Tel: 7676775624 | Mail: info@yellowandred.in

Language: EN KAN

    Follow us :


ನಿರ್ಗಮಿತ ಜಿಲ್ಲಾಧಿಕಾರಿ ಎಂ ಎಸ್ ಅರ್ಚನಾ ರವರಿಗೆ ಶುಭ ಹಾರೈಸಿದ ನೂತನ ಜಿಲ್ಲಾಧಿಕಾರಿ ರಾಕೇಶ್ ಕುಮಾರ್

Posted date: 06 Mar, 2021

Powered by:     Yellow and Red

ನಿರ್ಗಮಿತ ಜಿಲ್ಲಾಧಿಕಾರಿ ಎಂ ಎಸ್ ಅರ್ಚನಾ ರವರಿಗೆ ಶುಭ ಹಾರೈಸಿದ ನೂತನ ಜಿಲ್ಲಾಧಿಕಾರಿ ರಾಕೇಶ್ ಕುಮಾರ್

ನಿರ್ಗಮಿತ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಅವರಿಗೆ ಶುಭ ಹಾರೈಸಿದ ನೂತನ ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ ಅವರು ಮಾತನಾಡಿ ವರ್ಗಾವಣೆಯಾದ ಸಂದರ್ಭದಲ್ಲಿ ಕೋರುವ ಒಳ್ಳೆಯ ಮಾತುಗಳು ಮುಂದಿನ ಕೆಲಸಗಳಿಗೆ ಸ್ಪೂರ್ತಿ. ಆಯಾ ಜಿಲ್ಲೆಗಳಿಗೆ ಅದರದೆ ಆದಂತಹ ಭೌಗೊಳಿಕ, ರಾಜಕೀಯ ವೈಶಿಷ್ಟತೆ ಹಾಗೂ ಸಮಸ್ಯೆಗಳಿರುತ್ತದೆ. ಅವುಗಳನ್ನು ಅರಿತು ನಿರ್ಗಮಿತ ಜಿಲ್ಲಾಧಿಕಾರಿಗಳು ಉತ್ತಮ ಕೆಲಸ ಮಾಡಿದ್ದಾರೆ ಎಂದರು. 

ಕೋವಿಡ್ ಸಂದರ್ಭದಲ್ಲಿ ರಾಮನಗರ ಹಾಗೂ ಚಾಮರಾಜನಗರ ಜಿಲ್ಲೆ ಉತ್ತಮವಾಗಿ ಕಾರ್ಯನಿರ್ವಹಿಸಿದೆ‌. ಬೆಂಗಳೂರಿಗೆ ಹತ್ತಿರವಾದ ರಾಮನಗರ ಜಿಲ್ಲೆಗೆ ಹೆಚ್ಚಿನ ಜನರ ಓಡಾಟವಿರುತ್ತದೆ‌. ಕೋವಿಡ್ ಸಂದರ್ಭದಲ್ಲಿ ಲಾಕ್ ಡೌನ್ ನಂತರ ಕೋವಿಡ್ ನಿಯಂತ್ರಿಸುವ ಸವಾಲನ್ನು ಸ್ವೀಕರಿಸಿ ಉತ್ತಮವಾಗಿ, ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ನಾನ್ ಕೋವಿಡ್ ಸರ್ವಿಸ್ ಗಳನ್ನು ಸಾರ್ವಜನಿಕರಿಗೆ ಒದಗಿಸಿ ಜಿಲ್ಲೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಉನ್ನತ ಹುದ್ದೆಗಳಲ್ಲಿ ಅವರು ಸೇವೆ ಸಲ್ಲಿಸಿ ಹೆಸರು ಗಳಿಸಲಿ ಎಂದರು.

ಪ್ರೀತಿ ವಿಶ್ವಾಸ ಮನದಲ್ಲಿಟ್ಟುಕೊಂಡು ನಿರ್ಗಮನ: ಕೆಲವು ಸಂದರ್ಭದಲ್ಲಿ ಜಿಲ್ಲೆಗೆ  ಉತ್ತಮ ಕೆಲಸವಾಗಲಿ ಎಂದು ಕಟುವಾಗಿ ಮಾತನಾಡಿರುತ್ತೇನೆ. ಕಟು ಮಾತುಗಳು ಜಿಲ್ಲೆಯ  ಅಭಿವೃದ್ಧಿಗೆ. ಎಲ್ಲಾ ಶುಭ ಹಾರೈಸಿದವರ ಪ್ರೀತಿ ವಿಶ್ವಾಸವನ್ನು ಮನದಲ್ಲಿಟ್ಟಿಕೊಂಡು ನಿರ್ಗಮಿಸುತ್ತಿದ್ದೇನೆ. ಒಂದೂವರೆ ವರ್ಷದ ಜಿಲ್ಲೆಯ ಸೇವೆ ಸಂತೋಷ ತಂದಿದೆ ಎಂದು ನಿರ್ಗಮಿತ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಅವರು ತಿಳಿಸಿದರು.

ಗೋ ರಾ ಶ್ರೀನಿವಾಸ...
ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑