ಜಿಲ್ಲಾ ಸರ್ಕಾರಿ ವಕೀಲರಾಗಿ ತಾಲೂಕಿನ ಹಿರಿಯ ವಕೀಲ ಎಂ.ಕೆ.ನಿಂಗಪ್ಪ ರವರು ನೇಮಕಗೊಂಡಿದ್ದಾರೆ.
ಚನ್ನಪಟ್ಟಣ:ನ:25/20/ಬುಧವಾರ. ಜಿಲ್ಲಾ ಸರ್ಕಾರಿ ವಕೀಲರಾಗಿ ತಾಲ್ಲೂಕಿನ ಹಿರಿಯ ವಕೀಲರಾದ ಎಂ ಕೆ ನಿಂಗಪ್ಪ ರವರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.
ಈ ಹಿಂದೆ ಜಿಲ್ಲಾ ಸರ್ಕಾರಿ ವಕೀಲರಾಗಿದ್ದ ನಾಗರಾಜು ರವರನ್ನು ಈ ಹುದ್ದೆಯಿಂದ ಬಿಡುಗಡೆಗೊಳಿಸಿ, ಆ ಸ್ಥಾನಕ್ಕೆ ಚನ್ನಪಟ್ಟಣ ತಾಲೂಕಿನ ಚಕ್ಕಲೂರುದೊಡ್ಡಿಯ ವಕೀಲ ಎಂ.ಕೆ. ನಿಂಗಪ್ಪರನ್ನು ನೇಮಿಸಿ, ರಾಜ್ಯಪಾಲರ ಆದೇಶದಂತೆ ಕಾನೂನು ಇಲಾಖೆಯ ಅಧೀನ ಕಾರ್ಯದರ್ಶಿ ಜಿ. ಮಂಜುಳಾ ರವರು ನೇಮಕಾತಿ ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಷರತ್ತುಳು) ನಿಯಮದನ್ವಯ ಇವರ ನೇಮಕಾತಿಯನ್ನು ಹೊರಡಿಸಿದ್ದು, ತಕ್ಷಣವೇ ಹುದ್ದೆ ವಹಿಸಿಕೊಳ್ಳುವಂತೆ ಆದೇಶದಲ್ಲಿ ತಿಳಿಸಲಾಗಿದೆ.
*ಅಭಿನಂದನೆ;*
೨೦ ವರ್ಷಗಳಿಂದ ವಕೀಲಿ ವೃತ್ತಿ ನಡೆಸುತ್ತಿರುವ, ಎಂ.ಕೆ.ನಿಂಗಪ್ಪ ತಾಲೂಕಿನ ಚಕ್ಕಲೂರುದೊಡ್ಡಿ ಗ್ರಾಮದವರಾಗಿದ್ದು, ನಗರದ ರಾಜಾಕೆಂಪೇಗೌಡ ನಗರದಲ್ಲಿ ವಾಸಿಸುತ್ತಿದ್ದಾರೆ. ವಕೀಲರ ಸಂಘದ ಉಪಾಧ್ಯಕ್ಷ ಸ್ಥಾನ ಸೇರಿದಂತೆ ಹಲವು ಸಂಘಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಜಿಲ್ಲಾ ಸರ್ಕಾರಿ ವಕೀಲರಾಗಿ ನೇಮಕಗೊಂಡಿರುವ ಇವರಿಗೆ ಚನ್ನಪಟ್ಟಣ ತಾಲೂಕಿನ ವಕೀಲರು, ರಾಮನಗರ ಜಿಲ್ಲಾ ವಕೀಲರು ಸೇರಿದಂತೆ ಹಲವು ಸಂಘಸಂಸ್ಥೆಗಳ ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು