ಚನ್ನಪಟ್ಟಣ ಗ್ರಾಮಾಂತರ ಪೋಲೀಸರಿಂದ 28 ದ್ವಿಚಕ್ರ ವಾಹನಗಳ ದಸ್ತಗಿರಿ, ಮಂಡ್ಯ ಮೂಲದ ಐವರು ಕಳ್ಳರ ಬಂದನ
ಚನ್ನಪಟ್ಟಣ:ನ/17/20/ಮಂಗಳವಾರ.
ಮಂಡ್ಯ ಮತ್ತು ರಾಮನಗರ ಜಿಲ್ಲೆಯಲ್ಲಿ ಕಳ್ಳತನ ಮಾಡಿದ್ದ 28 ದ್ವಿಚಕ್ರ ವಾಹನಗಳನ್ನು ದಸ್ತಗಿರಿ ಮಾಡಿ, ಐದು ಮಂದಿ ಐನಾತಿ ಕಳ್ಳರನ್ನು ಗ್ರಾಮಾಂತರ ಪೋಲೀಸರು ಬಂಧಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯ ಕರಿಕಲ್ ದೊಡ್ಡಿ ಬಳಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಸವಾರರನ್ನು ತಡೆಗಟ್ಟಿದ ನಿರೀಕ್ಷಕಿ ಮಮತಾ ಮತ್ತು ಸಿಬ್ಬಂದಿಗಳು ವಿಚಾರಣೆ ನಡೆಸಿದ ನಂತರ ಆರೋಪಿಗಳು 28 ಬೈಕ್ ಗಳನ್ನು ಕದ್ದು ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ತದನಂತರ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಗಿರೀಶ್ ಮತ್ತು ಎಎಸ್ಪಿ ರಾಮರಾಜನ್ ಮಾರ್ಗದರ್ಶನ ದಲ್ಲಿ ವೃತ್ತ ನಿರೀಕ್ಷಕ ವಸಂತ್ ಮತ್ತು ನಿರೀಕ್ಷಕ ಶಿವಕುಮಾರ್ ನೇತೃತ್ವದಲ್ಲಿ ಫೀಲ್ಡ್ ಗೆ ಇಳಿದ ಗ್ರಾಮಾಂತರ ಪೋಲೀಸರು ಮಂಡ್ಯ ಜಿಲ್ಲೆಯಲ್ಲಿ 18 ಮತ್ತು ರಾಮನಗರ ಜಿಲ್ಲೆಯಲ್ಲಿ 10 ದ್ವಿಚಕ್ರ ವಾಹನಗಳನ್ನು ದಸ್ತಗಿರಿ ಮಾಡಿ ಕಳ್ಳತನ ಮಾಡುತ್ತಿದ್ದ ಇಬ್ಬರು ಮತ್ತು ಕೊಂಡು ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಿದ್ದಾರೆ.
ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಚನ್ನೇಗೌಡನದೊಡ್ಡಿ ಗ್ರಾಮದ ಲೀಲಾವತಿ ಬಡಾವಣೆಯ ಚಂದನ್ ಮತ್ತು ನೀಲಕಂಠನಹಳ್ಳಿ ಗ್ರಾಮದ ಪ್ರಜ್ವಲ್ ಬೈಕ್ ಗಳನ್ನು ಕಳ್ಳತನ ಮಾಡಿದರೆ, ಚೇತನ್, ಕೌಶಿಕ್ ಮತ್ತು ಮಂಜು ಎಂಬುವವರು ಮಾರಾಟ ಮಾಡುತ್ತಿದ್ದರು.ಸಿಬ್ಬಂದಿಗಳಾದ ಇಸ್ಪೀಟೆಲೆಗಳ ಜೂಜಿಗೆ ಒಳಗಾಗಿದ್ದ ಇವರು, ಐಷಾರಾಮಿ ಜೀವನಕ್ಕಾಗಿ ಕಳ್ಳತನ ಮಾಡುತ್ತಿದ್ದರು ಎಂದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಗಿರೀಶ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ತನಿಖೆಯಲ್ಲಿ ಗ್ರಾಮಾಂತರ ಪೋಲೀಸ್ ಠಾಣೆಯ ಸಿಬ್ಬಂದಿಗಳಾದ ಮೋಹನ್, ರಾಮಕೃಷ್ಣೇಗೌಡ, ದುರುಗಪ್ಪ, ನಾಗರಾಜು, ಮಧು, ಕಾಂತರಾಜು, ಸಿದ್ದಗಂಗಪ್ಪ, ಹನುಮಂತಶೆಟ್ಟಿ ಮತ್ತು ಶಿವರಾಜು ಭಾಗವಹಿಸಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು