ಭಾಷೆಗಳನ್ನು ಪ್ರೀತಿಸಿ ಗೌರವಿಸಬೇಕು. ನ್ಯಾ ಯರಮಾಲ್ ಕಲ್ಪನಾ
ಚನ್ನಪಟ್ಟಣ.ನ:21/20/ಶನಿವಾರ. ಅನ್ಯ ಭಾಷೆಗಳನ್ನು ಮಾತನಾಡುವಾಗ ಸಂಕುಚಿತ ಭಾವನೆ ಇರಬಾರದು, ಎಲ್ಲಾ ಭಾಷೆಗಳನ್ನು ಪ್ರೀತಿಸಬೇಕು.ಗೌರವಿಸಬೇಕು. ಪ್ರಪಂಚದಲ್ಲಿ ಆರು ಸಾವಿರ ಭಾಷೆಗಳಿವೆ. ಭಾರತ ದೇಶದಲ್ಲಿ ಮೂರು ಸಾವಿರ ಭಾಷೆಗಳಿವೆ. ಎಲ್ಲವನ್ನೂ, ಎಲ್ಲರನ್ನೂ, ಎಲ್ಲರೂ ಗೌರವಿಸಬೇಕು ಎಂದು ಹಿರಿಯ ಸಿವಿಲ್ ಮತ್ತು ಜೆ ಎಂ ಎಫ್ ಸಿ ನ್ಯಾಯಾಧೀಶೆ ಯರ್ ಮಾಲ್ ಕಲ್ಪನಾ ರವರು ನುಡಿದರು.
ಅವರು ಇಂದು ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ತಾಲ್ಲೂಕು ಆಡಳಿತ ತಾಲ್ಲೂಕು ಪಂಚಾಯತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ನಗರ ಸಭೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅರಣ್ಯ ಇಲಾಖೆ, ಕನ್ನಡ ಸಂಸ್ಕೃತಿ ಇಲಾಖೆಗಳ ಸಹಯೋ ಗದೊಂದಿಗೆ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಸಭಾಂಗಣದಲ್ಲಿ ಮೂರನೇ ದಿನದ ರಾಷ್ಟ್ರೀಯ ಏಕತಾ ಸಪ್ತಾಹದ ಭಾಷಾ ಸೌಹಾರ್ದತಾ ದಿನ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭಾಷಾ ಸೌಹಾರ್ದತೆಯ ಬಗ್ಗೆ ಮಾತನಾಡಿದ ಕನ್ನಡ ಭಾಷಾ ಪಂಡಿತ ಓಂಕಾರಪ್ರಿಯ ಬಾಗೇಪಲ್ಲಿಯವರು, ಭಾಷೆಗಳಿಗೆ ಮಿತಿ ಇರಬಾರದು, ಪಾಶ್ಚಾತ್ಯರ ಅಧ್ಯಯನ ಪ್ರಕಾರವೇ ಕನ್ನಡಕ್ಕೆ ೨,೫೦೦ ವರ್ಷಗಳ ಇತಿಹಾಸವಿದೆ. ನಮ್ಮ ಮಾತೃಭಾಷೆಯನ್ನು ಹೆತ್ತ ತಾಯಿಯಂತೆ ಪ್ರೀತಿಸಿ ಗೌರವಿಸಬೇಕು. ಅನ್ಯ ಭಾಷೆಗಳಿಗೆ ಗೌರವ ನೀಡಬೇಕು ಎಂದರು.
ಸಹಸ್ರಾರು ಹೆಸರಿನ ಸಿಹಿ ತಿಂಡಿಗಳು ಇರಬಹುದು, ಆದರೆ ಅಷ್ಟು ಸಿಹಿ ತಿಂಡಿಗಳಿಗೂ ‘ಸಿಹಿ’ ಎಂಬುದೇ ಮುಖ್ಯ, ಹಾಗಾಗಿ ಜಗತ್ತಿ ನಲ್ಲಿ ಮೂರು ಪ್ರಾಚೀನ ಭಾಷೆಗಳಿವೆ, ಮೂರು ಭಾಷೆಗಳು ಸಹ ನಮ್ಮ ಭಾರತದ ದೇಶದ ಲ್ಲಿರುವುದೇ ಹೆಮ್ಮೆಯ ಸಂಗತಿ. ಮೊದಲನೆಯ ಭಾಷೆ ಯಾಗಿ ಸಂಸ್ಕೃತ, ಎರಡು ಮತ್ತು ಮೂರನೆ ಸ್ಥಾನದಲ್ಲಿ, ತಮಿಳು ಮತ್ತು ಕನ್ನಡ ಭಾಷೆಗಳಾಗಿವೆ ಎಂದರು.
ನಾವು ಕೇವಲ ಸೂಟು ಬೂಟ್ ಹಾಕಿಕೊಂಡವರನ್ನೇ ಗೌರವಿಸುವಂತಹದಲ್ಲ, ಕುರೂಪಿಯಾದ ತನ್ನ ಮಗುವನ್ನು ಹೆತ್ತ ತಾಯಿ ಹೇಗೆ ಚಿನ್ನ ರನ್ನ ಎಂದು ಸಂಬೋಧಿಸಿ ಪ್ರೀತಿಯಿಂದ ಕರೆಯುತ್ತಾಳೋ ಅದೇ ರೀತಿ ನಮ್ಮ ಭಾಷೆಯನ್ನು ಪ್ರೀತಿ ಗೌರವದಿಂದ ಗೌರವಿಸಬೇಕು. ಗಾಂಧೀಜಿಗೆ ಯಾವ ಸೂಟುಬೂಟು ಇರಲಿಲ್ಲ, ತುಂಡುಡುಗೆ ಯಲ್ಲಿ ಇದ್ದ ಅವರನ್ನು ಇಡೀ ಜಗತ್ತೇ ಗುರುತಿಸಿತ್ತು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಂ.ಮಹೇಂದ್ರ ರವರು ಹಾಗೂ ಕನ್ನಡ ಅಧ್ಯಾಪಕರಾದ ಚನ್ನ ವೀರೇಗೌಡರು ಮಾತನಾಡಿದರು.
ಕಾರ್ಯಕ್ರಮದಲ್ಲಿ ನಗರ ಪೌರಾಯುಕ್ತ ಶಿವನಂಕಾರಿಗೌಡ, ಶಿಕ್ಷಣಾಧಿಕಾರಿ ನಾಗರಾಜು, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಬಿ ಗಿರೀಶ್, ಶಿಕ್ಷಕರು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು