. ಅವರಿ ಗಾಗಿ ಹುಡುಕಾಟ ನಡೆದಿದೆ.

ಕುದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೃತ್ತ ನಿರೀಕ್ಷಕ ಮಂಜುನಾಥ್ ನೇತೃತ್ವದಲ್ಲಿ ತನಿಖೆ ನಡೆ ಯುತ್ತಿದೆ.


*ಕೊಲೆ ಮಾಡಿದ್ದಾಗಿ ಹುಡುಗಿ ತಂದೆ ಒಪ್ಪಿಗೆ;*

ಇಲ್ಲಿನ ಎಸ್‌ಪಿಯರಾದ ಎಸ್.ಗಿರೀಶ್, ಅನ್ಯ ಧರ್ಮದ ಯುವಕ ತನ್ನ ಮಗಳನ್ನು ಪ್ರೀತಿಸಿದ್ದು, ಅವರಿಗೆ ಮದುವೆ ಮಾಡಿದರೆ ಮರ್ಯಾದೆ ಹೋಗುತ್ತದೆ, ಅದನ್ನು ಸಹಿಸಲಾಗದೆ ನಾನೇ ಕೊಂದೆ ಎಂದು ಯುವತಿಯ ತಂದೆ ನಿಜಾಮುದ್ದೀನ್ ಒಪ್ಪಿಕೊಂಡಿದ್ದಾನೆ ಎಂದು ಹೇಳಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑