Tel: 7676775624 | Mail: info@yellowandred.in

Language: EN KAN

    Follow us :


ಮೀನು ಕೃಷಿ ಸಹಾಯವಾಣಿಗೆ ಸಚಿವ ಎಸ್ ಅಂಗಾರವರಿಂದ ಚಾಲನೆ

Posted date: 10 Jul, 2021

Powered by:     Yellow and Red

ಮೀನು ಕೃಷಿ ಸಹಾಯವಾಣಿಗೆ ಸಚಿವ ಎಸ್ ಅಂಗಾರವರಿಂದ ಚಾಲನೆ

ಮೀನು ಕೃಷಿಕರ  ದಿನಾಚರಣೆಯ ಅಂಗವಾಗಿ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ  ಸಚಿವರಾದ ಎಸ್.ಮೀನುಗಾರಿಕೆ ಸಚಿವರಾದ ಅಂಗಾರ ಅವರು ಮೀನುಗಾರಿಕೆಯ ಮಾಹಿತಿ ನೀಡುವ ಸಹಾಯವಾಣಿಗೆ ಚಾಲನೆ ನೀಡಿದರು. ಸಹಾಯವಾಣಿ ಸಂಖ್ಯೆ 8277200300 ಆಗಿದ್ದು, ಸಚಿವರು ಸಹಾಯವಾಣಿಗೆ ಕರೆ ಮಾಡಿ ಮೀನುಗಾರಿಕೆ ದಿನಾಚರಣೆಗೆ ಶುಭಾಶಯ ಕೋರಿ, ಸಹಾಯವಾಣಿಯನ್ನು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.


ಅವರು ಇಂದು ಬಿಡದಿಯ ನಲ್ಲಿಗುಡ್ಡೆಯಲ್ಲಿ ನಡೆದ ಮೀನು ಕೃಷಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಸರ್ಕಾರವು ಸಾಧನೆ ಮಾಡಿದ ಮಹಾನ್ ವ್ಯಕ್ತಿಗಳನ್ನು ನೆನಪಿಸಿಕೊಳ್ಳಲು ಹಾಗೂ ಅವರು ಮಾಡಿದ ಶ್ರಮಗಳನ್ನು ತಿಳಿಸಲು ದಿನಾಚರಣೆ ಆಚರಿಸುತ್ತದೆ‌.   ಹೀರಾಲಾಲ್ ಚೌಧರಿ ಅವರ ಸಾಧನೆ ಅಂಗವಾಗಿ ಜುಲೈ 10 ರಂದು ಮೀನುಗಾರಿಕೆ ದಿನಾಚರಣೆ ಆಚರಿಸಲಾಗುತ್ತಿದೆ. ಮೀನು ಕೃಷಿಗೆ ಪ್ರೋತ್ಸಾಹ ನೀಡಲು ಪ್ರಧಾನಮಂತ್ರಿ ಮತ್ಸ ಸಂಪದ ಹಾಗೂ ಇನ್ನಿತರ ಯೋಜನೆಯಡಿ ಸಹಾಯ ನೀಡಲಾಗುತ್ತಿದೆ ಎಂದರು.


ಇಂದಿನ ದಿನದಲ್ಲಿ ಜನರ ಯೋಚನೆ ಹಾಗೂ ಜೀವನಶೈಲಿಗೆ ತಕ್ಕಂತೆ ಕೃಷಿ, ಕೈಗಾರಿಕೆ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ನೀತಿ ರೂಪಿಸಿ ಅಭಿವೃದ್ಧಿ ಮಾಡಬೇಕಿದೆ ಎಂದರು.


ಮೀನು ಉತ್ಪಾದನೆಯ ಜೊತೆ ಮಾರಾಟಕ್ಕೆ ಪೂರಕ ವ್ಯವಸ್ಥೆಗಳನ್ನು ಮಾಡಿಕೊಂಡಾಗ ಹೆಚ್ಚು ಲಾಭಗಳಿಸಬಹುದು. ಕರಾವಳಿ ಹಾಗೂ ಒಳನಾಡಿನಲ್ಲಿ ಬೇರೆ ಬೇರೆ ರೀತಿ ಮೀನು ಕೃಷಿ ಇದೆ. ಇವುಗಳ ಬಗ್ಗೆ ಅಧ್ಯಯನ ಮಾಡಬೇಕು ಎಂದರು. 


ಕಾರ್ಯಕ್ರಮದಲ್ಲಿ ಮೀನು ಕೃಷಿಗೆ ಸಂಬಂಧಿಸಿದಂತೆ ಜನರಿಗೆ ಇರುವ ತೊಂದರೆಗಳ ಬಗ್ಗೆ ಗಮನ ಸೆಳೆದಿದ್ದಾರೆ. ಈ ಕುರಿತಂತೆ ಅಧಿಕಾರಿಗಳ ಸಭೆ ಕರೆದು ಮೀನು ಕೃಷಿ ತೊಂದರೆಯ ಬಗ್ಗೆ ಚರ್ಚಿಸಲಾಗುವುದು ಎಂದರು.


ಲೋಕಸಭಾ ಸದಸ್ಯ ಡಿ.ಕೆ.ಸುರೇಶ್ ಅವರು ಮಾತನಾಡಿ ರೈತ ಸಮಗ್ರ ಕೃಷಿಯ ಬಗ್ಗೆ ಮಾಹಿತಿ ಪಡೆಯಬೇಕಾದರೆ ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ವಿವಿಧ ಇಲಾಖೆ ಸುತ್ತಬೇಕು. ಇದು ರೈತನಿಗೆ ಕಷ್ಟಕರ ಇದರ ಬದಲಿಗೆ ಎಲ್ಲಾ ಮಾಹಿತಿ ಒಂದೆಡೆ ಸಿಗುವಂತಾಗಬೇಕು‌. ಮೀನುಗಾರಿಕೆಗೆ ಪ್ರೋತ್ಸಾಹ ನೀಡಲು ಪ್ರಧಾನ ಮಂತ್ರಿ ಮತ್ಸ ಯೋಜನೆ ರೂಪಿಸಿ ವಿವಿಧ ರೀತಿಯಲ್ಲಿ ಸಹಾಯಧನ ನೀಡಲಾಗುತ್ತಿದೆ ಎಂದರು.


ಯುವಕರು ಸ್ವಾವಲಂಬಿಯಾಗಲು ಕೃಷಿಯೇ ದಾರಿ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೃಷಿ ಅಥವಾ ಯಾವುದೇ ಉದ್ದಿಮೆ ರೂಡಿಸಿಕೊಂಡರು ಎಚ್ಚರಿಕೆ ಹಾಗೂ ಜ್ಞಾನ ಇರಬೇಕು. ಆರೋಗ್ಯದ ಹಿನ್ನಲೆಯಲ್ಲಿ ಇಂದು ಆಹಾರದಲ್ಲಿ ಜನರು ಮೀನಿಗೆ ಹೆಚ್ಚು ಆದ್ಯತೆ ನೀಡುತ್ತಾರೆ‌. ಮೀನು ಕೃಷಿ ಕೂಡ ಲಾಭದಾಯಕ ಉದ್ದಿಮೆಯಾಗಿರುತ್ತದೆ. ಉದ್ದಿಮೆಯಲ್ಲಿ ತೊಡಗಿಸಿಕೊಳ್ಳುವವರು ಆಸಕ್ತಿ ಹಾಗೂ ಜವಾಬ್ದಾರಿಯನ್ನು ರೂಡಿಸಿಕೊಳ್ಳಬೇಕು. ಕೃಷಿ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರ  ಮುಂದಿನ ದಿನದಲ್ಲಿ ಇಡೀ ಭಾರತದ ಚಿತ್ರಣವನ್ನೇ ಬದಲಾಯಿಸಲಿದೆ‌ ಎಂದರು.


ಕಾರ್ಯಕ್ರಮದಲ್ಲಿ ಮಾಗಡಿ ಶಾಸಕ ಎ.ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಸಿ‌.ಎಂ.ಲಿಂಗಪ್ಪ, ಮೀನುಗಾರಿಕೆ ಇಲಾಖೆ ಜಂಟಿ ನಿದೇಶಕ ದಿನೇಶ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑