ರಾಮನಗರ ಬಂದ್ ಯಶಸ್ವಿ
ರೇಷ್ಮೆ ಗೂಡು ಮಾರುಕಟ್ಟೆ ಸ್ಥಳಾಂತರ ವಿರೋಧ ವ್ಯಕ್ತಪಡಿಸಿ ಇಂದು ರಾಮನಗರ ಬಂದ್ ಗೆ ಕರೆ ನೀಡಲಾಗಿದ್ದು, ಇಂದು ಬಂದ್ ಯಶಸ್ವಿಯಾಯಿತು.
ಬೆಳಿಗ್ಗೆಯಿಂದಲೇ ಬಹುತೇಕ ಎಲ್ಲಾ ಅಂಗಡಿ, ಹೋಟೆಲ್ ಗಳಯ ಸೇರಿದಂತೆ ಇನ್ನಿತರ ವಹಿವಾಟುಗಳ ಮಳಿಗೆಗಳು ಬಾಗಿಲು ಮುಚ್ಚಿದ್ದವು.
ಸಂಗೀತಾ ಮೊಬೈಲ್ ಕಂಪನಿ, ಲಿಕ್ಕರ್ ಷಾಪ್ ಗಳು ಬಾಗಿಲು ತೆಗೆದು ಎಂದಿನಂತೆ ವಹಿವಾಟು ನಡೆಸಿದವು. ಆಟೋ ರಿಕ್ಷಾ, ಸಾರಿಗೆ ಸಂಸ್ಥೆ ಸೇರಿದಂತೆ ಎಲ್ಲಾ ವಾಹನಗಳು ರಸ್ತೆಗಿಳಿಸಿದ್ದವು. ರೇಷ್ಮೆ ಗೂಡಿನ ಮಾರುಕಟ್ಟೆ, ಸರ್ಕಾರಿ ಕಛೇರಿಗಳು ಎಂದಿನಂತೆ ಕೆಲಸ ನಿರ್ವಹಿಸಿದವು.
ಪ್ರತಿಭಟನೆಯಲ್ಲಿ ರೇಷ್ಮೆ ಬೆಳೆಯುವ ಯಾವುದೇ ಕೃಷಿಕರು ಕಂಡುಬರಲಿಲ್ಲ. ಒಂದು ಸಮುದಾಯದ ರೀಲರ್ ಗಳು ಮತ್ತು ದಲ್ಲಾಳಿಗಳು ಭಾಗಿಯಾಗಿದ್ದು ಕಂಡುಬಂತು. ಜೊತೆಗೆ ಆಟೋಗೆ ಕಟ್ಟಿದ್ದ ಒಂದೆರಡು ಕನ್ನಡದ ಬ್ಯಾನರ್ ಬಿಟ್ಟರೆ, ಉಳಿದ ಬ್ಯಾನರ್ ಗಳು ಮತ್ತು ಕರಪತ್ರಗಳು ಸಂಪೂರ್ಣವಾಗಿ ಉರ್ದುಮಯವಾಗಿದ್ದವು.
ಕೆ ಶೇಷಾದ್ರಿ ನೇತೃತ್ವದಲ್ಲಿ ಹೆದ್ದಾರಿ ಬಸ್ ನಿಲ್ದಾಣದಿಂದ ಹೊರಟ ಬೃಹತ್ ಪ್ರತಿಭಟನೆಯು, ಹಳೇ ಬಸ್ ನಿಲ್ದಾಣ, ಕಾಲೇಜು ಮುಂಭಾಗದಿಂದ ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ, ಕಛೇರಿಯ ಮುಂಭಾಗ ಪ್ರತಿಭಟನಾ ನಿರತರು ಮಾರುಕಟ್ಟೆಯ ಬಗೆಗೆ ಭಾಷಣ ಮಾಡಿ ನಂತರ ಮನವಿ ಸಲ್ಲಿಸಿದರು.
ಪ್ರತಿಭಟನಾಕಾರರು ಮುಂದೆ ಮುಂದೆ ಹೋಗುತ್ತಿದ್ದಂತೆ ಹೆದ್ದಾರಿ ಮತ್ತು ಪೇಟೆ ಬೀದಿಯ ಅಂಗಡಿ ಮುಂಗಟ್ಟುಗಳು ತೆರೆಯುತ್ತಿದ್ದುದು ಬಂದ್ ಗೆ ಸಂಪೂರ್ಣ ಬೆಂಬಲ ಇಲ್ಲವೆನ್ನುವುದು ವೇದ್ಯವಾಗಿತ್ತು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು