Tel: 7676775624 | Mail: info@yellowandred.in

Language: EN KAN

    Follow us :


ಕೊರೊನಾ ಅಣಕಿಸಿದ ಕಾಂಗ್ರೆಸ್ ದಿನಸಿ ಕಿಟ್. ಕಿಟ್ ಗಾಗಿ ಮುಗಿಬಿದ್ದ ಜನಸಾಮಾನ್ಯರು. ಗಾಳಿಗೆ ತೂರಿಹೋದ ನಿಯಮ

Posted date: 30 Jun, 2021

Powered by:     Yellow and Red

ಕೊರೊನಾ ಅಣಕಿಸಿದ ಕಾಂಗ್ರೆಸ್ ದಿನಸಿ ಕಿಟ್. ಕಿಟ್ ಗಾಗಿ ಮುಗಿಬಿದ್ದ ಜನಸಾಮಾನ್ಯರು. ಗಾಳಿಗೆ ತೂರಿಹೋದ ನಿಯಮ

ಕೊರೊನಾ ದಿಂದ ಜನಸಾಮಾನ್ಯರ ಬದುಕು ಅಧ:ಪತನಕ್ಕಿಳಿದಿರುವುದು ಸತ್ಯ. ಇದಕ್ಕಾಗಿ, ಪಕ್ಷಗಳು, ಸಂಘಸಂಸ್ಥೆಗಳು ಮತ್ತು ಉಳ್ಳವರನೇಕರು ಬಡಬಗ್ಗರಿಗೆ ದಿನಸಿ ಕಿಟ್ ನೀಡುತ್ತಿರುವುದು ಶ್ಲಾಘನೀಯವಾದರೂ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಸಹಾಯ ಹಸ್ತ ನೀಡುವ ನೆಪದಲ್ಲಿ ಮತ್ತಷ್ಟು ಕೊರೊನಾ ಹರಡುತ್ತಿರುವುದಂತು ಸತ್ಯವಾಗಿದೆ.


ಮಂಗಳವಾರ ದಿನ ಕೋಡಂಬಳ್ಳಿ ಗ್ರಾಮದಲ್ಲಿ ಸಂಸದ ಡಿಕೆ ಸುರೇಶ್ ಅವರ ನೇತೃತ್ವದಲ್ಲಿ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋಡಂಬಳ್ಳಿ ಶಿವಮಾದು ರವರ ಮುಂದಾಳತ್ವದಲ್ಲಿ ಆಹಾರದ ಕಿಟ್ ವಿತರಣೆ ಮಾಡಲಾಯಿತು. ಡಿ ಕೆ ಸುರೇಶ್ ಬಂದರೂ ಸಹ ಸಂಬಂಧಿಸಿದ ಪೋಲಿಸ್ ಠಾಣೆಯ ಸಿಬ್ಬಂದಿಗಳು ಕಾಣಲಿಲ್ಲ. ಆ ಸಂದರ್ಭದಲ್ಲಿ ಸಾರ್ವಜನಿಕರು ಕಿಟ್ ಪಡೆಯಲು ನಾಮುಂದು, ತಾಮುಂದು ಎಂದು ನೂಕುನುಗ್ಗಲಿನಲ್ಲಿ ದಿನಸಿ ಕಿಟ್ ಪಡೆದರು.


ಯೋಗೇಶ್ವರ್ ಪತ್ನಿಯ ಹುಟ್ಟುಹಬ್ಬ, ಹೆಚ್ ಡಿ ಕುಮಾರಸ್ವಾಮಿ ಯವರ ನೇತೃತ್ವದಲ್ಲಿ ನಡೆದ ಬಮೂಲ್ ಕಾರ್ಯಕ್ರಮ ಕಾಂಗ್ರೆಸ್ ಕಿಟ್  ಪಡೆಯುವ ಸಂದರ್ಭದಲ್ಲಿ ಕಂಡು ಬಂದ ದೃಶ್ಯಗಳು ಕೊರೋನಾ ಇಲ್ಲವೇ ಇಲ್ಲ ಎಂಬಂತೆ ಬಿಂಬಿಸುತ್ತಿದ್ದದ್ದು ಮಾತ್ರ ವೈದ್ಯಕೀಯ ಮತ್ತು ಆಡಳಿತ ಯಂತ್ರವನ್ನು ಅಣಕಿಸುವಂತಿತ್ತು.


ಒಂದು ಕಾರಿನಲ್ಲಿ ಮತ್ತು ಬೈಕ್ ನಲ್ಲಿ ಒಬ್ಬರೇ ಹೋಗುವಾಗಲು ಮಾಸ್ಕ್ ಧರಿಸದಿದ್ದರೆ ಹಿಡಿದು ದಂಡ ಹಾಕುವ ಪೋಲೀಸರು, ಸ್ಥಳೀಯ ಆಡಳಿತಾಧಿಕಾರಿಗಳೇ ಬೀದಿಗಿಳಿದು ದಂಡ ಹಾಕುವ ಅಧಿಕಾರಿಗಳು (ಅ)ಗಣ್ಯ ನಾಯಕರಿಗೇಕೆ ದಂಡ ವಿಧಿಸುವುದಿಲ್ಲ. ಕೋರ್ಟ್ ಕಟಕಟೆ ಹತ್ತಿಸುವುದಿಲ್ಲ. ವಾಹನ ಮುಟ್ಟುಗೋಲು ಹಾಕಿಕೊಳ್ಳುವುದಿಲ್ಲ. ಭಾರತ ದೇಶದಲ್ಲಿ ರಾಜಕಾರಣಿಗಳಿಗೊಂದು, ಜನಸಾಮಾನ್ಯರಿಗೊಂದು ಕಾನೂನು ಇದೆಯೇ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑