Tel: 7676775624 | Mail: info@yellowandred.in

Language: EN KAN

    Follow us :


ಯೋಗವನ್ನು ಒಂದು ದಿನಕ್ಕೆ ಸೀಮಿತಗೊಳಿಸಬೇಡಿ. ಪ್ರತಿದಿನ ರೂಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಿ: ಡಾ: ರಾಕೇಶ್ ಕುಮಾರ್

Posted date: 21 Jun, 2021

Powered by:     Yellow and Red

ಯೋಗವನ್ನು ಒಂದು ದಿನಕ್ಕೆ ಸೀಮಿತಗೊಳಿಸಬೇಡಿ. ಪ್ರತಿದಿನ ರೂಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಿ: ಡಾ: ರಾಕೇಶ್ ಕುಮಾರ್

ರಾಮನಗರ, ಜೂನ್.21. ಯೋಗವನ್ನು ಒಂದು ದಿನಕ್ಕೆ ಮೀಸಲಿಡದೆ, ಪ್ರತಿದಿನದ ಅಭ್ಯಾಸವಾಗಿ ರೂಢಿಸಿಕೊಂಡರೆ ಉತ್ತಮ ಆರೋಗ್ಯಭಾಗ್ಯ ಸಿಗುತ್ತದೆ. ಎಲ್ಲರು ಅಭ್ಯಾಸಿಸಿ,  ಆರೋಗ್ಯವನ್ನು ಪರಿಣಾಮಕಾರಿಯಾಗಿ ಕಾಯ್ದುಕೊಳ್ಳಬಹುದು. ಯೋಗವು ಇಂದಿಗೆ ಮಾತ್ರ ಸೀಮಿತವಾಗದೆ, ಪ್ರತಿನಿತ್ಯ ರೂಢಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ ಅವರು ಕರೆ ನೀಡಿದರು. 


ಅವರು ಇಂದು 7 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅಂತರ್ಜಾಲ ಜೂಮ್ ವೇದಿಕೆಯಲ್ಲಿ  ಚಾಲನೆ ನೀಡಿ  ಹಾಗೂ ಸ್ವತಃ  ಯೋಗಾಭ್ಯಾಸದಲ್ಲಿ ತೊಡಗಿ ಎಲ್ಲರಿಗೂ ಪ್ರೇರೇಪಿಸಿದರು. ಯೋಗಾಭ್ಯಾಸ ಮಾಡಿದರೆ ಪ್ರತಿಯೊಬ್ಬರು ದೈಹಿಕವಾಗಷ್ಟೆ ಅಲ್ಲದೆ ಮಾನಸಿಕ ವಾಗಿಯೂ ಪ್ರಭಾವಶಾಲಿಯಾಗಿರಬಹುದೆಂದು ತಿಳಿಸಿದರು.


ಬೆಳಿಗ್ಗೆ 6.30 ಕ್ಕೆ ಚನ್ನಪಟ್ಟಣ ದ ಆನಂದಾದ್ರಿ ಭಜನಾ ತಂಡದ ಮುಖ್ಯಸ್ಥೆ ಮಾಲತಿ ಸುರೇಶ್ ರವರು ಪ್ರಾರ್ಥನೆ ಮಾಡಿದರು. ಮದ್ದೂರು ಮಹಿಳಾ ಕಾಲೇಜಿನ ಪ್ರಾಂಶುಪಾಲ ಪ್ರೊ ಕೃಷ್ಣೇಗೌಡರು ಸಾಂದರ್ಭಿಕವಾಗಿ ಮಾತನಾಡಿದರು. ನಂತರ ರಾಮನಗರ ಜಿಲ್ಲಾ ಆಯುಷ್ ಅಧಿಕಾರಿ ಡಾ|| ಬಿ.ಎಸ್. ರಾಜಲಕ್ಷ್ಮಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಯೋಗವು ನಮ್ಮ ಭಾರತೀಯ ಸಂಸ್ಕೃತಿಯ ಪರಂಪರೆಯಿಂದ ಸಾವಿರಾರು ವರ್ಷಗಳ ಹಿಂದೆಯೇ ಹುಟ್ಟಿ ಬಂದಿರುವುದು ಅಂದಿನ ಮಹರ್ಷಿಗಳು ತಮ್ಮ ದಿವ್ಯ ಜ್ಞಾನದೃಷ್ಟಿಯಿಂದ ಇದರ ಮಹತ್ವ ತಿಳಿದು ಪ್ರತಿನಿತ್ಯ ಅಭ್ಯಾಸಿಸುತ್ತ ಉತ್ತಮ ಆರೋಗ್ಯವಂತರಾಗಿದ್ದರು ಎನ್ನುವುದು ನಮೆಲ್ಲರಿಗೂ ಉತ್ತಮ ನಿದರ್ಶನವಾಗಿದೆ. ಯೋಗವು ಮಾನಸಿಕ ಹಾಗೂ ಶಾರೀರಿಕ ಧೃಡತೆಯನ್ನು ತರುತ್ತದೆ ಹಾಗೂ ದೇಹ, ಮನಸ್ಸು, ಬುದ್ದಿ ಮತ್ತು ಆತ್ಮವನ್ನು ಸೇರಿಸಿ ಸಮಸ್ಥಿತಿಯಲ್ಲಿರಿಸುವುದೇ ಯೋಗದ ವೈಶಿಷ್ಟ್ಯತೆ ಎಂದು ತಿಳಿಸಿದರು.


ಭಾರತ ದೇಶದ ಕೊಡುಗೆಯಾದ ಇದನ್ನು ವಿಶ್ವವಿಡೀ ಯೋಗ ದಿನಾಚರಣೆಯನ್ನು ಆಚರಿಸುವಂತೆ ನಮ್ಮ ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿಯವರು 2004 ರಿಂದ ಪ್ರಾರಂಭಿಸಿ ಎಲ್ಲಾ ರಾಷ್ಟ್ರದವರು ಆಚರಿಸುವಂತೆ ಮಾಡಿರುವುದು ಭಾರತೀಯರೆಲ್ಲರಿಗು ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು. 


ಬೆಳಿಗ್ಗೆ 7.00 ಗಂಟೆಗೆ ಯೋಗಾಭ್ಯಾಸ ಪ್ರಾರಂಭವಾಯಿತು ರಾಧಿಕಾ ರವಿಕುಮಾರ್ ಅವರು ಯೋಗಾಸನಗಳನ್ನು ಮಾಡಿಸಿದರು. ನಂತರ 7.30 ಕ್ಕೆ ಪ್ರಾಣಾಯಾಮವನ್ನು ಮಾಡಿಸಿ, 7.45 ಕ್ಕೆ ಧ್ಯಾನವನ್ನು ಮಾಡಿಸಿ ಎಲ್ಲರ ಮನಸ್ಸನ್ನು ಪ್ರಪುಲ್ಲಗೊಳಿಸಿದರು. ಕಾರ್ಯಕ್ರಮದಲ್ಲಿ 93 ಕುಟುಂಬ ಹಾಗೂ ಸಂಸ್ಥೆಗಳ ಮೂಲಕ ಪಾಲ್ಗೊಂಡು ಒಟ್ಟು 345 ಜನ ಭಾಗವಹಿಸಿದ್ದರು.


 ದಿನಾಚರಣೆ ಆಚರಿಸುವ ಸಲುವಾಗಿ ಪೂರ್ವಭಾವಿ ಸಭೆಯನ್ನು ಜೂನ್ 13 ರಂದು ಜಿಲ್ಲಾ ಆಯುಷ್ ಅಧಿಕಾರಿಗಳು ಹಾಗೂ ಸರ್ಕಾರೇತರ ಸಂಸ್ಥೆಗಳಾದ, ಆರ್ಟ್ ಆಫ್ ಲಿವಿಂಗ್, ಪತಂಜಲಿ ಯೋಗ ಟ್ರಸ್ಟ್, ಹಾಗೂ ಕೆಂಗಲ್ ಹನುಮಂತಯ್ಯ ಕ್ರೀಡಾ ಮತ್ತು ಸಾಂಸ್ಕೃತಿಕ ಕೇಂದ್ರ ಇವರೊಂದಿಗೆ ಚರ್ಚಿಸಿ ಕಾರ್ಯಕ್ರಮದ ರೂಪುರೇಷೆಯನ್ನು ಸಿದ್ದಗೊಳಿಸಿಕೊಳ್ಳಲಾಯಿತು. 


ಆರ್ಟ್ ಆಫ್ ಲಿವಿಂಗ್ ಹಾಗೂ ಪತಂಜಲಿ ಯೋಗ ಟ್ರಸ್ಟ್ ಇವರು ಜೂನ್ 18, 19 ಮತ್ತು 20 ರಂದು ಉಚಿತ ಯೋಗ ತರಗತಿಗಳನ್ನು ನಡೆಸಿದರು. ಸುಮಾರು 50 ಕ್ಕೂ ಹೆಚ್ಚು ಸಾರ್ವಜನಿಕರು ಆಸಕ್ತಿಯಿಂದ ಪಾಲ್ಗೊಂಡು ಉಚಿತ ಯೋಗ ತರಗತಿಯ ಪ್ರಯೋಜನವನ್ನು ಪಡೆದುಕೊಂಡರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑