Tel: 7676775624 | Mail: info@yellowandred.in

Language: EN KAN

    Follow us :


ದಲಿತರು ಕಾಂಗ್ರೆಸ್ ಬಿಡಲ್ಲಾ ಕಾಂಗ್ರೆಸ್ ಪಕ್ಷದ ದಲಿತ ಮುಖಂಡರು

Posted date: 17 May, 2022

Powered by:     Yellow and Red

ದಲಿತರು ಕಾಂಗ್ರೆಸ್ ಬಿಡಲ್ಲಾ ಕಾಂಗ್ರೆಸ್ ಪಕ್ಷದ ದಲಿತ ಮುಖಂಡರು

ಕಾಂಗ್ರೆಸ್ ಸೇರಿದಂತೆ ಅನ್ಯ ಪಕ್ಷಗಳಲ್ಲಿ ಇರುವ ಯಾವುದೇ ದಲಿತ ಮುಖಂಡರು ಯೋಗೇಶ್ವರ್ ಅಥವಾ ಬಿಜೆಪಿ ಪಕ್ಷದ ಕಡೆ ಹೆಜ್ಜೆ ಹಾಕುವುದಿಲ್ಲಾ. ಆಯಾಯ ಪಕ್ಷದಲ್ಲಿ ಅವರದ್ದೇ ಆದ ಸ್ಥಾನಮಾನಗಳಿವೆ, ಗೌರವಗಳಿವೆ, ಯಾರೋ ಒಬ್ಬರು ಹೇಳಿದಾಕ್ಷಣ ಬಿಜೆಪಿ ಪಕ್ಷದ ಕಡೆ ಯಾರು ಹೋಗಲ್ಲಾ. ಪಕ್ಷ ತೊರೆದು ಹೋಗುವವರು ಅವರಷ್ಟೇ ಹೋಗಬೇಕೆ ವಿನಹ ಸಮುದಾಯದ ದಿಕ್ಕು ತಪ್ಪಿಸಬಾರದು. ಅವರೊಬ್ಬರ ಹಿತಾಸಕ್ತಿಗಾಗಿ ದಲಿತರೆಲ್ಲರ ನಡಿಗೆ ಯೋಗೇಶ್ವರ್ ಕಡೆಗೆ ಎಂದು ಹೇಳಿದವರು ದಲಿತರೆಲ್ಲರ ಕ್ಷಮೆ ಯಾಚಿಸಬೇಕೆಂದು ತಾಲ್ಲೂಕು ಕಾಂಗ್ರೆಸ್ ನ ಹಲವಾರು ದಲಿತ ಮುಖಂಡರು ಆಗ್ರಹಿಸಿದರು.

ಅವರು ಬುಧವಾರ ನಗರದ ಹೊರವಲಯದಲ್ಲಿರುವ ಖಾಸಗಿ ಹೋಟೆಲೊಂದರಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.


*ನಾವು ಕಾಂಗ್ರೆಸ್ ಬಿಟ್ಟು ಹೋಗಲ್ಲಾ ಕೋಟೆ ಸಿದ್ದರಾಮಯ್ಯ*

ದಲಿತರ ನಡೆ ಯೋಗೇಶ್ವರ್ ಕಡೆ ಎಂಬ ಹೇಳಿಕೆ ನೀಡಿರುವುದು ಔಚಿತ್ಯವಲ್ಲ. ನಾವು ಪೂರ್ವದಿಂದಲೂ ಕಾಂಗ್ರೆಸ್ ಅಪ್ಪಿಕೊಂಡು ಬಂದಿದ್ದೇವೆ. ಅರಸು ಮತ್ತು ಸಿದ್ದರಾಮಯ್ಯ ನವರು ಉತ್ತಮ ಆಡಳಿತ ನೀಡಿದ್ದಾರೆ. ಅವರ ಆಡಳಿತ ಸಂದರ್ಭದಲ್ಲಿ ದಲಿತರಿಗೆ ಅಪಾರ ಕೊಡುಗೆ ನೀಡಿದ್ದಾರೆ ಇಂತಹ ಪಕ್ಷವನ್ನು ಬಿಟ್ಟು ಯಾವ ದಲಿತರು ಬೇರೆ ವ್ಯಕ್ತಿ ಅಥವಾ ಪಕ್ಷದ ಜೊತೆ ಹೋಗುತ್ತಿಲ್ಲಾ ಎಂದು ಇತ್ತೀಚಿಗೆ ಹೇಳಿಕೆ ನೀಡಿದ ಅಕ್ಕೂರು ಶೇಖರ್ ವಿರುದ್ಧ ವಾಗ್ದಾಳಿ ನಡೆಸಿದರು.


*ದಲಿತರ ನಡೆ ಯೋಗೇಶ್ವರ್ ಕಡೆ ಎಂದ ವ್ಯಕ್ತಿ ಜೊತೆ ಹೋದವರು ಮೂರು ಮಂದಿ ಮಾತ್ರ*

ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಬಸವರಾಜು ಮಾತನಾಡಿ ಕಾಂಗ್ರೆಸ್ ನಲ್ಲಿ ಅಧಿಕಾರ ಅನುಭವಿಸಿ ಇತ್ತೀಚಿಗೆ ಪಕ್ಷ ತೊರೆದು ಹೋದ ಮಹನೀಯರೊಬ್ಬರು ದಲಿತರ ನಡೆ ಯೋಗೇಶ್ವರ್ ಕಡೆ ಎಂದು ಹೇಳಿಕೆ ನೀಡಿದ್ದಾರೆ. ಅದು ಅವರ ಹತಾಶೆಯನ್ನು ತೋರಿಸುತ್ತದೆ. ಇಂತಹ ಹೇಳಿಕೆ ನೀಡಿ ಪತ್ರಿಕಾಗೋಷ್ಠಿ ನಡೆಸಿದ ಮಹನೀಯರ ಜೊತೆ ಹೋದವರು ಮಾತ್ರ ಮೂರು ಮಂದಿ. ಹಲವಾರು ಮಂದಿಗೆ ಕರೆ ಮಾಡಿ ಗೋಗರೆದಿದ್ದಾರೆ. ಯಾವುದೇ ದಲಿತರು ಶೇಖರ್ ಜೊತೆ ಹೋಗಿಲ್ಲಾ ಹೋಗುವುದಿಲ್ಲಾ ಎಂದು ಸ್ಪಷ್ಟಪಡಿಸಿದರು.


ಕಾಂಗ್ರೆಸ್ ರಾಜ್ಯ ಸಂಚಾಲಕ ಶಿವಾನಂದ ಮಾತನಾಡಿ ಸಂವಿಧಾನ ಕಾಪಾಡುವಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಎಡವಿದೆ. ಅಚ್ಚೇದಿನ ಎಂದು ಹೇಳಿಕೊಂಡ ಪ್ರಧಾನಿಯವರು ದಿನನಿತ್ಯದ ವಸ್ತುಗಳ ಬೆಲೆ ಏರಿಕೆ ಮಾಡಿ ಸಾಮಾನ್ಯ ಜನರನ್ನು ಸಂಕಷ್ಟಕ್ಕೆ ದೂಡಿದ್ದಾರೆ. ಇಂತಹ ಪಕ್ಷದಲ್ಲಿ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿರುವ ಯೋಗೇಶ್ವರ್ ಜೊತೆಯಲ್ಲಿ ಕಾಂಗ್ರೆಸ್ ಪಕ್ಷದ ದಲಿತ ಮುಖಂಡರು ಹೋಗುವುದಿಲ್ಲ. ಹೇಳಿಕೆ ನೀಡಿದ ಶೇಖರ್ ರವರು ತಮ್ಮ ವೈಯುಕ್ತಿಕ ಹಿತಾಸಕ್ತಿಗಾಗಿ ಸಮುದಾಯದ ಮುಖಂಡರನ್ನು ಎಳೆದು ತಂದಿರುವುದು ಸರಿಯಲ್ಲಾ ಎಂದರು.


ಯುವ ಮುಖಂಡ ವೈ ಟಿ ಹಳ್ಳಿ ಶಿವು ಮಾತನಾಡಿ ತಾಲ್ಲೂಕಿನ ದಲಿತರು ಪ್ರಜ್ಞಾವಂತರಿದ್ದು ಯಾರೋ ಒಬ್ಬರು ಹೇಳಿದ ತಕ್ಷಣ ಅವರ ತಾಳಕ್ಕೆ ಕುಣಿಯುವವರಲ್ಲಾ, ಸರಿ-ತಪ್ಪು ವಿಮರ್ಶೆ ಮಾಡುವಂತಹ ಮುಖಂಡರು ಪಕ್ಷದಲ್ಲಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವನ್ನೂ ಅನುಭವಿಸಿ ಅವರ ವೈಯಕ್ತಿಕ ಹಿತಾಸಕ್ತಿಗಾಗಿ ಸಮುದಾಯವನ್ನು ಬಲಿ ಕೊಡುವುದು ಸರಿಯಲ್ಲಾ. ದಲಿತರ ನಡೆ ಯೋಗೇಶ್ವರ್ ಅಥವಾ ಬಿಜೆಪಿ ಕಡೆ ಎಂಬ ಹೇಳಿಕೆ ನೀಡಿರುವವರು ಎಲ್ಲಾ ದಲಿತರ ಕ್ಷಮೆ ಯಾಚಿಸಬೇಕೆಂದರು.


ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಎಂ ವಿ, ವಸಂತಕುಮಾರ್, ಸುರೇಶ್, ಪ್ರತಾಪ್, ಪ್ರಸಾದ್, ಮಂಜು ಮಂಗಳವಾರಪೇಟೆ, ಪ್ರಕಾಶ್, ಪಾಪಣ್ಣ, ಕಿರಣ್, ಸುರೇಶ್, ರಾಜಣ್ಣ, ಮಳೂರು ಕುಮಾರ್, ಟಿ ಸಿದ್ದರಾಜು, ಶಿವು ಸೇರಿದಂತೆ ಮತ್ತಿತರ ಕಾಂಗ್ರೆಸ್ ಮತ್ತು ದಲಿತ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑