Tel: 7676775624 | Mail: info@yellowandred.in

Language: EN KAN

    Follow us :


ಗ್ರಾಮೀಣ ಭಾಗದ ಆರೋಗ್ಯ ದೃಷ್ಟಿಯಿಂದ ಹೈಟೆಕ್ ಆಸ್ಪತ್ರೆ ನಿರ್ಮಾಣ: ಹೆಚ್ಡಿಕೆ.

Posted date: 03 Mar, 2021

Powered by:     Yellow and Red

ಗ್ರಾಮೀಣ ಭಾಗದ ಆರೋಗ್ಯ ದೃಷ್ಟಿಯಿಂದ ಹೈಟೆಕ್ ಆಸ್ಪತ್ರೆ ನಿರ್ಮಾಣ: ಹೆಚ್ಡಿಕೆ.

ಗ್ರಾಮೀಣ ಭಾಗದ ಜನರ ಆರೋಗ್ಯದ ಹಿತದೃಷ್ಟಿಯಿಂದ, ತಾಲ್ಲೂಕಿನಲ್ಲಿ ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪನೆ ಮಾಡುತ್ತಿರುವುದಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಕ್ಷೇತ್ರದ ಶಾಸಕ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.


ಅವರು ತಾಲ್ಲೂಕಿನ ಎಸ್.ಎಂ.ಹಳ್ಳಿ ಹಾಗೂ ಬಿ.ವಿ.ಹಳ್ಳಿ ಗ್ರಾಮದಲ್ಲಿ  ನೂತನವಾಗಿ ನಿರ್ಮಾಣವಾಗಿದ್ದ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉದ್ಘಾಟನಾ ಸಮಾರಂಭದಲ್ಲಿ, ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಮನುಷ್ಯನಿಗೆ ಎಷ್ಟೇ ಸಂಪತ್ತು ಇದ್ದರೂ ಆರೋಗ್ಯ ಸಂಪತ್ತು ಇಲ್ಲದಿದ್ದರೇ ಆತನ ಯಾವುದೇ ರೀತಿಯ ಸಂಪತ್ತು ವ್ಯರ್ಥವಾಗುತ್ತದೆ ಎಂದರು.


ಗ್ರಾಮಗಳಲ್ಲಿ ನಿರ್ಮಾಣವಾಗಿರುವ ಆರೋಗ್ಯ ಕೇಂದ್ರಗಳಲ್ಲಿ ನುರಿತ ವೈದ್ಯರು ಹಾಗೂ ಸಾಕಷ್ಟು ಸಿಬ್ಬಂದಿ ನಿಯೋಜನೆ ಮಾಡಲಾಗುವುದು, ಗ್ರಾಮೀಣ ಭಾಗದ ಜನತೆ ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಹಾಗೂ ಸರ್ಕಾರಿ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳು ಪಡೆದುಕೊಂಡು ಅಭಿವೃದ್ದಿಯತ್ತಾ ಸಾಗಬೇಕೆಂದು ತಿಳಿಸಿದರು.


ಬಿ.ವಿ.ಹಳ್ಳಿ ಹಾಗೂ ಇತರೆ ಭಾಗಗಳಲ್ಲಿ ಕಾಡಾನೆಗಳ ಕಾಟದಿಂದ, ಕಷ್ಟಪಟ್ಟು ಬೆಳೆದ ಬೆಳೆಗಳು ಸಂಪೂರ್ಣ ನಾಶವಾಗುತ್ತಿವೆ, ಪ್ರತಿನಿತ್ಯ ಕಾಡಾನೆಗಳು ಹಿಂಡುಹಿಂಡಾಗಿ ತೋಟ-ತುಡಿಕೆಗಳ ಮೇಲೆ ದಾಳಿ ಮಾಡುತ್ತಿವೆ, ಕೊರೋನಾದಂತಹ ಸಂಕಷ್ಟದಲ್ಲಿ ಈ ರೀತಿಯಾಗಿ ಬೆಳೆದ ಬೆಳೆಗಳು ಕಾಡಾನೆಗಳಿಂದ ನಾಶವಾಗುತ್ತಿರುವುದರಿಂದ ತಲೆ ಮೇಲೆ ಆಕಾಶವೇ ಕಳಚಿ ಬಿದ್ದಂತಾಗಿದೆ, ಕಾಡಾನೆಗಳ ಹಾವಳಿಯನ್ನು ನಿಯಂತ್ರಣ ಮಾಡುವಂತೆ ಅರಣ್ಯಾಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದರು ನಮಗೂ ಕಾಡಾನೆಗಳಿಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ. ಹೀಗೆ ಮುಂದುವರೆದರೆ ರೈತರ ಗತಿ ಏನು ಎಂದು ಶಾಸಕರಲ್ಲಿ ಮನವಿ ಮಾಡಿದರು.


 ಕಳೆದ ಹಲವಾರು ವರ್ಷಗಳಿಂದ ಕಾಡಾನೆಗಳ ದಾಳಿಯಿಂದ ಕೋಟ್ಯಾಂತರರೂ ಬೆಳೆ ರೈತಾಪಿವರ್ಗಕ್ಕೆ ಭಾರಿ ನಷ್ಟವಾಗಿದೆ, ಅಲ್ಲದೇ ತಮ್ಮ ಬೆಳೆನಷ್ಟದ ಪರಿಹಾರಕ್ಕೆ ಮನವಿ ಮಾಡಿದರೂ, ಕಡಿಮೆ ಮೊತ್ತದ ಹಣದ ಪರಿಹಾರ ದೊರೆತು ರೈತರಿಗೆ ಇದರಲ್ಲಿಯೂ ಬಹಳ ಅನ್ಯಾಯವಾಗಿದ್ದು, ಮುಂದಿನ ದಿನಗಳಲ್ಲಿ ಕಾಡಾನೆ ಹಾಗೂ ಇತರೆ ಪ್ರಾಣಿಗಳ ದಾಳಿಯಿಂದ ನಷ್ಟಕ್ಕೊಳಗಾದರೆ ಸೂಕ್ತ ಪರಿಹಾರ ಕೊಡಿಸಲು ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡುವುದಾಗಿ ಭರವಸೆ ನೀಡಿದರು.


ಈ ಭಾಗದಲ್ಲಿ ಕಾಡಾನೆಗಳು ರೈತರ ಬೆಳೆ ನಷ್ಟ ಮಾಡುತ್ತಿರುವುದರ ಬಗ್ಗೆ ನನಗೆ ಸಂಪೂರ್ಣ ಅರಿವಿದ್ದು, ನಾನು ಮುಖ್ಯಮಂತ್ರಿಯಾಗಿದ್ದಾಗಲೇ ಕಾಡಿನಿಂದ ನಾಡಿಗೆ ಆನೆಗಳು ದಾಳಿ ಮಾಡದಂತೆ ಯೋಜನೆಯನ್ನು ರೂಪಿಸಿದ್ದವು, ಅದಕ್ಕಾಗಿಯೇ ಕೋಟ್ಯಾಂತರ ರೂ ಹಣವನ್ನು ಇಡಲಾಗಿದೆ, ಮುತ್ತತ್ತಿ ಆರಣ್ಯ ಪ್ರದೇಶದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲ್ಲಾಗಿದ್ದು, ಸಂಬಂಧಿಸಿದ ಅರಣ್ಯಾಧಿಕಾರಿಗಳ ಜೊತೆ ಚರ್ಚೆ ಮಾಡಿ, ಕಾಡಾನೆಗಳ ಉಪಟಳಕ್ಕೆ ಸದ್ಯದಲ್ಲಿಯೇ ಮುಕ್ತಿ ನೀಡಲಾಗುವುದು ಎಂದು ರೈತರನ್ನು ಸಮಾದಾನ ಪಡಿಸಿದರು.


ಹಲವಾರು ಅಭಿವೃದ್ದಿಯ ವಿಚಾರಗಳ ಬಗ್ಗೆ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಸಮರೋಪಾದಿಯಲ್ಲಿ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದ್ದು, ನೀರಾವರಿಗೆ ಹೆಚ್ಚು ಆಧ್ಯತೆ ನೀಡಲಾಗುವುದು, ಗ್ರಾಮೀಣ ಮೂಲಭೂತ ಸೌಕರ್ಯಗಳಿಗೆ ಪ್ರಥಮ ಆದ್ಯತೆ ನೀಡಲಾಗಿದ್ದು, ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಯೇ ನನ್ನ ಮೊದಲ ಕರ್ತವ್ಯ ಎಂದು ತಿಳಿಸಿದರು.


ಉದ್ಘಾಟನಾ ಸಮಾರಂಭ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ನಿರಂಜನ್, ತಾಲ್ಲೂಕು ಆರೋಗ್ಯಾಧಿಕಾರಿ ರಾಜು, ತಾಲ್ಲೂಕು ದಂಡಾಧಿಕಾರಿ ನಾಗೇಶ್ , ಕೂಡ್ಲೂರು ಗ್ರಾಮ ಪಂಚಾಯಿತಿ    ಅಧ್ಯಕ್ಷ ಗುಂಡಣ್ಣ ಸಿ, ಗ್ರಾಮ ಪಂಚಾಯಿತಿ ಸದಸ್ಯರುಗಳು, ಮುಖಂಡ ಆನಂದಸ್ವಾಮಿ, ಬಿ ವಿ ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ  ಪಾರ್ವತಮ್ಮ, ಉಪಾಧ್ಯಕ್ಷೆ ಸವಿತ ಗ್ರಾಮ ಪಂಚಾಯಿತಿ ಸದಸ್ಯರುಗಳು,  ತಾಲೂಕು ಜೆಡಿಎಸ್ ಅಧ್ಯಕ್ಷ  ಜಯಮುತ್ತು, ಹಿರಿಯ ಮುಖಂಡ ಹಾಪ್ ಕಾಮ್ಸ್ ದೇವರಾಜು,  ಪಿಎಲ್ ಡಿ ಅಧ್ಯಕ್ಷ ಗೊವಿಂದಳ್ಳಿ ನಾಗರಾಜು, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ. ಕುಕ್ಕೂರು ದೊಡ್ಡಿ ಜಯರಾಮು, ಹಾಪ್ ಕಾಮ್ಸ್ ನಿರ್ದೇಶಕ  ರಾಜಶೇಖರ್, ಮುಖಂಡರಾದ. ಸಿಂಲಿಂ ನಾಗರಾಜು, ನಿಜಲಿಂಗೆಗೌಡ, ಕೂಡ್ಲೂರು ವೆಂಕಟೇಶ್, ಬಾನುಪ್ರಸಾದ್, ಗಿರೀಶ್ ಬಾಬು,   ಹಾಗೂ  ಹಲವಾರು ಮಂದಿ ಜೆ.ಡಿ.ಎಸ್ ಮುಖಂಡರು , ಸೇರಿದಂತೆ ಮುಂತಾದವರು  ಹಾಜರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑