Tel: 7676775624 | Mail: info@yellowandred.in

Language: EN KAN

    Follow us :


ಮರ ಕಡಿಯುವಾಗ ಮೇಲೆ ಬಿದ್ದು, ಸಂಕಲಗೆರೆ ಗ್ರಾಮದ ಯುವಕ ಸಾವು

Posted date: 29 Jul, 2021

Powered by:     Yellow and Red

ಮರ ಕಡಿಯುವಾಗ ಮೇಲೆ ಬಿದ್ದು, ಸಂಕಲಗೆರೆ ಗ್ರಾಮದ ಯುವಕ ಸಾವು

ಚನ್ನಪಟ್ಟಣ, ಜು.೨೭: ತಾನೇ ಕಡಿದ ಮರ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಹೊಟ್ಟಿಗನಹೊಸಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ತಾಲೂಕಿನ ಸಂಕಲಗೆರೆ ಗ್ರಾಮದ ರಾಜು (೪೮) ಎಂಬುವರೆ ಮೃತಪಟ್ಟ ದುರ್ದೈವಿಯಾಗಿದ್ದು, ಇವರು ಮರ ಕಡಿಯುವ 

ವೃತ್ತಿ ಮಾಡಿಕೊಂಡಿದ್ದು ನಿಪುಣರೂ ಆಗಿದ್ದರು.


ಹೊಟ್ಟಿಗನಹೊಸಹಳ್ಳಿ ಗ್ರಾಮದಲ್ಲಿನ ವ್ಯಕ್ತಿಯೊಬ್ಬರ ಮನೆಯ ಬಳಿಯಿದ್ದ ಮರವನ್ನು ಕಡಿಯುವ ನಿಟ್ಟಿನಲ್ಲಿ ಕೆಲಸ ಮಾಡಿದ್ದ ರಾಜು ಅವರಿಗೆ ತಾನೇ ಕಡಿದ ದಪ್ಪ ಕೊಂಬೆ ಬಿದ್ದು ರಾಜು 

ಸಾವನ್ನಪ್ಪಿದ್ದಾರೆ. 

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಶವವನ್ನು ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ಮಾಡಿಸಿ 

ವಾರಸುರದಾರರಿಗೆ ನೀಡಿದ್ದಾರೆ.


ಈ ಸಂಬಂಧ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಯುಡಿಆರ್ 174 ಸಿ ಆರ್ ಪಿ ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑