ಸಂಕ್ರಾಂತಿ ಯುವಕವಿಗೋಷ್ಠಿ
ರಾಮನಗರ:ಜ/23/21/ಶನಿವಾರ. ರಾಮನಗರ ಜಿಲ್ಲಾ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ಜಿಲ್ಲಾ ಮಟ್ಟದ ಸಂಕ್ರಾಂತಿ ಯುವ ಕವಿಗೋಷ್ಠಿ ಮತ್ತು ಗೀತಗಾಯನ ಕಾರ್ಯಕ್ರಮವು ಜಿಲ್ಲಾ ಕ.ಸಾ.ಪ.ಕಛೇರಿಯಲ್ಲಿ ಅರ್ಥಪೂರ್ಣವಾಗಿ ನಡೆಯಿತು. ಈ ಕಾರ್ಯಕ್ರಮವು ಗೋವಿಂದಹಳ್ಳಿ ಶಿವಣ್ಣರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಆಹ್ವಾನಿತ ಅತಿಥಿ ಗಣ್ಯರನ್ನು ತಾಲ್ಲೂಕು ಕ.ಸಾ.ಪ ದ ಅಧ್ಯಕ್ಷರಾದ ಶ್ರೀಯುತ ಬಿ.ಟಿ ದಿನೇಶ್ ಬಿಳಗುಂಬ ರವರು ಸ್ವಾಗತಿಸಿದರು. ಜಿಲ್ಲಾ ಕ.ಸಾ.ಪ ದ ಕೋಶಾಧ್ಯಕ್ಷರಾದ ಶ್ರೀಯುತ ನಂಜೇಗೌಡರು ಪ್ರಾಸ್ತಾವಿಕ ನುಡಿಯನ್ನಾಡುತ್ತಾ ಪರಿಷತ್ತು ನಡೆದು ಬಂದ ದಾರಿ ಮತ್ತು ಸಂಘಟನೆಯ ಸಾರ್ಥಕ ಸೇವೆಯನ್ನು ಸ್ಮರಿಸಿದರು.
ಹಿರಿಯ ಸಾಹಿತಿಗಳಾದಂತಹ ಶ್ರೀಯುತ ಜಿ.ಹೆಚ್ ರಾಮಯ್ಯರವರು ಉದ್ಘಾಟನೆಯನ್ನು ನಡೆಸಿಕೊಟ್ಟು "ಸಾಹಿತ್ಯಕ್ಕೆ ವಸ್ತು ಮುಖ್ಯವಲ್ಲ ಅದಕ್ಕೆ ಕೊಟ್ಟ ಬಂಧ ಮತ್ತು ಅನುಬಂಧ ಮುಖ್ಯ" ಎಂದು ಹೇಳುತ್ತಾ ಯುವ ಕವಿಗಳಿಗೆ ಸ್ಪೂರ್ತಿಯನ್ನು ತುಂಬಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದಂತಹ ಶ್ರೀಮತಿ ಶೈಲಾಶ್ರೀನಿವಾಸ್ ರವರು ಯುವ ಕವಿಗಳ ಕವಿತೆಗಳನ್ನು ವಿಮರ್ಶಿಸುತ್ತಾ ಅವರು ಕ್ರಮಿಸಬೇಕಾದ ದಾರಿ ಯ ಬಗ್ಗೆ ಮಾರ್ಗದರ್ಶನ ಮಾಡುತ್ತಾ ನಾವು ಯಾರೊಂದಿಗಿದ್ದವೆಯೊ ಅವರಂತಂತೆಯೇ ಆಗುತ್ತೇವೆ "ನಾವು ಕಡಲಾಗಬೇಕಾದರೆ ನದಿಯ ಜಾಡನ್ನು ಹಿಡಿಯಬೇಕು" ಎಂಬ ಉಕ್ತಿ ವೈಚಿತ್ರ್ಯವನ್ನು ತಿಳಿಸಿ ಸಾಹಿತ್ಯ ಪರಿಷತ್ತಿನ ಬಲವರ್ಧನೆಗೆ ಮಾರ್ಗದರ್ಶನ ಮಾಡಿದರು.
ಯುವ ಕವಿಗೋಷ್ಠಿಯಲ್ಲಿ ಭಾಗವಹಿಸಿದ ಯುವ ಕವಿಗಳಾದ ಸುರೇಶ್, ಹೇಮಂತ್ ತಿಬ್ಬೇಗೌಡನದೊಡ್ಡಿ, ಗೋವಿಂದಸ್ವಾಮಿ, ಕಿರಣ್ ರಾಜ್ ತುಂಬೇನಳ್ಳಿ, ಅಭಿಷೇಕ್, ಅಕ್ಷಯ್ ಗೌತಮ್, ಶ್ರೀನಿವಾಸ್ ಅಬ್ಬೂರ್, ವಿನೋದ್ ಕಲ್ಬಾಳು, ಚೇತನ್ ಗುನ್ನೂರು ಮೊದಲಾದವರು ತಮ್ಮ ಭರವಸೆಯ ಕವಿತೆಗಳೊಂದಿಗೆ ತಮ್ಮ ಛಾಪನ್ನು ಮೂಡಿಸಿದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಶ್ರಾಂತ ಪ್ರಾಂಶುಪಾಲರಾದ ಶ್ರೀಯುತ ವನರಾಜುರವರು ಹಾಗೂ ಸಮಾಜ ಸೇವಕರಾದ ಶ್ರೀ ಭಾನುಪ್ರಕಾಶ್ ಬಾನಂದೂರು ಮತ್ತು ಲಯನ್ಸ್ ಸಿಲ್ಕ್ ಸಿಟಿ ರಾಮನಗರದ ಅಧ್ಯಕ್ಷರಾದ ಶ್ರೀಮತಿ ಸುಧಾರಾಣಿಯವರು ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಿಕೆಗಳ ಬಗ್ಗೆ ಅಭಿಮಾನದಿಂದ ಮಾತನಾಡಿದರು.
ಗೀತಗಾಯನದ ಮೂಲಕ ಶ್ರೀ ಗೋವಿಂದಹಳ್ಳಿ ಶಿವಣ್ಣ, ಶ್ರೀಶೈಲ್ ಹೂಗಾರ್, ಶ್ರೀಮತಿ ನಾಗಶ್ರೀಯವರು ಕಾರ್ಯಕ್ರಮಕ್ಕೆ ಮೆರಗನ್ನು ತಂದುಕೊಟ್ಟರು. ಕ.ಸಾ.ಪ ದ ಪದಾಧಿಕಾರಿಗಳಾದಂತಹ ಶ್ರೀಯುತ ರಾಜೇಶ್ ಮತ್ತು ಶ್ರೀ ಕಿರಣ್ ಕುಮಾರ್ ರವರು ಈ ಕಾರ್ಯಕ್ರಮವನ್ನು ಸುಂದರವಾಗಿ ಸಂಯೋಜನೆಯನ್ನು ಮಾಡಿಕೊಟ್ಟಿದ್ದಾರೆ. ಪರಿಸರ ಪ್ರೇಮಿ ರಾಜು ಮತ್ತಿತರರು ಉಪಸ್ಥಿತರಿದ್ದರು. ಚೇತನ್ ಗುನ್ನೂರು ಸುಂದರ ನಿರೂಪಣೆ ಕಾರ್ಯಕ್ರಮಕ್ಕೆ ಮೆರಗನ್ನು ತಂದುಕೊಟ್ಟಿತು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು