Tel: 7676775624 | Mail: info@yellowandred.in

Language: EN KAN

    Follow us :


ನ. 26 ರಂದು ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ ರವರು ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ

Posted date: 25 Nov, 2020

Powered by:     Yellow and Red

ನ. 26 ರಂದು ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ ರವರು ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ

ರಾಮನಗರ:ನ/25/20/ಬುಧವಾರ. ಉಪ ಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ ಅವರು ನ. 26ರಂದು ರಾಮನಗರ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.


ಅವರು ಅಂದು ಬೆಳಿಗ್ಗೆ 8 ಗಂಟೆಗೆ ಬೆಂಗಳೂರಿನಿAದ ನಿರ್ಗಮಿಸಿ ರಸ್ತೆ ಮೂಲಕ ಬೆಳಿಗ್ಗೆ 9.15ಕ್ಕೆ ಮಾಗಡಿ ತಾಲ್ಲೂಕಿನ ಮಾಡಬಾಳ್ ಗ್ರಾಮ ಪಂಚಾಯತ್‌ನ ಮೇಲನಹಳ್ಳಿಯಲ್ಲಿನ ಕೈಗಾರಿಕಾ ತರಬೇತಿ ಸಂಸ್ಥೆ ಕಟ್ಟಡ ನಿರ್ಮಾಣದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸುವರು.


ಬೆಳಿಗ್ಗೆ 10 ಕ್ಕೆ ಮಾಡಬಾಳ್ ಗ್ರಾಮ ಪಂಚಾಯತ್‌ನ ಜೇನುಕಲ್ಲುಪಾಳ್ಯದಲ್ಲಿ 94ಸಿ ಹಕ್ಕು ಪತ್ರ ವಿತರಣೆ ಮಾಡುವರು.


 ಬೆಳಿಗ್ಗೆ 10.30ಕ್ಕೆ ಜೇನುಕಲ್ಲುಪಾಳ್ಯದಿಂದ ನಿರ್ಗಮಿಸಿ ಆಗಲಕೋಟೆಯ ವೈ.ಜಿ. ಗುಡ್ಡದಲ್ಲಿನ ಏಳಿಗೇಹಳ್ಳಿ ಕಾಲೋನಿಯಲ್ಲಿ ನಿವೇಶನ ಹಕ್ಕು ಪತ್ರ ವಿತರಣೆ ಮತ್ತು ವೈ.ಜಿ ಗುಡ್ಡ ಎಂ.ವಿ.ಎಸ್ ಕಾಮಗಾರಿ ಪರಿಶೀಲನೆ ಮಾಡುವರು.


ಬೆಳಿಗ್ಗೆ 11 ಗಂಟೆಗೆ ಏಳಿಗೇಹಳ್ಳಿಯಿಂದ ರಸ್ತೆ ಮೂಲಕ ಆಗಲಕೋಟೆಯ ಹುಲಿಕಟ್ಟೆಯಲ್ಲಿ ಪಶು ಆಸ್ಪತ್ರೆ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸುವರು.


ಬೆಳಿಗ್ಗೆ 11.30ಕ್ಕೆ ಹುಲಿಕಟ್ಟೆಯಿಂದ ನಿರ್ಗಮಿಸಿ ಸಂಕೀಘಟ್ಟದ ಚಿಕ್ಕಕಲ್ಯಾದ ರಸ್ತೆ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸುವರು. 


ಮಧ್ಯಾಹ್ನ 12 ಗಂಟೆಗೆ ತಿಪ್ಪಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರದ ಉದ್ಘಾಟನೆ ಮಾಡುವರು.


ಮಧ್ಯಾಹ್ನ 12.30ಕ್ಕೆ ಕುದೂರು ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟಿಸುವರು.


 ಮಧ್ಯಾಹ್ನ 1 ಗಂಟೆಗೆ ಮರೂರು ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟಿಸುವರು. 


ಮಧ್ಯಾಹ್ನ 1.15ಕ್ಕೆ ಮರೂರಿನಿಂದ ರಸ್ತೆ ಮೂಲಕ ಮಣಿಗನಹಳ್ಳಿ, ನಾರಸಂದ್ರ ಹಾಗೂ ವಾಜರಹಳ್ಳಿಯ ಶ್ರೀರಂತ ಏತ ನೀರಾವರಿ ಕಾಮಗಾರಿ ವೀಕ್ಷಣೆ ಮಾಡುವರು. 


ಮಧ್ಯಾಹ್ನ 3.15ಕ್ಕೆ ಸೋಲೂರಿನಿಂದ ನಿರ್ಗಮಿಸಿ ರಸ್ತೆ ಮೂಲಕ ಬೆಂಗಳೂರು ತಲುಪುವರು ಎಂದು ಉಪಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑