ಹಕ್ಕಿ ಜ್ವರ ಭಯ ಬೇಡ. ಪಶುವೈದ್ಯ ಜಯರಾಮು
ಚನ್ನಪಟ್ಟಣ:ಜ/09/21/ಶನಿವಾರ. ಹಕ್ಕಿ ಜ್ವರದ ಬಗ್ಗೆ ಸಾರ್ವಜನಿಕರಲ್ಲಿ ಭಯ ಬಿತ್ತುತ್ತಿರುವುದು ಸರಿಯಲ್ಲ. ನಮ್ಮ ತಾಲ್ಲೂಕು ಅಷ್ಟೇ ಅಲ್ಲದೇ ಇಡೀ ಜಿಲ್ಲೆಯಲ್ಲೇ ಎಲ್ಲೂ ಸಹ ಹಕ್ಕಿ ಜ್ವರದ ಲಕ್ಷಣಗಳು ಕಂಡುಬಂದಿಲ್ಲವಾದ್ದರಿಂದ ನಾಗರೀಕರು ಭಯಗೊಳ್ಳುವುದು ಬೇಡ ಎಂದು ಪಶು ಇಲಾಖೆಯ ಸಹಾಯಕ ನಿರ್ದೇಶಕ ಜಯರಾಮು ಸಾರ್ವಜನಿಕರಿಗೆ ಮನವಿ ಮಾಡಿದರು.
ಬಹುತೇಕ ಹಕ್ಕಿ ಜ್ವರ ಬರುವುದು ವಲಸಿಗ ಪಕ್ಷಿಗಳಿಂದ. ಈ ಸಂದರ್ಭದಲ್ಲಿ ಪಕ್ಷಿಗಳು ವಲಸೆ ಬರುವುದು ಅಪರೂಪದಲ್ಲಿ ಅಪರೂಪವಾಗಿದೆ. ಕೊಕ್ಕರೆ ಬೆಳ್ಳೂರಿನ ತನಕ ಹೋಗಿ ಪರಿಶೀಲಿಸಿದ್ದೇವೆ. ಯಾವ ಪಕ್ಷಿಯೂ ಸಹ ಹಕ್ಕಿ ಜ್ವರದಿಂದ ಮೃತಪಟ್ಟಿಲ್ಲ ಎಂದರು.
ಹಕ್ಕಿ ಜ್ವರ ಎಂದಾಕ್ಷಣ ಜನರು ಕೋಳಿಯತ್ತ ವಕ್ರ ದೃಷ್ಠಿ ಬೀರುತ್ತಾರೆ. ನಮ್ಮಲ್ಲಿ ಹಕ್ಕಿ ಜ್ವರದ ಲಕ್ಷಣಗಳೇ ಇಲ್ಲದಿರುವುದರಿಂದ ಕೋಳಿಮಾಂಸ ಪ್ರಿಯರು ಯಾವುದೇ ಆತಂಕ ಪಡಬೇಕಿಲ್ಲ. ಸ್ಥಳೀಯ ಕೋಳಿ ಫಾರಂ ನಲ್ಲಿ ಸಾಕಿದ ಕೋಳಿಗಳನ್ನು ಜನರು ಯಾವುದೇ ಆತಂಕಪಡದೇ ಮಾಂಸ ಸೇವಿಸಬಹುದು. ಯಾವುದೇ ರಾಜ್ಯದಲ್ಲಿ ಅಥವಾ ಆಯಾ ಪ್ರದೇಶದಲ್ಲಿ ಹಕ್ಕಿ ಜ್ವರ ಕಂಡುಬಂದರೆ ಸ್ಥಳೀಯ ಆಡಳಿತ ಆ ಪ್ರದೇಶವನ್ನು ನಿರ್ಬಂಧಿಸುತ್ತದೆ. ಹಾಗಾಗಿ ಸಾಧ್ಯವಾದಷ್ಟು ಖಾಯಿಲೆಯೂ ಅಲ್ಲಿಯೇ ಸ್ತಬ್ಧಗೊಳ್ಳುತ್ತದೆ ಎಂದರು.
ನಮಗೆ ಮೊದಲಿಗೆ ಹಕ್ಕಿ ಜ್ವರದ ಲಕ್ಷಣಗಳು ಕೊಕ್ಕರೆ ಬೆಳ್ಳೂರು ಪಕ್ಷಿ ಕೇಂದ್ರದಿಂದ ಗೊತ್ತಾಗುತ್ತದೆ. ಅಲ್ಲಿಯ ವೈದ್ಯರು ಪ್ರತಿ ದಿನವೂ ನೀರು ಮತ್ತು ಸ್ಥಳೀಯ ಕೋಳಿಗಳ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿಕೊಡುತ್ತಿದ್ದು, ನಾವೂ ಸಹ ಪ್ರತಿ ತಿಂಗಳು ಮಾದರಿ ತೆಗೆದು ಪರೀಕ್ಷೆಗೆ ಕಳುಹಿಸುತ್ತಿದ್ದೇವೆ. ಇದುವರೆಗೂ ಯಾವುದೇ ರೀತಿಯ ರೋಗ ಲಕ್ಷಣಗಳು ಕಂಡುಬಂದಿಲ್ಲ ಎಂದು ಅವರು ಮಾಹಿತಿ ನೀಡಿದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು