ನರೇಗಾ ಯೋಜನೆಯಡಿ ಕಾಯಕ ಬಂಧುಗಳಿಗೆ ತರಬೇತಿ
ಚನ್ನಪಟ್ಟಣ: ಮೇ 23 22., ಇಂದು ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಸೋಗಾಲ ಗ್ರಾಮ ಪಂಚಾಯತಿಯ ಸಂಜೀವಿನಿ ಭವನದಲ್ಲಿ ಇಗ್ಗಲೂರು, ಹಾರೋಕೊಪ್ಪ, ಬಾಣಗಹಳ್ಳಿ, ಸೋಗಾಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಹಕ ಬಂಧುಗಳನ್ನು ಒಗ್ಗೂಡಿಸಿ ಕಾಯಕ ಬಂಧು ತರಬೇತಿಯನ್ನು ಯಶಸ್ವಿಯಾಗಿ ನಡೆಸಲಾಯಿತು.
ಸೋಗಾಲ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳಾದ ಶ್ರೀನಿವಾಸ್ ಮೂತಿ೯ ಹೆಚ್ ಹಾಗೂ ಅಧ್ಯಕ್ಷರಾದ ಶ್ರೀಮತಿ ಸವಿತ ಅವರು ದೀಪ ಬೆಳಗುವ ಮೂಲಕ ಕಾಯಕ ಬಂಧುಗಳ ತರಬೇತಿಗೆ ಚಾಲನೆ ನೀಡಿದರು ಹಾಗೂ ಇದೇ ಸಂದರ್ಭದಲ್ಲಿ ದುಡಿಯೋಣ ಬಾ ಅಭಿಯಾನದ ಮಾಹಿತಿ ನೀಡಲಾಯಿತು.
ತರಬೇತಿಯಲ್ಲಿ 26 ಕಾಯಕ ಬಂಧುಗಳು ಹಾಜರಾಗಿದ್ದು ತಾಂತ್ರಿಕ ಸಹಾಯಕ ಅಭಿಯಂತರರಾದ ಚೈತ್ರ ಕೆ.ಪಿ ಹಾಗೂ ಐಇಸಿ ಸಂಯೋಜಕರಾದ ಭವ್ಯ ಅವರು ತರಬೇತಿ ನೀಡಿದರು.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೊಜನೆಯಡಿ ಕಾಯಕಬಂಧುಗಳ ಪಾತ್ರವೇನು ದಿನದ ಕೂಲಿ 309 ರೂ ಜೊತೆಗೆ 5 ರೂ ಮಹಿಳೆಯರಿಗೆ ಹಾಗೂ 4 ರೂ ಹೆಚ್ಚುವರಿ ಕೂಲಿ ಇರುವುದನ್ನು ತಿಳಿಸಲಾಯಿತು, ಕೆಲಸಕ್ಕಾಗಿ ಉಪಯೋಗಿಸುವ ಹಾರೆ, ಗುದ್ದಲಿ, ಮಂಕರಿ ತಂದಲ್ಲಿ ಪ್ರತಿ ದಿನಕ್ಕೆ ಹೆಚ್ಚುವರಿಯಾಗಿ 10 ರೂ. ಗಳನ್ನು ನೀಡಲಾಗುವುದು. ಉದ್ಯೋಗ ಚೀಟಿಗೆ ಅರ್ಜಿ ಸಲ್ಲಿಸಿದ ಕೂಡಲೇ, ಗ್ರಾಮ ಪಂಚಾಯತಿಯಿಂದ ಉಚಿತವಾಗಿ ಜಾಬ್ ಕಾರ್ಡ್ ನೀಡಲಾಗುವುದು.
ಮಹಿಳೆ ಮತ್ತು ಪುರುಷರಿಗೆ ಸಮಾನ ಕೂಲಿ, ವಾರದ ಕೂಲಿಯನ್ನು 15 ದಿನಗಳ ಒಳಗಾಗಿ ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು, 60 ವರ್ಷ ಮೇಲ್ಪಟ್ಟ ಹಿರಿಯರು ಹಾಗೂ ಅಂಗವೀಕಲರಿಗೆ ಕೆಲಸದಲ್ಲಿ 50 ರಷ್ಟು ರಿಯಾಯಿತಿ ಇರುವ ಮಾಹಿತಿಯನ್ನು ನೀಡಲಾಯಿತು.
ಕಾಯಕ ಬಂಧುಗಳು ಸ್ಥಳಿಯವಾಗಿ ಹೆಚ್ಚು ಒತ್ತುನೀಡಿ ಆದಷ್ಟು ಮಟ್ಟಿಗೆ ನರೇಗಾ ಯೋಜನೆಯಡಿ ಕೆಲಸಗಳು ಗ್ರಾಮದ ವ್ಯಾಪ್ತಿಯ ಜನರ ಮೂಲಕವೇ ನಡೆಯುವಂತೆ ಮಾಡಿ ಗ್ರಾಮದ ಬಡ ಜನರು ಸ್ವಲ್ಪ ಮಟ್ಟಿಗಾದರು ಆರ್ಥಿಕವಾಗಿ ಸಬಲರಾಗುವಂತೆ ಮಾಡಬೇಕು.
ನರೇಗಾ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಮೂಲ ಸೌಕರ್ಯಗಳಾದ ಕುಡಿಯುವ ನೀರಿನ ವ್ಯವಸ್ಥೆ, ನೆರಳಿನ ವ್ಯವಸ್ಥೆ, ಕೆಲಸದ ಸಮಯದಲ್ಲಿ ಕೂಲಿಕಾರರಿಗೆ ಗಾಯಗಳಾದಲ್ಲಿ ಪ್ರಥಮ ಚಿಕಿತ್ಸೆ ಸೌಲಭ್ಯ ಹಾಗೂ ಕೂಲಿಕಾರರ ಆರು ವರ್ಷಕ್ಕೂ ಕಡಿಮೆ ವಯಸ್ಸಿನ ಮಕ್ಕಳು ಕೂಲಿ ಕಾರ್ಮಿಕರೊಂದಿಗೆ ಬಂದಲ್ಲಿ, ಅವರನ್ನು ನೋಡಿಕೊಳ್ಳಲು ಕಾರ್ಮಿಕರ ಪೈಕಿ ಒಬ್ಬರನ್ನು ನೇಮಿಸಿ ದಿನದ ಕೂಲಿಯನ್ನು ಅವರಿಗೆ ನೀಡುವುದು.
ಕೆಲಸಕ್ಕೆ ನಿಯೋಜಿಸಿದ ಗ್ರಾಮದಿಂದ 5 ಕೀ.ಮಿ ಗಿಂತ ಹೆಚ್ಚಿನ ದೂರದಲ್ಲಿ ಸ್ಥಳ ಇದ್ದಲ್ಲಿ ಕೂಲಿಯ ಹಣಕಿಂತ 10 ರಷ್ಟನ್ನು ಹೆಚ್ಚುವರಿಯಾಗಿ ಸಾರಿಗೆ ವೆಚ್ಚ ಬರಿಸಲಾಗುವ ಹಾಗೂ ವಯಕ್ತಿಕ ಹಾಗೂ ಸಮುದಾಯಿಕ ಕಾಮಗಾರಿಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಸೋಗಾಲ ಗ್ರಾಮ ಪಂಚಾಯತಿಯ ಅಧಿಕಾರಿಗಳಾದ ಶ್ರೀನಿವಾಸ್ ಮೂತಿ೯ ಹೆಚ್ ಹಾಗೂ ಅಧ್ಯಕ್ಷರಾದ ಶ್ರೀಮತಿ ಸವಿತ ಅವರು ತಾಂತ್ರಿಕ ಸಹಾಯಕ ಅಭಿಯಂತರರಾದ ಚೈತ್ರ, ಐಇಸಿ ಸಂಯೋಜಕರಾದ ಭವ್ಯ ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿಗಳು, ಗ್ರಾಮ ಕಾಯಕ ಮಿತ್ರರುಗಳಾದ ರಜಿನಿ, ಶೃತಿ, ಕಾವ್ಯ ಹಾಗೂ 26 ಗ್ರಾಮ ಕಾಯಕ ಬಂಧುಗಳು ಹಾಜರಿದ್ದರು.
ಗೋ ರಾ ಶ್ರೀನಿವಾಸ...
ಮೊ;9845856139.
ಪ್ರತಿಕ್ರಿಯೆಗಳು