ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಬೈಲ್ ಕಳ್ಳರ ಬಂಧನ
ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಗಲ್ ದೇವಾಲಯದ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಮೂರು ಮಂದಿ ಬೈಕ್ ಸವಾರರನ್ನು ಗಸ್ತಿನಲ್ಲಿದ್ದ ಪೊಲೀಸರು ವಿಚಾರಿಸಲಾದ ಸಂದರ್ಭದಲ್ಲಿ ಮಾತನಾಡಲು ತಡವರಿಸಿದಾಗ ಪೊಲೀಸ್ ಠಾಣೆಗೆ ಕರೆತಂದು, ವಿಚಾರಣೆ ನಡೆಸಿದಾಗ ಕಳ್ಳರು ಎಂದು ಸಾಬೀತಾಗಿದೆ.
ಇದೇ ತಿಂಗಳ 5 ನೇ ತಾರೀಖಿನಂದು ಕೆಂಗಲ್ ದೇವಾಲಯದ ಹಿಂದಿರುವ ನೀಲಗಿರಿ ತೋಪಿನಲ್ಲಿ ಮೋಹನ್ ಎಂಬ ಯುವಕ ಬಹಿರ್ದೆಷೆಗೆ ತೆರಳಿದ ಸಂದರ್ಭದಲ್ಲಿ ಮೂರು ಮಂದಿ ಬೈಕ್ನಲ್ಲಿ ಬಂದು, ಮೋಹನ್ ರವರಿಗೆ ಪೆಪ್ಪರ್ ಸ್ಪ್ರೇ ಸಿಂಪಡಿಸಿ ಮೊಬೈಲ್ ಕದ್ದು ಹೋಯ್ದಿದ್ದರು. ಈ ಪ್ರಕರಣವನ್ನು ದಾಖಲಿಸಿ ಕೊಂಡಿದ್ದ ಗ್ರಾಮಾಂತರ ಠಾಣಾ ಪೊಲೀಸರು ಈ ಕಳ್ಳರನ್ನು ವಿಚಾರಿಸಲಾಗಿ, ಕಳ್ಳರು ತಪ್ಪು ಒಪ್ಪಿಕೊಂಡಿದ್ದಾರೆ.
ಈ ಮೂವರ ಬಳಿಯಿಂದ ಒಂದು ವಿವೋ ಸ್ಮಾರ್ಟ್ ಮೊಬೈಲ್, ಪೆಪ್ಪರ್ ಸ್ಪ್ರೇ ಮತ್ತು ನಂಬರ್ ಇಲ್ಲದ ಹೀರೋ ಹೋಂಡಾ ಸ್ಪ್ಲೆಂಡರ್ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದು, ಆರೋಪಿಗಳಾದ ಶ್ರೀನಿವಾಸ ಬಿನ್ ರಾಮಕೃಷ್ಣ, ಕೊರಟಗೆರೆದೊಡ್ಡಿ, ಕನಕಪುರ ತಾಲ್ಲೂಕು, ನಾಗರಾಜು ಬಿನ್ ದೇವರಾಜು, ಮಳೂರು ಪಟ್ಟಣ, ಚನ್ನಪಟ್ಟಣ ತಾಲ್ಲೂಕು, ಬಾಲಾಜಿ ಬಿನ್ ಆನಂದ ಹನುಮಂತನಗರ ಚನ್ನಪಟ್ಟಣ ಟೌನ್ ಇವರುಗಳ ಮೇಲೆ ಐಪಿಸಿ 392 ರ ಸೆಕ್ಷನ್ ಅಡಿ ಪ್ರಕರಣ ದಾಖ ಲಿಸಿಕೊಂಡಿದ್ದು, ನ್ಯಾಯಾಲ ಯಕ್ಕೆ ಹಾಜರು ಪಡಿಸಿದ್ದಾರೆ.
ಡಿವೈಎಸ್ಪಿ ರಮೇಶ್ ನೇತೃತ್ವದಲ್ಲಿ ವೃತ್ತ ನಿರೀಕ್ಷಕ ಶಿವಕುಮಾರ್, ಪಿಎಸ್ಐ ಶಿವಕುಮಾರ್, ಎಎಸ್ಐ ಮೋಹನ್ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು