Tel: 7676775624 | Mail: info@yellowandred.in

Language: EN KAN

    Follow us :


ಮಹಿಳೆ ಆತ್ಮಹತ್ಯೆ, ಕಾರಣ ನಿಗೂಢ. ಪೋಲೀಸರ ಸರ್ಪಗಾವಲು

Posted date: 25 Feb, 2021

Powered by:     Yellow and Red

ಮಹಿಳೆ ಆತ್ಮಹತ್ಯೆ, ಕಾರಣ ನಿಗೂಢ. ಪೋಲೀಸರ ಸರ್ಪಗಾವಲು

ನಗರದ ಹೈವೇ ರಸ್ತೆಯಲ್ಲಿರುವ ಸಾಗರ್ ಮೆಡಿಕಲ್ ಮಾಲೀಕ ಮೆಣಸಿಗನಹಳ್ಳಿ ಗ್ರಾಮದ ಕಿರಣ ಕುಮಾರ್ ರವರ ಪತ್ನಿ ಸುಷ್ಮಾ (28) ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ನಗರ ಪೋಲೀಸ್ ಠಾಣೆಯ ವ್ಯಾಪ್ತಿಯ ಮಂಜುನಾಥ ನಗರದಲ್ಲಿ ನಿನ್ನೆ ಸಂಜೆ ನಡೆದಿದೆ.


ನಗರದ ಮಂಜುನಾಥ ನಗರದ ಮೂರನೇ ತಿರುವಿನ ಮನೆಯಲ್ಲಿ ವಾಸವಿದ್ದ ಕುಟುಂಬವು ಅನೋನ್ಯವಾಗಿದ್ದವು ಎಂದು ಬಲ್ಲ ಮೂಲಗಳು ತಿಳಿಸಿವೆ. ಆತ್ಮಹತ್ಯೆ ಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಆತ್ಮಹತ್ಯೆ ಯ ನಂತರ ಮನೆಯ ಬಳಿ‌ ಜಮಾಯಿಸಿದ ಸುಷ್ಮಾ ತಂದೆಯ ಕುಟುಂಬದವರು ಗಲಾಟೆ ಮಾಡಿದ್ದು, ಪೋಲೀಸರು ತೆರಳಿ ತಿಳಿಗೊಳಿಸಿದ್ದಾರೆ.


ಗಲಾಟೆ ಆಗುತ್ತಿದ್ದಂತೆ ಎಚ್ಚೆತ್ತ ಪೋಲೀಸರು ಶವವನ್ನು ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿ, ಬೀಗ ಹಾಕಿದ್ದು, ಯಾರನ್ನೂ ಒಳಬಿಡಲಿಲ್ಲ. ಹತ್ತಕ್ಕೂ ಹೆಚ್ಚು ಪೋಲೀಸರನ್ನು ಶವಾಗಾರದ ಬಳಿ ನಿಯೋಜಿಸಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.


ಇಂದು ಬೆಳಿಗ್ಗೆ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಶವವನ್ನು ವಾರಸುದಾರರಿಗೆ ಒಪ್ಪಿಸಿದ್ದು, ಸ್ವಗ್ರಾಮ ಮೆಣಸಿಗನಹಳ್ಳಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑