ಪತ್ರಕರ್ತರು ನಿಧನರಾದಾಗ ಅವರಿಗೆ ಸಹೋದ್ಯೋಗಿಗಳೇ ನೆರವಾಗುವ ಮಟ್ಟಕ್ಕೆ ಸಂಘವು ಬೆಳೆಯಬೇಕು; ನಟರಾಜ್
ಚನ್ನಪಟ್ಟಣ:ಅ/21/20/ಬುಧವಾರ. ಸಮಯದ ಅರಿವೇ ಇಲ್ಲದೇ, ಸರ್ವರ ಕಷ್ಟಗಳಿಗೂ ತಮ್ಮ ವರದಿಗಳಿಂದಲೇ ನ್ಯಾಯ ಕೊಡಿಸುವ ಮೂಲಕ ಸಮಾಜಕ್ಕೆ ನೆರವಾಗುವ ಒಬ್ಬ ಪತ್ರಕರ್ತ ನಿಧನರಾದಾಗ ಅವರಿಗೆ ನೆರವಾಗುವವರ ಸಂಖ್ಯೆ ಕಡಿಮೆ ಇರುತ್ತದೆ. ಅವರಿವರ ಬಳಿ ಮಡಿದ ಪತ್ರಕರ್ತನ ಕುಟುಂಬಕ್ಕೆ ನೆರವು ಕೇಳುವ ಬದಲು ತಾಲ್ಲೂಕು ಮತ್ತು ಜಿಲ್ಲಾ ಪತ್ರಕರ್ತರು ಒಗ್ಗೂಡಿ, ಒಂದು ನಿಧಿಯನ್ನು ಶೇಖರಿಸಿ ಸಂಘವೇ ನೆರವಾಗುವಂತಹ ಕೆಲಸವಾಗಬೇಕು ಎಂದು ಟಿವಿ೫ ನ ಜಿಲ್ಲಾ ವರದಿಗಾರರಾದ ನಟರಾಜು ರವರು ಅಭಿಪ್ರಾಯ ಪಟ್ಟರು.
ಅವರು ಇತ್ತೀಚಿಗೆ ಅಕಾಲಿಕ ಮರಣ ಹೊಂದಿದ ಟಿವಿ ೯ ರಾಜು ಎಂದೇ ಪ್ರಖ್ಯಾತರಾಗಿದ್ದ ನಾಗರಾಜು ರವರಿಗೆ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿದರು.
ಹಿರಿಯ ಪತ್ರಕರ್ತ ಲಕ್ಷ್ಮೀಪತಿ ಯವರು ಮಾತನಾಡಿ ನಾಗರಾಜು ರವರ ವಯಸ್ಸು ಸಾಯುವಂತಹ ವಯಸ್ಸಲ್ಲ. ಒಬ್ಬ ಛಾಯಾಗ್ರಾಹಕರಾಗಿದ್ದುಕೊಂಡು, ನಂತರ ಪತ್ರಕರ್ತರಾಗಿ, ಡಿಜಿಟಲ್ ಮೀಡಿಯಾ ಗೆ ಕಾಲಿಟ್ಟು ಉತ್ತಮ ವರದಿಗಳನ್ನು ನೀಡುವ ಮೂಲಕ ತಮ್ಮದೇ ಛಾಪು ಮೂಡಿಸಿದ್ದರು. ಅವರು ತಮ್ಮ ಆರೋಗ್ಯವನ್ನು ಗಣನೆಗೆ ತೆಗೆದುಕೊಳ್ಳದ ಕಾರಣ ಅಕಾಲಿಕ ಮರಣಕ್ಕೀಡಾಗಿದ್ದು ದುರಂತ. ಅವರಿಗೆ ನಾವೆಲ್ಲರೂ ನೆರವಾಗಬೇಕು ಎಂದರು.
ರೇಷ್ಮೆಸೀಮೆ ದಿನ ಪತ್ರಿಕೆಯ ಸಂಪಾದಕರಾದ ರಮೇಶ್ ಗೌಡ ಮತ್ತು ಗುರುಮೂರ್ತಿ ಯವರು ಈ ಸಂದರ್ಭದಲ್ಲಿ ಮೃತ ನಾಗರಾಜು ರವರಿಗೆ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ತಾಲ್ಲೂಕಿನ ಪತ್ರಕರ್ತರು ಉಪಸ್ಥಿತರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು