Tel: 7676775624 | Mail: info@yellowandred.in

Language: EN KAN

    Follow us :


ಕ್ಷುಲ್ಲಕ ಕಾರಣಕ್ಕಾಗಿ ಪೇದೆಯೊಬ್ಬನಿಂದ ಮಾಜಿ ಗ್ರಾಮ ಪಂಚಾಯತಿ ಸದಸ್ಯರೊಬ್ಬನಿಗೆ ಥಳಿತ

Posted date: 11 Nov, 2020

Powered by:     Yellow and Red

ಕ್ಷುಲ್ಲಕ ಕಾರಣಕ್ಕಾಗಿ ಪೇದೆಯೊಬ್ಬನಿಂದ ಮಾಜಿ ಗ್ರಾಮ ಪಂಚಾಯತಿ ಸದಸ್ಯರೊಬ್ಬನಿಗೆ ಥಳಿತ

ಚನ್ನಪಟ್ಟಣ:ನ/11/20/ಮಂಗಳವಾರ.


ಠಾಣೆಗೆ ಬಂದಿರುವ ದೂರಿನ ವಿಚಾರಣೆಯನ್ನು ಹಿಂಪಡೆಯುವಂತೆ ಗಲಾಟೆ ಮಾಡಿ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯರೋರ್ವರ ಮೇಲೆ ಪೇದೆಯೋರ್ವ ಹಲ್ಲೆ ನಡೆಸಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ತಾಲ್ಲೂಕಿನ ವಂದಾರಗುಪ್ಪೆ ಬಳಿಯ ಮಾರುತಿ ವಿದ್ಯಾರ್ಥಿನಿಲಯದ ಬಳಿ ನಡೆದಿದೆ.


ಹಲ್ಲೆಗೊಳಗಾಗಿರುವ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಕರಿಕಲ್‌ದೊಡ್ಡಿ ರಾಜೇಶ್ (೪೦) ಎಂದು ಹೇಳಲಾಗಿದ್ದು ಅದೇ ಗ್ರಾಮದ ಪೊಲೀಸ್ ಪೇದೆ ವೆಂಕಟೇಶ್ ಎಂಬುವರು ಹಲ್ಲೆ ನಡೆಸಿದರೆಂದು ಆರೋಪಿಸಲಾಗಿದೆ.

ಈಗಾಗಲೇ ಹಲವಾರು ಬಾರಿ ರಾಜೇಶ್ ಎಂಬುವರ ಮೇಲೆ ಹಲ್ಲೆ ನಡೆದಿತ್ತು ಎಂದು ಹೇಳಲಾಗಿದ್ದು, ಪೊಲೀಸ್ ಪೇದೆ ವೆಂಕಟೇಶ್ ಎಂಬುವರ ಬಗ್ಗೆ ರಾಜೇಶ್ ಎಸ್.ಪಿ ರವರಿಗೆ ದೂರು ನೀಡಿದ್ದ ಪರಿಣಾಮ ಎಸ್.ಪಿ ರವರಿಂದ ಸಂಬಂಧಿಸಿದ ಠಾಣೆಗೆ ಸಂಬಂಧಿಸಿದ ವೆಂಕಟೇಶ್‌ರವರನ್ನು ಬರಮಾಡಿಕೊಂಡು ವಿಚಾರಣೆ ಮಾಡುವಂತೆ ಸೂಚಿಸಲಾಗಿತ್ತು ಎಂದು ರಾಜೇಶ್ ತಿಳಿಸಿದ್ದಾರೆ.


ಇದೇ ವಿಚಾರವಾಗಿ ಮಾರುತಿ ವಿದ್ಯಾರ್ಥಿನಿಲಯದ ಬಳಿ ರಾಜೇಶ್‌ನನ್ನು ಪ್ರಶ್ನೆ ಮಾಡಿದ ವೆಂಕಟೇಶ್ ಇಬ್ಬರಿಗೂ ವಾಗ್ವಾದ ನಡೆದು ಗಲಾಟೆಗೆ ತಿರುಗಿ ಮುಖದ ಮೇಲೆ ಹೊಡೆದು ಗಂಭೀರ ಗಾಯಗೊಳಿಸಿದರೆಂದು ರಾಜೇಶ್ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಗಾಯಗೊಂಡ ರಾಜೇಶ್ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿದ್ದು, ಪೇದೆ ವೆಂಕಟೇಶ್ ನನಗೆ ಕೊಲೆ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑