ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಅಧಿಕಾರಿ. ಒಂದು ಲಕ್ಷ ರೂ ದಂಡ. ಮೂರು ವರ್ಷ ಸಜೆ
ರಾಮನಗರ: ಡಿ/08/21. ರಾಮನಗರ ಲೋಕಾಯುಕ್ತ ಕಛೇರಿಗೆ ಪಿರ್ಯಾದಿ ವಿಜಯ್ ಕುಮಾರ್ ಒಡೆಯರ್ ರವರು ದಿನಾಂಕ: 08-07-2020 ರಂದು ಹಾಜರಾಗಿ ಮನೋರಾಜ್ ಐ. ಸಹಕಾರ ಅಭಿವೃದ್ದಿ ಅಧಿಕಾರಿ, ಸಹಕಾರ ಸಂಘ ಇಲಾಖೆಯ ಅಧಿಕಾರಿ ವಿರುದ್ದ ದೂರು ನೀಡಿದ್ದು, ಆರೋಪಿಯು 1,000/- ರೂ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿರುತ್ತಾರೆ. ಅಂದಿನ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರಾದ ಟಿ.ಹೆಚ್ ಮಂಜಪ್ಪ ಮತ್ತು ಲೋಕಾಯುಕ್ತ ಪೊಲೀಸ್ ನಿರೀಕ್ಷಕರುಗಳಾದ ಸಣ್ಣತಮ್ಮಪ್ಪಯ್ಯ ಒಡೆಯರ್ ಹಾಗೂ ಬಿ.ಆರ್. ಪ್ರದೀಪ್ ರವರು ತನಿಖೆಯನ್ನು ನಡೆಸಿ ಆರೋಪಿಯ ವಿರುದ್ಧ ಆರೋಪ ಸಾಬೀತಾದ ಕಾರಣ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಸದರಿ ಪ್ರಕರಣಕ್ಕೆ ಸಂಬಂಧಿಸದಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ರಾಮನಗರವು ವಿಚಾರಣೆ ನಡೆಸಿ ಆರೋಪಿ ವಿರುದ್ದ ಆರೋಪ ಸಾಬೀತಾದ ಕಾರಣ ದಿನಾಂಕ-05.01.2022 ರಂದು ಸದರಿ ಆರೋಪಿಗೆ 03 ವರ್ಷ ಜೈಲು ವಾಸ ಮತ್ತು ಒಂದು ಲಕ್ಷ ರೂ ದಂಡ ವಿಧಿಸಿ ಆದೇಶ ಹೊರಡಿಸಿರುತ್ತದೆ.
ಸದರಿ ಪ್ರಕರಣದಲ್ಲಿ ಲೋಕಾಯುಕ್ತ ಸಂಸ್ಥೆಯ ಪರವಾಗಿ ರಾಮನಗರ ಲೋಕಾಯುಕ್ತ ವಿಶೇಷ ಅಭಿಯೋಜಕರಾದ ಬಿ.ಸಿ ವೆಂಕಟೇಶ್ ರವರು ನ್ಯಾಯಾಲಯದಲ್ಲಿ ವಾದವನ್ನು ಮಂಡಿಸಿರುತ್ತಾರೆ. ರಾಮನಗರ ಲೋಕಾಯುಕ್ತ ಸಂಸ್ಥೆಯ ಪೊಲೀಸ್ ಉಪಾಧೀಕ್ಷಕರಾದ ಎಂ.ಆರ್ ಗೌತಮ್ ರವರು ಸದರಿ ಪ್ರಕರಣದ ಉಸ್ತುವಾರಿಯನ್ನು ನೋಡಿಕೊಂಡಿರುತ್ತಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು