Tel: 7676775624 | Mail: info@yellowandred.in

Language: EN KAN

    Follow us :


ಕೆಂಪೇಗೌಡರು ಒಬ್ಬ ವ್ಯಕ್ತಿಗೆ ಸೀಮಿತವಲ್ಲ. ಅವರು ರಾಷ್ಟ್ರದ ನಾಯಕರು. ಎಲ್ಐಸಿ ನಾಗರಾಜು

Posted date: 05 Jul, 2021

Powered by:     Yellow and Red

ಕೆಂಪೇಗೌಡರು ಒಬ್ಬ ವ್ಯಕ್ತಿಗೆ ಸೀಮಿತವಲ್ಲ. ಅವರು ರಾಷ್ಟ್ರದ ನಾಯಕರು. ಎಲ್ಐಸಿ ನಾಗರಾಜು

ಕೆಂಪೇಗೌಡರು ಒಕ್ಕಲಿಗರಿಗಾಗಲಿ, ಬೆಂಗಳೂರು ನಿರ್ಮಾತೃರಾಗಿ ಸೀಮಿತವಾಗಿರಲಿಲ್ಲ. ಕರ್ನಾಟಕದ ಭಾಗವಾಗಿದ್ದ ವಿಜಯನಗರದ ಸಾಮ್ರಾಜ್ಯಕಷ್ಟೇ ಸೀಮೀತವಾಗಿರಲಿಲ್ಲ.‌ಅವರ ಕನಸು ಬಹಳ ವಿಸ್ತಾರವಾಗಿತ್ತು. ಇಡೀ ಭಾರತವನ್ನು ಒಂದು ಹಿಡಿಯಾಗಿ ನೋಡುವ ಕನಸು ಅವರಲ್ಲಿತ್ತು. ಹಾಗಾಗಿಯೇ ಅವರು ಜಾತಿ, ಧರ್ಮ ಮೀರಿ ನಿಂತು ಎಲ್ಲರಿಗೂ ಒಬ್ಬ ನಾಯಕನಾಗಿ ಗೋಚರಿಸಿದ್ದರು. ಅಂತಹ ನಾಯಕ ನಮ್ಮ ಜಿಲ್ಲೆಯವರಾಗಿದ್ದು ನಮ್ಮೆಲ್ಲರ ಹೆಮ್ಮೆ ಎಂದು ಎಲ್ಐಸಿ ನಾಗರಾಜು ತಿಳಿಸಿದರು.

ಅವರು ಭಾನುವಾರ ಸುಣ್ಣಘಟ್ಟ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕೆಂಪೇಗೌಡರ 512 ನೇ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು.


ಕೆಂಪೇಗೌಡರನ್ನು ನಮ್ಮವರೇ ಒಳಸಂಚು ಮಾಡಿ ಕೊಲೆ ಮಾಡಿಸಿದರು. ಅವರು ಅಂದು ಕೊಲೆಯಾಗದೇ ಹೋಗಿದ್ದರೆ, ಬೆಂಗಳೂರಿನಂತಹ ಅನೇಕ ನಗರಗಳನ್ನು, ಧರ್ಮಾತೀತವಾಗಿ, ಜಾತ್ಯಾತೀತವಾಗಿ ಕಟ್ಟುತ್ತಿದ್ದರು. ನಾಡನ್ನಷ್ಟೇ ಅಲ್ಲದೆ ರಾಷ್ಟ್ರವನ್ನು ಸದೃಢವಾಗಿ ಕಟ್ಟುವ ಕನಸು ಅವರಲ್ಲಿತ್ತು. ಇಡೀ ಪ್ರಪಂಚವೇ ತಿರುಗಿ ನೋಡುವಂತಹ ಆಡಳಿತಗಾರರಾಗುವುದರಲ್ಲಿ ಅನುಮಾನವೇ ಇರಲಿಲ್ಲ. ಇಂತಹ ಕೆಂಪೇಗೌಡರು 500 ವರ್ಷಗಳ ಹಿಂದೆ ಇದ್ದರು ಎಂಬುದನ್ನು ನಾವು ನೆನಪಿಸಿಕೊಳ್ಳುತ್ತೇವೆ ಎಂದರೆ ಅದು ಅವರು ಮಾಡಿರುವ ಕೆಲಸ ಕಾರ್ಯಗಳೇ ಕಾರಣ ಎಂದು ಶ್ಲಾಘಿಸಿದರು.


ಇದೇ ಸಂದರ್ಭದಲ್ಲಿ ಗ್ರಾಮದ  ಉಮೇಶ್ ಅವರ ಪುತ್ರ ಕಾರ್ತಿಕ್ ಎಸ್ ಯು, ಅವರ ರಾಜ್ಯಮಟ್ಟದ 14 ವರ್ಷದೊಳಗಿನ ಕ್ರಿಕೆಟ್ ಟೀಂ ಗೆ ಆಯ್ಕೆಯಾಗಿದ್ದು, ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ನಿಂಗಮ್ಮ ಕುಮಾರ್,  ಉಪಾಧ್ಯಕ್ಷೆ ರಶ್ಮಿ ವೆಂಕಟೇಶ್, ಸದಸ್ಯರಾದ ರಮೇಶ್, ಮಾಜಿ ಸದಸ್ಯರಾದ ಉದಯಕುಮಾರ್ ಹಾಗೂ ಗ್ರಾಮಸ್ಥರು ಹಾಜರಿದ್ದರು. ಈ ಕಾರ್ಯಕ್ರಮವನ್ನು ಯುವ ಮುಖಂಡರಾದ ಸುಕೇಶ್ ಅಶ್ವತ್ , ಸ್ಕೂಲ್ ಮಾಸ್ಟರ್ ನಾಗೇಶ್ ಯಶಸ್ವಿಯಾಗಿ ನಡೆಸಿಕೊಟ್ಟರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑