Tel: 7676775624 | Mail: info@yellowandred.in

Language: EN KAN

    Follow us :


ಎಲ್ಲಾ ಖಾಸಗಿ ಶಾಲೆಗಳಿಗೂ ಮಾದರಿ ಹೆಚ್ ಕೆ ಶಾಂತಾಮರಿಯಪ್ಪ ಶಾಲಾ ಆಡಳಿತ ಮಂಡಳಿ. ಸು ತ ರಾ

Posted date: 18 Jun, 2021

Powered by:     Yellow and Red

ಎಲ್ಲಾ ಖಾಸಗಿ ಶಾಲೆಗಳಿಗೂ ಮಾದರಿ ಹೆಚ್ ಕೆ ಶಾಂತಾಮರಿಯಪ್ಪ ಶಾಲಾ ಆಡಳಿತ ಮಂಡಳಿ. ಸು ತ ರಾ

ಹಳೆ ಮೈಸೂರು ಭಾಗದ ಅಂದಿನ ನಾಯಕರಾಗಿದ್ದ, ಸ್ವಾತಂತ್ರ್ಯ ಸೇನಾನಿ ಹೆಚ್ ಕೆ ವೀರಣ್ಣಗೌಡರ ಕುಟುಂಬ ಬಹಳ ಮಹತ್ವದ ಕುಟುಂಬ. ಈ ಕುಟುಂಬವು ಸ್ವಾತಂತ್ರ್ಯ ಪೂರ್ವದಲ್ಲೇ ಬೆಳೆದು ನಿಂತಿತ್ತು. ಈಗಲೂ ಸಹ ಅವರದೇ ಆದ ಗೌರವವನ್ನು ಉಳಿಸಿಕೊಂಡಿದೆ. ಇಂದು ಇಗ್ಗಲೂರು ಡ್ಯಾಂ ನ್ನು ನನ್ನದು, ನನ್ನದು ಎಂದು ಕೊಚ್ಚಿಕೊಳ್ಳುತ್ತಾರೆ. ಆದರೆ ಹೆಚ್ ಕೆ ವೀರಣ್ಣಗೌಡರು ಅಂದೆ ಈ ಕೆಲಸಕ್ಕೆ ಅಡಿಪಾಯ ಹಾಕಿದರು ಎಂದು ಬಯಲುಸೀಮೆ ಪತ್ರಿಕಾ ಸಂಪಾದಕರಾದ ಸು ತ ರಾಮೇಗೌಡ ತಿಳಿಸಿದರು.

ಅವರು ಇಂದು ತಾಲ್ಲೂಕಿನ ಅವ್ವೇರಹಳ್ಳಿ ಗ್ರಾಮದಲ್ಲಿ ಡಾ ಎಚ್ ಕೆ ಶಾಂತಾಮರಿಯಪ್ಪ ಕಾನ್ವೆಂಟ್ ನಲ್ಲಿ ಸಿಬ್ಬಂದಿಗಳಿಗೆ ಧನಸಹಾಯ ಮತ್ತು ದಿನಸಿ ಕಿಟ್ ನೀಡಿ ಮಾತನಾಡಿದರು.


ಇಂತಹ ಕುಟುಂಬದ ಹಿನ್ನೆಲೆಯಲ್ಲಿ ಬಂದ ಡಾ ಮರಿಯಪ್ಪ ನವರು ಈ ಕೋವಿಡ್ ಸಂದರ್ಭದಲ್ಲಿ ಶಾಲೆ ತೆರೆಯದಿದ್ದರೂ, ಶಿಕ್ಷಕರಿಗೆ ಮತ್ತು ಸಿಬ್ಬಂದಿಗಳಿಗೆ ಧನಸಹಾಯ ಮತ್ತು ದಿನಸಿ ಕಿಟ್ ನೀಡುತ್ತಿರುವುದು ಅವರ ಮಾನವೀಯತೆಯನ್ನು ತೋರಿಸುತ್ತದೆ ಎಂದರು. ಮರಿಯಪ್ಪ ನವರ ಅಣ್ಣ ಹೆಚ್ ಕೆ ವೀರಣ್ಣಗೌಡರು ಮುಂಗೋಪಿಯಾದರೂ ಸಮಾಜ ಮತ್ತು ರಾಜಕೀಯವನ್ನು ಅರೆದು ಕುಡಿದವರಾಗಿದ್ದರು. ಇವರ ತಮ್ಮ ಸಹ ಬಡವರ ಮೇಲೆ ಕರುಣೆ ತೋರುವಂತಹ ಹೃದಯವಂತರಾಗಿದ್ದರು. ಇಂದಿನ ಕೋವಿಡ್ ಸಮಯದಲ್ಲೂ ಅವರು ನಿಸ್ವಾರ್ಥದಿಂದ ಮಾಡುತ್ತಿರುವ ಸೇವೆ ಶ್ಲಾಘನೀಯ, ಬಹುಶಃ ಯಾವುದೇ ಖಾಸಗಿ ಶಾಲೆ ನೀಡದ ಸವಲತ್ತುಗಳನ್ನು ಇವರು ನೀಡುತ್ತಿರುವುದರಿಂದ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಪೈಕಿ ಈ ಶಾಲೆಯು ಮಾದರಿಯಾಗಿದೆ ಎಂದರು.


ವಿಶ್ವ ಮಾನವ ಎಂಬ ಬಿರುದು ಕುವೆಂಪು ರವರಂತೆ ಡಾ ಮರಿಯಪ್ಪ ನವರಿಗೆ ಸಲ್ಲುತ್ತದೆ. ಇಂತಹ ವ್ಯಕ್ತಿ ಸಿಗುವುದು ವಿಶ್ವದಲ್ಲೇ ಅಪರೂಪ. ವಿಶ್ವದ ಯಾವುದೋ ಮೂಲೆಯಲ್ಲಿ ಕುಳಿತು ನಮ್ಮ ಶಾಲೆಗಳ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳ ಬಗ್ಗೆ ಚಿಂತಿಸಿ, ಧನಸಹಾಯ ಮತ್ತು ಆಹಾರ ಕಿಟ್ ನೀಡುತ್ತಿರುವುದು ಸಂತಸ ತಂದಿದೆ. ನಾವೆಲ್ಲರೂ ಅವರಿಗೆ ಚಿರ ಋಣಿ ಆಗಿರುತ್ತೇವೆ ಎಂದು ಮದ್ದೂರು ನಗರದ ಹೆಚ್ ಕೆ ವೀರಣ್ಣಗೌಡ ಶಾಲೆಯ ಮುಖ್ಯ ಶಿಕ್ಷಕ ಶೌಕತ್ ಅಲಿ ಶ್ಲಾಘಿಸಿದರು.


ಕಾನ್ವೆಂಟ್ ನ ಮುಖ್ಯ ಶಿಕ್ಷಕ ವರದರಾಜು ರವರು ಮಾತನಾಡಿ ಪ್ರತಿ ವಾರವೂ ಸಹ ಶಾಲೆ ಮತ್ತು ಸಿಬ್ಬಂದಿಗಳ ಬಗ್ಗೆ ಕೇಳುತ್ತಾರೆ. ಈ ಬಾರಿ ಕಳೆದ ಒಂದೂವರೆ ವರ್ಷಗಳ ಕಾಲ ಶಾಲೆ ತೆರೆಯದಿದ್ದರಿಂದ ಸಿಬ್ಬಂದಿಗಳು ಸಂಕಷ್ಟವನ್ನು ಅರಿತು ನಾಲ್ಕನೇ ಬಾರಿಗೆ ಶಿಕ್ಷಕರಿಗೆ ಧನಸಹಾಯ ಮಾಡುತ್ತಿದ್ದಾರೆ. ಧನಸಹಾಯದ ಜೊತೆಗೆ ಈ ಬಾರಿ ದಿನಸಿ ಕಿಟ್ ಸಹ ನೀಡುತ್ತಿರುವುದು ನಮ್ಮೆಲ್ಲರ ಸುದೈವ ಎಂದೇ ಭಾವಿಸಬಹುದು. ಇದರ ಜೊತೆಗೆ ಸರ್ಕಾರಿ ಶಾಲೆಗಳಂತೆ ನಮ್ಮ ಶಾಲೆಯಲ್ಲೂ ಮಕ್ಕಳಿಗೆ ಅನ್ನದಾಸೋಹ ಮಾಡುತ್ತಿರುವುದು ಸಂತಸ ತಂದಿದೆ ಎಂದರು.


ಮದ್ದೂರು ತಾಲ್ಲೂಕಿನ ಶಾಂತಾಮರಿಯಪ್ಪ ಪಬ್ಲಿಕ್ ಸ್ಕೂಲ್ ಮತ್ತು ಅವ್ವೇರಹಳ್ಳಿ ಕಾನ್ವೆಂಟ್ ನ  ಬೋಧಕರು ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ಸಂಸ್ಥೆಯ ಆಡಳಿತ ಮಂಡಳಿ ವತಿಯಿಂದ ಉಚಿತವಾಗಿ ಐದು ಸಾವಿರ ರೂಪಾಯಿಗಳ ಚೆಕ್ ಮತ್ತು ದಿನಸಿ ಕಿಟ್ ಗಳನ್ನು ವೇದಿಕೆಯ ಗಣ್ಯರು ನೀಡಿದರು.

ಕಾರ್ಯಕ್ರಮದಲ್ಲಿ ಅಕ್ಕೂರು ಗ್ರಾಮ ಪಂಚಾಯತಿ ಅಧ್ಯಕ್ಷ ಅಶೋಕ, ಸದಸ್ಯೆ ಪ್ರಿಯಾ ಉಮೇಶ್, ಆಡಳಿತ ಮಂಡಳಿಯ ಹರೀಶ್, ಕರ್ನಾಟಕ ಜಾನಪದ ಪರಿಷತ್ ನ ತಾಲ್ಲೂಕು ಅಧ್ಯಕ್ಷ ಗೋ ರಾ ಶ್ರೀನಿವಾಸ, ಮದ್ದೂರು ತಾಲ್ಲೂಕಿನ ವರದಿಗಾರ ಹರೀಶ್ ಮತ್ತಿತರರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑