ನಮ್ಮ ತಂಡದಿಂದ ಯಾವುದೇ ಲೋಪದೋಷಗಳಾಗಿಲ್ಲ. ಸಮಾನ ಮನಸ್ಕರ ತಂಡದ ಆರೋಪ ನಿರಾಧಾರ ಸಿಂಲಿಂ.
ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಆಡಳಿತ ಮಂಡಳಿಯ ಕಳೆದ ಐದು ವರ್ಷದಲ್ಲಿ ಯಾವುದೇ ಲೋಪ ದೋಷಗಳಾಗಿಲ್ಲ. ಸಮಾನ ಮನಸ್ಕರ ತಂಡವು ನಿನ್ನೆ ನಮ್ಮ ಮೇಲೆ ಮಾಡಿರುವ ಆರೋಪವು ನಿರಾಧಾರ. ತಮ್ಮ ಬಳಿ ದಾಖಲೆ ಇದ್ದರೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ದೂರು ಸಲ್ಲಿಸಲಿ. ಅವರ ಚುನಾವಣಾ ಗೆಲುವಿಗೆ ನಮ್ಮ ತಂಡದ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದು ಸಲ್ಲ ಎಂದು ಸಿಂ ಲಿಂ ನಾಗರಾಜು ಮಾಧ್ಯಮದವರಿಗೆ ತಿಳಿಸಿದರು.
ಅವರು ಇಂದು ನಗರದ ಟಿ ಕೆ ಯೋಗೇಶ್ ರವರ ಮನೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ನಾವು ಕಳೆದ ಐದು ವರ್ಷಗಳ ಅವಧಿಯಲ್ಲಿ ನಾವು ಅಭಿವೃದ್ಧಿಯನ್ನು ಸಾಧಿಸಿದ್ದೇವೆ. ಕೆಲವು ಕಾಮಗಾರಿಗಳು ಬಾಕಿ ಉಳಿದಿವೆ. ಈ ಅವಧಿಯಲ್ಲೂ ನಾವೇ ಗೆಲ್ಲುತ್ತೇವೆ. ನಾವು ಸೋತು ಅವರೇ ಗೆದ್ದರೂ ಸಹ ತನಿಖೆ ಮಾಡಲಿ. ನಾವು ಸಿದ್ದರಿದ್ದೇವೆ. ತಾಲ್ಲೂಕಿನಾದ್ಯಂತ ನಮ್ಮ ತಂಡದ ಪರ ಒಲವಿದೆ. ಬಾಕಿ ಉಳಿದಿರುವ ಕಾಮಗಾರಿಗಳ ಜೊತೆಗೆ ಇನ್ನೂ ಹೆಚ್ಚಿನ ಅಭಿವೃದ್ಧಿ ಮಾಡುತ್ತೇವೆ ಎಂದು ತಿಳಿಸಿದರು.
ಮತ್ತೋರ್ವ ಅಭ್ಯರ್ಥಿ ರಂಗಸ್ವಾಮಿ ಮಾತನಾಡಿ, ನಮ್ಮ ತಂಡದ ಆಡಳಿತದ ಅವಧಿಯಲ್ಲಿ ಯಾವುದೇ ಹಣ ದುರ್ಬಳಕೆ ಆಗಿಲ್ಲ. ನ್ಯಾಯಯುತವಾಗಿ ಎಲ್ಲಾ ವ್ಯವಹಾರಗಳನ್ನು ಮಾಡಿದ್ದೇವೆ. ನಿನ್ನೆ ಆರೋಪ ಮಾಡಿದ ತಂಡದವರಲ್ಲಿರುವ ಮೂರು ಮಂದಿ ಚುನಾವಣೆಗೆ ಸ್ಫರ್ಧಿಸಿದ್ದಾರೆ. ಅವರಲ್ಲಿ ಇಬ್ಬರು ಸ್ಪರ್ದಿಸಲು ಬೈಲಾ ದಲ್ಲಿ ಅವಕಾಶವಿಲ್ಲ. ನಾವು ಕಟ್ಟಡದಲ್ಲಿರುವ ಅಂಗಡಿಗಳನ್ನು ಏಳು ಸಾವಿರ ರೂಪಾಯಿ ಬಾಡಿಗೆ ನಿಗದಿ ಮಾಡಿದ್ದೇವೆ. ಅವರಲ್ಲಿ ಕೆಲವರು ಹೆಚ್ಚಿನ ಬಾಡಿಗೆಗೆ ಪರಭಾರೆ ಮಾಡಿದ್ದಾರೆ. ಇಂತಹವರು ಗೆದ್ದು ಬಂದರೆ ಅಭಿವೃದ್ಧಿ ಅಸಾಧ್ಯ ಎಂದರು.
ನಿವೃತ್ತ ಉಪನ್ಯಾಸಕ ಚನ್ನಪ್ಪ (ಸಿಸಿ)/ಮಾತನಾಡಿ ನಮ್ಮ ತಂಡ ಹಳೇಬೇರು ಹೊಸ ಚಿಗುರು ಇದ್ದಂತೆ. ಹಳೆಯ ಆರು ಮಂದಿ ಹೊಸದಾಗಿ ಒಂಭತ್ತು ಮಂದಿ ಸ್ಪರ್ಧಿಸುತ್ತಿದ್ದೇವೆ. ನಾವು ಹದಿನೈದು ಮಂದಿಯೂ ಯಾವುದೇ ಅಡೆತಡೆಯಿಲ್ಲದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಟಿ ಕೆ ಯೋಗೇಶ್, ಉಮಾಶಂಕರ್, ಗುರುಲಿಂಗಯ್ಯ ಮುಂತಾದವರು ಹಾಜರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು