ಯಥೇಚ್ಛ ಮದ್ಯಪಾನ ಮಾಡಿಸಿ ಕೊಲೆ, ಬಿ ವಿ ಪಾಳ್ಯ ಗ್ರಾಮದಲ್ಲಿ ಘಟನೆ. ಪೋಲಿಸರು ದೌಡು
ಯುವಕೋನರ್ವನಿಗೆ ಯಥೇಚ್ಛವಾಗಿ ಮದ್ಯಪಾನ ಮಾಡಿಸಿ, ಕಬ್ಬಿಣದ ರಾಡ್ ನಿಂದ ತಲೆಗೆ ಹೊಡೆದು, ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ಅಕ್ಕೂರು ಪೋಲಿಸ್ ಠಾಣಾ ವ್ಯಾಪ್ತಿಯ, ಸಾತನೂರು ರಸ್ತೆಯ ಬಿ ವಿ ಪಾಳ್ಯ ಗ್ರಾಮದಲ್ಲಿ ಸೋಮವಾರ ತಡರಾತ್ರಿ ನಡೆದಿದೆ. ಡಿವೈಎಸ್ಪಿ ಸೇರಿದಂತೆ ಅಕ್ಕೂರು ಪೋಲಿಸರು ಮುಂಜಾನೆ ದೌಡಾಯಿಸಿ ಘಟನಾ ಸ್ಥಳವನ್ನು ಪರೀಶೀಲಿಸುತ್ತಿದ್ದಾರೆ.
.
ತಾಲ್ಲೂಕಿನ ಬಿ ವಿ ಪಾಳ್ಯ ಗ್ರಾಮದ ಗಂಧದಕಡ್ಡಿ ವ್ಯಾಪಾರಿ ಶಂಕರ್ (30) ಕೊಲೆಯಾದ ಯುವಕ. ಈತನನ್ನು ಯಾರೋ ಮದ್ಯಪಾನ ಮಾಡಿಸಿ
ಚಿತ್ ಆದ ನಂತರ ಯಾವುದೋ ಕಾರಣಕ್ಕಾಗಿ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಬಿ ವಿ ಹಳ್ಳಿ ಮತ್ತು ಬಿ ವಿ ಪಾಳ್ಯ ಗ್ರಾಮದ ಸಾತನೂರು ಮುಖ್ಯ ರಸ್ತೆಯ ಒಂದು ಭಾಗದಲ್ಲಿ ಈತ ಕೊಲೆಯಾಗಿದ್ದಾನೆ.
ವಿಷಯ ತಿಳಿದ ಡಿವೈಎಸ್ಪಿ ಕೆ ಎನ್ ರಮೇಶ್, ಗ್ರಾಮಾಂತರ ವೃತ್ತ ನಿರೀಕ್ಷಕ ಶಿವಕುಮಾರ್, ಅಕ್ಕೂರು ಪಿಎಸ್ಐ ಸರಸ್ವತಿ, ಬೆರಳಚ್ಚು ತಜ್ಞರು, ಶ್ವಾನದಳ ಮತ್ತು ಪೋಲಿಸ್ ಸಿಬ್ಬಂದಿಗಳು ಮುಂಜಾನೆಯೇ ಸ್ಥಳಕ್ಕೆ ಭೇಟಿ ನೀಡಿ ಘಟನಾ ಸ್ಥಳ ಮತ್ತು ಕೊಲೆಯ ಬಗ್ಗೆ ಮಾಹಿತಿ ಕಲೆಹಾಕುತ್ತಿರುವುದಾಗಿ ತಿಳಿದುಬಂದಿದೆ.
ಕೊಲೆಯಾದ ಶಂಕರ್ ಶವವನ್ನು ಸ್ಥಳದ ಮಹಜರು ನಂತರ, ನಗರದ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ವಾರಸುದಾರರಿಗೆ ಒಪ್ಪಿಸಲಾಗುವುದು ಎಂದು ಪೋಲಿಸರು ತಿಳಿಸಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು