ಘನ ತ್ಯಾಜ್ಯ ವಸ್ತು ಸಂಗ್ರಹಣೆಗೆ ಟ್ರಕಿಂಗ್ ಹಮ್ಮಿಕೊಂಡಿದ್ದ ಸಿಇಓ ಇಕ್ರಂ
ರಾಮನಗರ ಜಿಲ್ಲೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಮ್ ರವರು ಮತ್ತೊಂದು ವಿನೂತನ ಪ್ರಯೋಗ ಮಾಡಲು ಮುಂದಾಗಿದ್ದಾರೆ.
ಪ್ರತಿ ಶುಕ್ರವಾರ ಬೆಟ್ಟ ಗುಡ್ಡಗಳ ಟ್ರಕಿಂಗ್ ಮಾಡುವ ಮೂಲಕ ಆ ಪ್ರದೇಶದ ಸುತ್ತಮುತ್ತ ಪ್ಲಾಸ್ಟಿಕ್ ಬಾಟಲಿ, ಪ್ಲಾಸ್ಟಿಕ್ ಪ್ಯಾಕೆಟ್ ಇನ್ನಿತರ ತ್ಯಾಜ್ಯವನ್ನು ಸಂಗ್ರಹಣೆ ಮಾಡಿ ಆ ಪಂಚಾಯಿತಿ ವ್ಯಾಪ್ತಿಯ ಘನ ತ್ಯಾಜ್ಯ ನಿರ್ವಹಣೆ ಘಟಕಕ್ಕೆ ನೀಡುವ ವಿನೂತನ ಸ್ವಚ್ಛತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅದರ ಪ್ರಯೋಗಾತ್ಮಕವಾಗಿ ರಾಮನಗರ ಜಿಲ್ಲೆಯ ರಾಮನಗರ ತಾಲ್ಲೂಕಿನ ಕೂಟಗಲ್ ಬೆಟ್ಟಕ್ಕೆ ಇಂದು ಮುಂಜಾನೆ ಟ್ರಕಿಂಗ್ ಗೆ ಕಾರ್ಯನಿರ್ವಾಹಕ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಆ ಪ್ರದೇಶದಲ್ಲಿ ಹಾಕಿರುವ ಪ್ಲಾಸ್ಟಿಕ್ ಬಾಟಲ್, ಪ್ಲಾಸ್ಟಿಕ್ ಪ್ಯಾಕೆಟ್ ಇನ್ನಿತರ ತ್ಯಾಜ್ಯವನ್ನು ಸಂಗ್ರಹಿಸಿ ಘನ ತ್ಯಾಜ್ಯ ನಿರ್ವಹಣೆ ಘಟಕಕ್ಕೆ ನೀಡಿದರು.
ಕಸ ಮುಕ್ತ ಜಿಲ್ಲೆ ಮಾಡುವ ಭಾಗವಾಗಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸ್ವಚ್ಛ ಶುಕ್ರವಾರ ಎಂಬ ಅಭಿಯಾನ ನಂತರ
"ಪ್ರಕೃತಿ ಸೌಂದರ್ಯದ ಭಾಗವಾದ ಬೆಟ್ಟ ಗುಡ್ಡಗಳ ಸಂರಕ್ಷಣ ಅಭಿಯಾನಕ್ಕೆ" ಅವರು ಮುನ್ನುಡಿ ಬರೆದಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು