ಅಬ್ಬೂರುದೊಡ್ಡಿ ಗ್ರಾಮದ ಬೀರೇಶ್ವರ ಶಾಲೆಯ ಸುತ್ತ, ಒತ್ತುವರಿ ತೆರವುಗೊಳಿಸಿದ ಕಂದಾಯ ಇಲಾಖೆ
ಚನ್ನಪಟ್ಟಣ:ಅ/23/20/ಶುಕ್ರವಾರ. ತಾಲ್ಲೂಕಿನ ಅಬ್ಬೂರುದೊಡ್ಡಿ ಗ್ರಾಮದಲ್ಲಿರುವ ಶ್ರೀ ಬೀರೇಶ್ವರ ಶಾಲೆಯ ಸುತ್ತ ಕೆಲವು ರೈತರು ಒತ್ತುವರಿ ಮಾಡಿಕೊಂಡಿದ್ದು, ಟ್ರಸ್ಟ್ ನ ಮುಖ್ಯಸ್ಥರು ಒತ್ತುವರಿ ತೆರವುಗೊಳಿಸಿಕೊಡುವಂತೆ ತಹಶಿಲ್ದಾರ್ ನಾಗೇಶ್ ರವರಿಗೆ ಮನವಿ ಸಲ್ಲಿಸಿದರು. ಸ್ಪಂದಿಸಿದ ತಹಶಿಲ್ದಾರ್ ರವರು ಸರ್ವೇ ಮಾಡಿಸಿ ತೆರವುಗೊಳಿಸಿದರು.
438/1 ರಲ್ಲಿ 2 ಎಕರೆ ಮತ್ತು 438/2 ರಲ್ಲಿ 1.16 ಗುಂಟೆ ಜಮೀನನ್ನು ದಾನಿಗಳು ಶ್ರೀ ಬೀರೇಶ್ವರ ಶಾಲೆಗೆಂದು ನೀಡಿದ್ದರು. ಸದ್ಯ ಶಾಲೆಯನ್ನು ವಿಶ್ವಚೇತನ ಕುವೆಂಪು ಆಧ್ಯಾತ್ಮಿಕ ಕೇಂದ್ರ ಮತ್ತು ರಾಷ್ಟ್ರೋತ್ಥಾನ ಸಂಸ್ಥೆಯು ಒಗ್ಗೂಡಿ ನಡೆಸುತ್ತಿದ್ದು, ಮುಂದಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಒತ್ತುವರಿ ತೆರವುಗೊಳಿಸುವಂತೆ ಮನವಿ ಮಾಡಿದ್ದರಿಂದ ತಹಶಿಲ್ದಾರ್ ನೇತೃತ್ವದಲ್ಲಿ ಪೋಲಿಸರ ನೆರವಿನೊಂದಿಗೆ ತೆರವುಗೊಳಿಸಲಾಯಿತು.
ಒತ್ತುವರಿ ತೆರವು ಸಂದರ್ಭದಲ್ಲಿ ವಿಶ್ವಚೇತನ ಕುವೆಂಪು ಆಧ್ಯಾತ್ಮಿಕ ಕೇಂದ್ರದ ಮಧುಕರ್, ರೆವಿನ್ಯೂ ಇನ್ಸ್ಪೆಕ್ಟರ್ ಕಾಂತರಾಜು, ಸರ್ವೇ ಇಲಾಖೆಯ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು, ಗ್ರಾಮಾಂತರ ಠಾಣೆಯ ಪೋಲಿಸರು ಮತ್ತು ಶಾಲೆಯ ಮುಖ್ಯಸ್ಥರು ಉಪಸ್ಥಿತರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು